ಆ್ಯಪ್ನಗರ

ಸಿದ್ದಗಂಗಾ ಮಠದ ಶ್ರೀಗಳ ಪುಣ್ಯಸ್ಮರಣೆ

ರೋಣ : ನಡೆದಾಡುವ ದೇವರೆಂದೇ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿದ ಸಿದ್ದಗಂಗಾ ಶ್ರೀಗಳು ಮಾನವೀಯತೆ ಸಾಕಾರ ಮೂರ್ತಿ ಎಂದು ಮುತ್ತಣ್ಣ ಜಕ್ಕಲಿ ಹೇಳಿದರು.

Vijaya Karnataka 3 Feb 2019, 5:00 am
ರೋಣ : ನಡೆದಾಡುವ ದೇವರೆಂದೇ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿದ ಸಿದ್ದಗಂಗಾ ಶ್ರೀಗಳು ಮಾನವೀಯತೆ ಸಾಕಾರ ಮೂರ್ತಿ ಎಂದು ಮುತ್ತಣ್ಣ ಜಕ್ಕಲಿ ಹೇಳಿದರು.
Vijaya Karnataka Web recipients of the siddaganga math
ಸಿದ್ದಗಂಗಾ ಮಠದ ಶ್ರೀಗಳ ಪುಣ್ಯಸ್ಮರಣೆ


ಅವರು ಪಟ್ಟಣದ ಮುಖ್ಯ ರಸ್ತೆ ಪಕ್ಕದಲ್ಲಿ ಏರ್ಪಡಿಸಿದ್ದ ತುಮಕೂರಿನ ಸಿದ್ದಗಂಗಾ ಮಠದ ಲಿಂ. ಶಿವಕುಮಾರ ಸ್ವಾಮಿಗಳ ಪುಣ್ಯಸ್ಮರಣೆ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅನ್ನಸಂತರ್ಪಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಪೂಜ್ಯರು ಪೀಠಾಧಿಪತಿಯಾದ ನಂತರ ಶಿಕ್ಷ ಣ ಮತ್ತು ತರಬೇತಿಗಾಗಿ ಒಟ್ಟು 132 ಸಂಸ್ಥೆಗಳನ್ನು ಸ್ಥಾಪಿಸಿ, ಬಡವ, ಬಲ್ಲಿದ, ಸ್ಥಿತಿವಂತ ಯಾವುದನ್ನೂ ಲೆಕ್ಕಿಸದೇ ಸರ್ವರಿಗೂ ಸಮಾನ ರೀತಿಯ ಶಿಕ್ಷ ಣ ಕೊಡಿಸಿದರು. ಅವರಲ್ಲಿ ಓದಿದ ಅದೇಷ್ಟೋ ಜನ ಇಂದು ಉನ್ನತ ಹುದ್ದೆಯಲ್ಲಿ ದೇಶ, ವಿದೇಶಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ನರ್ಸರಿಯಿಂದ ಎಂಜನಿಯರಿಂಗ್‌, ಕಲೆ, ವಿಜ್ಞಾನ ಮತ್ತು ನಿರ್ವಹಣೆ ಜತೆಗೆ ವೃತ್ತಿಪರ ತರಬೇತಿಯೂ ಸಹ ಅವರ ಸಂಸ್ಥೆಗಳಲ್ಲಿವೆ. ಸಾಂಪ್ರದಾಯಿಕ ಶಿಕ್ಷ ಣ ನೀಡುವ ಮೂಲಕ ಪರೋಪಕಾರಿ ಜೀವನ ನಡೆಸಿದ ಮಹಾನ್‌ ಸಂತರು ಎಂದರು.

ಈಶ್ವರ ಬಾಳಿಕಾಯಿ ಮಾತನಾಡಿ, ಶಿವಕುಮಾರ ಶ್ರೀಗಳು ಮಠದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಾಗ, ಶ್ರೀಮಠಕ್ಕೆ ಆದಾಯದ ಕೊರತೆ ಸಾಕಷ್ಟಿತ್ತು. ಶ್ರೀಮಠಕ್ಕೆ ಮೀಸಲಿಟ್ಟ ಜಮೀನಿನಲ್ಲಿ ಬೆಳೆದು ವಿದ್ಯಾರ್ಥಿಗಳನ್ನು ಸಲುವಹುವದು ಅಷ್ಟೊಂದು ಸಲೀಸಾದ ಕಾರ್ಯವಾಗಿರಲಿಲ್ಲ. ಶಿಕ್ಷ ಣ ಸಂಸ್ಥೆ ಜತೆಗೆ ಮಠದಲ್ಲಿ ನಡೆಯಬೇಕಾದ ಧಾರ್ಮಿಕ ಕಾರ್ಯಗಳನ್ನು ಚಾಚು ತಪ್ಪದೇ ಮಾಡಿ ಹೆಸರುವಾಸಿಯಾದವರು ಎಂದರು.ಶಿವಪೇಟಿ, ಕಲ್ಯಾಣ ನಗರ, ಸಿದ್ದಾರೂಡ ನಗರದ ಜನತೆ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ