ಆ್ಯಪ್ನಗರ

ನಾಟಕಗಳು ಸಂಸ್ಕೃತಿಯ ಪ್ರತಿಬಿಂಬ: ಬಂಡಿ

ಗಜೇಂದ್ರಗಡ : ಪೌರಾಣಿಕ ನಾಟಕಗಳು ಸಂಸ್ಕೃತಿಯ ಪ್ರತಿಬಿಂಬವಾಗಿವೆ. ಜನಸಾಮಾನ್ಯರು ನಾಟಕದಲ್ಲಿ ಬರುವ ಉತ್ತಮ ಪಾತ್ರಗಳ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಉತ್ತಮ ಎಂದು ಸ್ನೇಹಾ ಮಹಿಳಾ ಮಂಡಳ ಅಧ್ಯಕ್ಷೆ ಸಂಯುಕ್ತಾ ಬಂಡಿ ಹೇಳಿದರು.

Vijaya Karnataka 13 Apr 2019, 5:00 am
ಗಜೇಂದ್ರಗಡ : ಪೌರಾಣಿಕ ನಾಟಕಗಳು ಸಂಸ್ಕೃತಿಯ ಪ್ರತಿಬಿಂಬವಾಗಿವೆ. ಜನಸಾಮಾನ್ಯರು ನಾಟಕದಲ್ಲಿ ಬರುವ ಉತ್ತಮ ಪಾತ್ರಗಳ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಉತ್ತಮ ಎಂದು ಸ್ನೇಹಾ ಮಹಿಳಾ ಮಂಡಳ ಅಧ್ಯಕ್ಷೆ ಸಂಯುಕ್ತಾ ಬಂಡಿ ಹೇಳಿದರು.
Vijaya Karnataka Web GDG-12GJD2
ಗಜೇಂದ್ರಗಡ ಬಳಿಯ ಗೋಗೇರಿ ಗ್ರಾಮ ಶ್ರೀ ಅನ್ನದಾನೇಶ್ವರ ಶಾಖಾ ಮಠದ ಜಾತ್ರೆ ಪ್ರಯುಕ್ತ ಶ್ರೀ ಪಂಚಾಕ್ಷ ರಿ ಗವಾಯಿಗಳ ಮಹಿಳಾ ನಾಟ್ಯ ಸಂಘ ಓಂ ನಮೋ ಗುರು ಪುಟ್ಟರಾಜ ನಾಟಕ ಉದ್ಘಾಟಿಸಿದ ಸ್ನೇಹಾ ಮಹಿಳಾ ಮಂಡಳ ಅಧ್ಯಕ್ಷೆ ಸಂಯುಕ್ತಾ ಬಂಡಿ ಮಾತನಾಡಿದರು.


ಸಮೀಪದ ಗೋಗೇರಿ ಗ್ರಾಮ ಶ್ರೀ ಅನ್ನದಾನೇಶ್ವರ ಶಾಖಾ ಮಠದ ಜಾತ್ರೆ ಪ್ರಯುಕ್ತ ಶ್ರೀ ಪಂಚಾಕ್ಷ ರಿ ಗವಾಯಿಗಳ ಮಹಿಳಾ ನಾಟ್ಯ ಸಂಘ ಕಲಾವಿದರ ಓಂ ನಮೋ ಗುರು ಪುಟ್ಟರಾಜ ನಾಟಕ ಉದ್ಘಾಟಿಸಿ ಮಾತನಾಡಿದರು.

ನಟ ದಿ.ಸುಧೀರ ಪತ್ನಿ ಮಾಲತಿ ಸುಧೀರ ಸ್ಥಾಪಿಸಿದ ಮಹಿಳಾ ನಾಟಕ ಮಂಡಳಿಯಲ್ಲಿ ಪುರುಷ ಪಾತ್ರ ಸೇರಿದಂತೆ ಎಲ್ಲಾ ಪಾತ್ರಗಳನ್ನೂ ಮಹಿಳೆಯರು ಅಭಿನಯಿಸುವ ಮೂಲಕ ರಂಗಭೂಮಿಯಲ್ಲಿ ಮಹಿಳೆ ಪುರುಷನಿಗೆ ಸರಿಸಾಟಿಯಾಗಿ ಸಾಧನೆ ಮಡಿರುವುದು ಶ್ಲಾಘನೀಯ ಎಂದರು.

ಇನ್ನಿರ್‌ವ್ಹಿಲ್‌ ಕ್ಲಬ್‌ ಅಧ್ಯಕ್ಷೆ ಮಂಜುಳಾ ರೇವಡಿ ಮಾತನಾಡಿ, ಮಹಿಳಾ ಕಲಾವಿದೆಯರು ತೊಡಕುಗಳನ್ನು ಎದುರಿಸಿ ಎಲ್ಲ ಪಾತ್ರಗಳನ್ನು ಅದ್ಭುತವಾಗಿ ಅಭಿನಯ ಜತೆಗೆ ವೃತ್ತಿರಂಗ ಭೂಮಿಯಲ್ಲಿ ಮಹಿಳೆಯರ ಸಾಧನೆ ಮಾದರಿಯಾಗಿದೆ. ರಂಗ ಭೂಮಿ ಕಲೆ ಕ್ಷೀಣಿಸುತ್ತಿರುವ ದಿನಗಳಲ್ಲಿ ಪೌರಾಣಿಕ ನಾಟಕಗಳು ಅದರಲ್ಲೂ ವಿಶೇಷವಾಗಿ ಮಹಿಳೆಯರೇ ಎಲ್ಲ ಪಾತ್ರ ಗಳನ್ನು ಮಾಡುತ್ತಿರುವದು ಉತ್ತಮ ಬೆಳವಣಿಗೆ ಎಂದರು.

ಶರಣಮ್ಮ ಮೇಟಿಮಠ, ಶರಣಮ್ಮ ಹಿರೇಮಠ, ಅಕ್ಕಮ್ಮ ಮೂಲಿಮನಿ, ರತ್ನವ್ವ ಪೂಜಾರ, ಪಾರವ್ವ ಹೊರಪೇಟಿ, ಅಶ್ವಿನಿ ಗುಂಡೆ, ಶಿವವ್ವ ಅಂಗಡಿ, ರಮಜಾನಬಿ ಬಾಗವಾನ, ರೇಣವ್ವ ಅಡವಿ, ರೇಣುಕಾ ಗಾರಗಿ, ದುರಗವ್ವ ಮಾದರ, ಬಸವ್ವ ಗಡಿಯಣ್ಣವರ, ಪುಷ್ಪಾ ಕಮ್ಮಾರ, ವಿಜಯಲಕ್ಷ್ಮೀ ಅಂಗಡಿ, ಹುಚ್ಚವ್ವ ಗಾರಗಿ, ಹುಸೇನಬಿ ಬಡಿಗೇರ, ದಿವ್ಯಾ ಅಂಬೋರೆ ಇನ್ನಿತರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ