ಆ್ಯಪ್ನಗರ

ಬಾಡಿಗೆ ಹೆಚ್ಚಳ, ಗಾಂಧಿ ಭವನ ಹೈಟೆಕ್‌ ಮಾಡಿ

ಮುಂಡರಗಿ : ಇಲ್ಲಿಯ ಪುರಸಭೆಯಲ್ಲಿ ಪ್ರಸಕ್ತ ವರ್ಷದ ಬಜೆಟ್‌ ತಯಾರಿಸುವ ಸಾರ್ವಜನಿಕರ, ಸದಸ್ಯರ ಪೂರ್ವಭಾವಿ ಸಭೆ ಅಧ್ಯಕ್ಷೆ ಹೇಮಾವತಿ ಅಬ್ಬಿಗೇರಿ ಅಧ್ಯಕ್ಷ ತೆಯಲ್ಲಿ ಮಂಗಳವಾರ ಜರುಗಿತು.

Vijaya Karnataka 13 Feb 2019, 5:00 am
ಮುಂಡರಗಿ : ಇಲ್ಲಿಯ ಪುರಸಭೆಯಲ್ಲಿ ಪ್ರಸಕ್ತ ವರ್ಷದ ಬಜೆಟ್‌ ತಯಾರಿಸುವ ಸಾರ್ವಜನಿಕರ, ಸದಸ್ಯರ ಪೂರ್ವಭಾವಿ ಸಭೆ ಅಧ್ಯಕ್ಷೆ ಹೇಮಾವತಿ ಅಬ್ಬಿಗೇರಿ ಅಧ್ಯಕ್ಷ ತೆಯಲ್ಲಿ ಮಂಗಳವಾರ ಜರುಗಿತು.
Vijaya Karnataka Web GDG-12MDR4 PU BJTT
ಬಜೆಟ್‌ ತಯಾರಿಕೆ ಪೂರ್ವಭಾವಿ ಸಭೆ ಮುಂಡರಗಿ ಪುರಸಭೆಯಲ್ಲಿ ಮಂಗಳವಾರ ನಡೆಯಿತು.


ಪುರಸಭೆ ವ್ಯಾಪ್ತಿಯಲ್ಲಿ ಬರುವ 23 ವಾರ್ಡುಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಹಾಗೂ ಇತರೆ ಕೆಲಸ ಕಾರ್ಯಗಳನ್ನು ಮಾಡುವುದಕ್ಕಾಗಿ ಪುರಸಭೆಯಿಂದ ಬಜೆಟ್‌ ಮಂಡಿಸಲು ಆ ಬಜೆಟ್‌ ಹೇಗಿರಬೇಕು, ಅದರಲ್ಲಿ ಏನೆಲ್ಲ ಇರಬೇಕು ಎನ್ನುವ ಕುರಿತು ಚರ್ಚೆ ನಡೆಯಿತು.

ಸಭೆಯಲ್ಲಿ ಪಟ್ಟಣದ ಹಿರಿಯರು, ವ್ಯಾಪಾರಸ್ಥರು, ವರ್ತಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಆಗಮಿಸಿ ಪೂರಕವಾದ ಸಲಹೆ ಸೂಚನೆ ನೀಡಿದರು.

ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ ಅಧ್ಯಕ್ಷ ಬಸವರಾಜ ನವಲಗುಂದ ಪುರಸಭೆಯ ಹಲವು ಬಾಡಿಗೆ ಮಳಿಗೆಗಳಿದ್ದು, ಅವುಗಳನ್ನು ಅತ್ಯಂತ ಕಡಿಮೆ ಬಾಡಿಗೆಯಲ್ಲಿ ಸಾರ್ವಜನಿಕರಿಗೆ ನೀಡುತ್ತ ಬರಲಾಗುತ್ತಿದೆ. ಆದಾಯ ಹೆಚ್ಚಿಸಲು ಸಾರ್ವಜನಿಕ ಹರಾಜು ಮಾಡುವ ಮೂಲಕ ಕ್ರಮ ಜರುಗಿಸಿಬೇಕು ಎಂದು ಸಲಹೆ ನೀಡಿದರು.

ಕಡಿಮೆ ಬಾಡಿಗೆಗೆ ಪಡೆದರು ಬೇರೆಯವರಿಗೆ ಹೆಚ್ಚು ಹಣಕ್ಕೆ ಬಾಡಿಗೆ ನೀಡುತ್ತ ಬಂದಿದ್ದಾರೆ. ಹೀಗಾಗಿ ಪುರಸಭೆ ಕೆಎಸ್‌ಆರ್‌ಟಿಸಿ ಮಾದರಿಯಲ್ಲಿ ಹೆಚ್ಚಿನ ದರಕ್ಕೆ ಬಾಡಿಗೆ ನೀಡಬೇಕು ಎಂದರು.

ಬಿ.ಬಾಬು ಮಾತನಾಡಿ, ನಾವು ನೀರಿನ ತೆರಿಗೆ ಕೊಡಲೇಬಾರದು, ಕಾರಣ ಕುಡಿಯುವ ನದಿ ನೀರು ಯಾವಾಗೋ ಏನೋ, ಶುದ್ಧ ಕುಡಿಯುವ ನೀರನ್ನು ಮಾತ್ರ ದುಡ್ಡು ಕೊಟ್ಟು ತರುತ್ತಿದ್ದೇವೆ ಹೀಗಾಗಿ ನೀರಿನ ತೆರಿಗೆ ಬೇಡ ಎಂದರು.

ಡಾ.ಎಂ.ಬಿ.ಬೆಳವಟಗಿಮಠ ತೆರಿಗೆ ಯಾವ ರೂಪದಲ್ಲಿ ಎಷ್ಟೆಷ್ಟು ಸಂಗ್ರವಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ನೀಡಲು ಹೇಳಿದರು.

ಮುಂಡರಗಿ ಪುರಸಭೆಯಿಂದ ಪ್ರತಿವರ್ಷ ಪಡೆಯುತ್ತಿರುವ ನೀರಿನ ತೆರಿಗೆ ಹಣ 960 ರೂ. ಸಾರ್ವನಿಕರಿಗೆ ಹೊರೆಯಾಗುತ್ತಿದ್ದು, ಕಡಿಮೆ ಮಾಡುವ ಕುರಿತು ಚರ್ಚಿಸಲಾಯಿತು.

ಇದಕ್ಕೆ ಉತ್ತರಿಸಿ ಮಾತನಾಡಿದ ಮುಖ್ಯಾಧಿಕಾರಿ ಸಿದ್ದಲಿಂಗಪ್ರಭು ಇಬ್ರಂಡಿ, ಜಿಲ್ಲೆಯ 9 ಸ್ಥಳೀಯ ಸಂಸ್ಥೆಗಳಲ್ಲಿ ಮುಂಡರಗಿ ಪುರಸಭೆ ಪಡೆಯುವಷ್ಟು ಕಡಿಮೆ ನೀರಿನ ತೆರಿಗೆಯನ್ನು ಬೇರೆ ಯಾವ ಸಂಸ್ಥೆಗಳು ಪಡೆಯುವುದಿಲ್ಲ. ಪ್ರತಿ ತಿಂಗಳು ನೀರಿನ ಬಿಲ್ಲನ್ನೇ ನಾವು ದೊಡ್ಡ ಮಟ್ಟದಲ್ಲಿ ಕಟ್ಟಬೇಕಾಗಿದೆ ಎಂದರು.

ರೈತ ಸಂಘದ ಮುಖಂಡ ವಿ.ಎಸ್‌.ಘಟ್ಟಿ ಮಾತನಾಡಿ, ತುಂಗಭದ್ರಾ ನದಿಯಲ್ಲಿ ನೀರು ಕಡಿಮೆಯಾಗುತ್ತಿದ್ದು, ನೀರು ನಿಲ್ಲಿಸುವುದಕ್ಕಾಗಿ ಮರಳಿನ ಚೀಲ ಹಾಕಲು ಬಜೆಟ್‌ ನಲ್ಲಿ ಚರ್ಚಿಸಬೇಕು ಎಂದರು.

ತಾಲೂಕು ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ಪುರಸಭೆಯಲ್ಲಿ ನಾವು ಕೇಳಿದಾಗ ಕಂಪ್ಯೂಟರ್‌ ಉತಾರ ಸಿಗುವುದು ಯಾವಾಗ, ಅದಕ್ಕೆ ಬೇಕಾಗುವ ಅನುದಾನ ಬಜೆಟ್‌ನಲ್ಲಿ ತೆಗೆದಿರಿಸಿ ಎಂದರು.

ಪಟ್ಟಣದಲ್ಲಿ ಬಹುದೊಡ್ಡದಾಗಿರುವ ಕನಕರಾಯನ ಗುಡ್ಡವನ್ನು ಪ್ರವಾಸಿತಾಣವಾಗಿ ಮಾಡಿ ಪ್ರತಿ ವಾರದಲ್ಲಿ ಎರುಡು ದಿನ ಸಾರ್ವಜನಿಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಹೋಗುವಂತೆ ಮಾಡಬೇಕು. ಇದರಿಂದ ಪುರಸಭೆಗೆ ಆದಾ ಬರುತ್ತದೆ ಎಂದು ಸಭೆಯಲ್ಲಿ ಸಲಹೆ ನೀಡಲಾಯಿತು.

ಎಚ್‌.ಎಂ.ಕಾತರಕಿ ಮಾತನಾಡಿ, ಪಟ್ಟಣದಲ್ಲಿರುವ ಮೀನು, ಮಾಂಸ ಮಾರಾಟದ ಅಂಗಡಿಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಮನವಿ ಮಾಡಿದರು.

ಪುರಸಭೆ ಬಜೆಟ್‌ ಪೂರ್ವಭಾವಿ ಸಭೆ0åÜÞಗಿದ್ದರೂ ಸಹ ಕೆಲವರು ತಮ್ಮ ವಾರ್ಡುಗಳಲ್ಲಿನ ರಸ್ತೆ, ನೀರು, ವಿದ್ಯುತ್‌ ಸಮಸ್ಯೆಯ ಕುರಿತು ಚರ್ಚಿಸಿದರು. ಈ ಬಗ್ಗೆ ಪ್ರತ್ಯೇಕ ಸಭೆ ಕರೆಯುವದಾಗಿ ಮುಖ್ಯಾಧಿಕಾರಿ ತಿಳಿಸಿದರು.

ಪುರಸಭೆ ಸದಸ್ಯರಾದ ಬಸವರಾಜ ರಾಮೇನಹಳ್ಳಿ, ಬಸವರಾಜ ಗಣಾಚಾರಿ, ನಿವೃತ್ತ ಉಪನ್ಯಾಸಕ ಆರ್‌.ಎಲ್‌.ಪೊಲೀಸ್‌ ಪಾಟೀಲ, ಎಂ.ಜಿ.ಗಚ್ಚಣ್ಣವರ, ವಿ.ಎಫ್‌.ಅಂಗಡಿ, ಗ್ಯಾನಪ್ಪ ಶೀರಿ, ಶರಣಪ್ಪ ಕಲ್ಲೂರ, ಶ್ರೀನಿವಾಸ ಅಬ್ಬಿಗೇರಿ, ಮಂಜುಳಾ ಮೇಟಿ, ಮಂಜುನಾಥ ಮುಧೋಳ ಇತರರು ಉಪಸ್ಥಿತರಿದ್ದರು.

ಕನ್ನಡದಲ್ಲಿ ಮಾಹಿತಿ ಕೊಡಿ :

ಬಜೆಟ್‌ನಲ್ಲಿ ಏನೇನು ಚರ್ಚಿಸಬೇಕು ಯಾವ ಯಾವ ವಿಷಯಗಳ ಮೇಲೆ ಸಲಹೆ ನೀಡಬೇಕು ಎಂಬುದರ ಮಾಹಿತಿಯನ್ನು ಪುರಸಭೆ ಸಿಬ್ಬಂದಿ ಇಂಗ್ಲಿಷನಲ್ಲಿ ಮಾಹಿತಿ ಸಾರ್ವಜನಿಕರಿಗೆ ಒದಗಿಸಿದಾಗ ಪ್ರೊ.ಆರ್‌.ಎಲ್‌.ಪೋಲಿಸಪಾಟೀಲ, ಎಂ.ಜಿ.ಗಚ್ಚಣ್ಣವರ, ಬಿ.ಬಾಬು ಇತರರು ಆಡಳಿತದಲ್ಲಿ ಕನ್ನಡ ಭಾಷ ಇರಬೇಕು ಎಂದಿದೆ. ಪುರಸಭೆಯಲ್ಲಿ ಕನ್ನಡ ಆಡಳಿತ ಇಲ್ಲವೆ ಇಂಗ್ಲಿಷನಲ್ಲಿ ಮಾಹಿತಿ ಒದಗಿಸಿದ್ದೀರಲ್ಲ ಎಂದು ಹೇಳಿ ಕನ್ನಡದಲ್ಲಿ ಮಾಹಿತಿ ಕೊಡಿರಿ ಎಂದು ಹೇಳಿದಾಗ ಕನ್ನಡದಲ್ಲಿ ಮಾಹಿತಿ ಕೊಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ