ಗದಗ : ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ರೋಣ ತಾಲೂಕಿನ ನೆರೆ ಸಂತ್ರಸ್ತರು ಮಂಗಳವಾರ ಸ್ವಗ್ರಾಮಗಳಿಗೆ ತೆರಳಿದರು.
ಗದಗ ಜಿಲ್ಲಾಡಳಿತ ತೋಂಟದಾರ್ಯ ಮಠದ ಸಹಯೋಗದಲ್ಲಿ ಆರಂಭಿಸಿದ್ದ ಪರಿಹಾರ ಕೇಂದ್ರದಲ್ಲಿ ಸುಮಾರು 1350 ಜನ ಆಶ್ರಯ ಪಡೆದಿದ್ದರು. ಮಳೆ ಮತ್ತು ನೆರೆ ಭೀತಿ ತಗ್ಗಿರುವ ಹಿನ್ನೆಲೆಯಲ್ಲಿ ನಿರಾಶ್ರಿತರು ಅಧಿಕಾರಿಗಳಲ್ಲಿ ಸ್ವಗ್ರಾಮಕ್ಕೆ ಹೋಗುವ ಇಚ್ಛೆ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ನಿರಾಶ್ರಿತರ ಜತೆ ಚರ್ಚೆ ನಡೆಸಿದ ನಗರಾಭಿವೃದ್ಧಿ ಕೋಶದ ಅಧಿಕಾರಿ ರುದ್ರೇಶ ಮತ್ತು ತಹಸೀಲ್ದಾರ್ ಶ್ರೀನಿವಾಸಮೂರ್ತಿ, ಸ್ವಗ್ರಾಮಕ್ಕೆ ಹೋಗುವವರ ಮನವಿ ಮೇರೆಗೆ ಐದು ಬಸ್ ವ್ಯವಸ್ಥೆ ಮಾಡಿದರು. ರೋಣ ತಾಲೂಕಿನ ಹೊಳೆಆಲೂರ ಹಾಗೂ ಇನ್ನಿತರ ನೆರೆ ಪೀಡಿತ ಗ್ರಾಮದ ಜನ ಪರಿಹಾರ ಸಾಮಗ್ರಿಗಳ ಸಹಿತ ತಮ್ಮ ಊರುಗಳತ್ತ ಪ್ರಯಾಣ ಬೆಳೆಸಿದರು.
ಕಳೆದ ನಾಲ್ಕೈದು ದಿನಗಳಿಂದ ಜಿಲ್ಲಾಡಳಿತ, ತೋಂಟದಾರ್ಯ ಮಠ, ಅನೇಕ ಸಂಘಟನೆಗಳ ಸದಸ್ಯರು, ದಾನಿಗಳು ನೀಡಿದ ನೆರವು ಸ್ಮರಿಸಿದ ನಿರಾಶ್ರಿತರು, ಭಾರವಾದ ಮನಸ್ಸಿನಿಂದ ಕಲ್ಯಾಣ ಕೇಂದ್ರದ ಹೊರಗೆ ನಿಲ್ಲಿಸಿದ್ದ ಬಸ್ ಏರಿದರು.
ಇನ್ನು ಕೆಲವರು ಮಳೆ, ನೆರೆಯಿಂದ ಮನೆಗಳು ಸಂಪೂರ್ಣ ಹಾಳಾಗಿವೆ. ಗ್ರಾಮದಲ್ಲಿ ಕೆಸರು ತುಂಬಿಕೊಂಡಿದೆ. ವಿಷ ಜಂತುಗಳು ಸೇರಿಕೊಂಡಿವೆ. ಹೀಗಾಗಿ ಮನೆ ದುರಸ್ತಿಗೆ ಸರಕಾರ ಅನುದಾನ ನೀಡುವವರೆಗೂ ನಾವು ಗ್ರಾಮಗಳಿಗೆ ತೆರಳುವುದಿಲ್ಲ ಎಂದು ಪಟ್ಟು ಹಿಡಿದು ಪರಿಹಾರ ಕೇಂದ್ರದಲ್ಲಿ ಉಳಿದುಕೊಂಡರು.
ಗದಗ ಜಿಲ್ಲಾಡಳಿತ ತೋಂಟದಾರ್ಯ ಮಠದ ಸಹಯೋಗದಲ್ಲಿ ಆರಂಭಿಸಿದ್ದ ಪರಿಹಾರ ಕೇಂದ್ರದಲ್ಲಿ ಸುಮಾರು 1350 ಜನ ಆಶ್ರಯ ಪಡೆದಿದ್ದರು. ಮಳೆ ಮತ್ತು ನೆರೆ ಭೀತಿ ತಗ್ಗಿರುವ ಹಿನ್ನೆಲೆಯಲ್ಲಿ ನಿರಾಶ್ರಿತರು ಅಧಿಕಾರಿಗಳಲ್ಲಿ ಸ್ವಗ್ರಾಮಕ್ಕೆ ಹೋಗುವ ಇಚ್ಛೆ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ನಿರಾಶ್ರಿತರ ಜತೆ ಚರ್ಚೆ ನಡೆಸಿದ ನಗರಾಭಿವೃದ್ಧಿ ಕೋಶದ ಅಧಿಕಾರಿ ರುದ್ರೇಶ ಮತ್ತು ತಹಸೀಲ್ದಾರ್ ಶ್ರೀನಿವಾಸಮೂರ್ತಿ, ಸ್ವಗ್ರಾಮಕ್ಕೆ ಹೋಗುವವರ ಮನವಿ ಮೇರೆಗೆ ಐದು ಬಸ್ ವ್ಯವಸ್ಥೆ ಮಾಡಿದರು. ರೋಣ ತಾಲೂಕಿನ ಹೊಳೆಆಲೂರ ಹಾಗೂ ಇನ್ನಿತರ ನೆರೆ ಪೀಡಿತ ಗ್ರಾಮದ ಜನ ಪರಿಹಾರ ಸಾಮಗ್ರಿಗಳ ಸಹಿತ ತಮ್ಮ ಊರುಗಳತ್ತ ಪ್ರಯಾಣ ಬೆಳೆಸಿದರು.
ಕಳೆದ ನಾಲ್ಕೈದು ದಿನಗಳಿಂದ ಜಿಲ್ಲಾಡಳಿತ, ತೋಂಟದಾರ್ಯ ಮಠ, ಅನೇಕ ಸಂಘಟನೆಗಳ ಸದಸ್ಯರು, ದಾನಿಗಳು ನೀಡಿದ ನೆರವು ಸ್ಮರಿಸಿದ ನಿರಾಶ್ರಿತರು, ಭಾರವಾದ ಮನಸ್ಸಿನಿಂದ ಕಲ್ಯಾಣ ಕೇಂದ್ರದ ಹೊರಗೆ ನಿಲ್ಲಿಸಿದ್ದ ಬಸ್ ಏರಿದರು.
ಇನ್ನು ಕೆಲವರು ಮಳೆ, ನೆರೆಯಿಂದ ಮನೆಗಳು ಸಂಪೂರ್ಣ ಹಾಳಾಗಿವೆ. ಗ್ರಾಮದಲ್ಲಿ ಕೆಸರು ತುಂಬಿಕೊಂಡಿದೆ. ವಿಷ ಜಂತುಗಳು ಸೇರಿಕೊಂಡಿವೆ. ಹೀಗಾಗಿ ಮನೆ ದುರಸ್ತಿಗೆ ಸರಕಾರ ಅನುದಾನ ನೀಡುವವರೆಗೂ ನಾವು ಗ್ರಾಮಗಳಿಗೆ ತೆರಳುವುದಿಲ್ಲ ಎಂದು ಪಟ್ಟು ಹಿಡಿದು ಪರಿಹಾರ ಕೇಂದ್ರದಲ್ಲಿ ಉಳಿದುಕೊಂಡರು.