ಆ್ಯಪ್ನಗರ

ಪರಿಹಾರ ಧನಕ್ಕಾಗಿ ಆಗ್ರಹ

ಮುಂಡರಗಿ: ಕೊರೊನಾ ಮಹಾಮಾರಿಯಿಂದ ಅಡುಗೆ ತಯಾರು ಮಾಡುವ ಸಿಬ್ಬಂದಿಗೆ ಕೆಲಸವಿಲ್ಲದೇ ತೊಂದರೆ ಅನುಭವಿಸುವಂತಾಗಿದೆ. ಈ ಪರಿಸ್ಥಿತಿಯಲ್ಲಿಸರಕಾರ ಅಡುಗೆ ತಯಾರಿಕರಿಗೆ ಏಪ್ರಿಲ್‌, ಮೇ, ಜೂನ್‌ ತಿಂಗಳಿನ ಸಂಭಾವನೆಯನ್ನು ಪರಿಹಾರ ಧನವನ್ನಾಗಿ ಘೋಷಿಸುವಂತೆ ಒತ್ತಾಯಿಸಿ ಮಂಗಳವಾರ ಸಂಜೆ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫಡರೇಶನ್‌ ಮೂಲಕ ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

Vijaya Karnataka 28 May 2020, 5:00 am
ಮುಂಡರಗಿ: ಕೊರೊನಾ ಮಹಾಮಾರಿಯಿಂದ ಅಡುಗೆ ತಯಾರು ಮಾಡುವ ಸಿಬ್ಬಂದಿಗೆ ಕೆಲಸವಿಲ್ಲದೇ ತೊಂದರೆ ಅನುಭವಿಸುವಂತಾಗಿದೆ. ಈ ಪರಿಸ್ಥಿತಿಯಲ್ಲಿಸರಕಾರ ಅಡುಗೆ ತಯಾರಿಕರಿಗೆ ಏಪ್ರಿಲ್‌, ಮೇ, ಜೂನ್‌ ತಿಂಗಳಿನ ಸಂಭಾವನೆಯನ್ನು ಪರಿಹಾರ ಧನವನ್ನಾಗಿ ಘೋಷಿಸುವಂತೆ ಒತ್ತಾಯಿಸಿ ಮಂಗಳವಾರ ಸಂಜೆ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫಡರೇಶನ್‌ ಮೂಲಕ ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
Vijaya Karnataka Web 27MDR2 BISIB_25
ಮುಂಡರಗಿಯಲ್ಲಿಬಿಸಿಯೂಟದ ಅಡುಗೆ ತಯಾರಕ ಮಹಿಳೆಯರಿಗೆ ಮೂರು ತಿಂಗಳ ಸಂಭಾವನೆ ನೀಡುವಂತೆ ಒತ್ತಾಯಿಸಿ ತಹಸೀಲ್ದಾರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.


ರಾಜ್ಯದಲ್ಲಿಬಿಸಿಯೂಟ ಉಪಹಾರ ಯೋಜನೆಯಲ್ಲಿ1.18 ಲಕ್ಷ ಜನ ಮಹಿಳೆಯರು 17 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಸರಕಾರ ಮುಖ್ಯ ಅಡುಗೆ ತಯಾರಿಕರಿಗೆ ಮಾಸಿಕ 2,700 ಹಾಗೂ ಸಹಾಯಕರಿಗೆ 2,600 ಸಂಭಾವನೆ ಪಡೆಯುತ್ತಿದ್ದಾರೆ. ಇದರಲ್ಲಿಕೇಂದ್ರ ಸರಕಾರದ ಪಾಲು 600 ರೂ.ಗಳಿದ್ದು, ಉಳಿದ ಹಣವನ್ನು ರಾಜ್ಯ ಸರಕಾರವೇ ಭರಿಸುತ್ತದೆ. ಅಡುಗೆ ತಯಾರಕರ ಗೌರವ ಸಂಭಾವನೆ ಹೆಚ್ಚಳಕ್ಕಾಗಿ ನಿರಂತರವಾಗಿ ಹೋರಾಟ ನಡೆಸಿದರೂ ನ್ಯಾಯ ಸಿಗದಂತಾಗಿದೆ.

2020ರ ಜನವರಿ ತಿಂಗಳಿನಲ್ಲಿ21, 22 ರಂದು ಎರಡು ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸಿದ ಸಂದರ್ಭದಲ್ಲಿಶಿಕ್ಷಣ ಸಚಿವರು ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ 2020-21ರ ಬಜೆಟ್‌ ನಲ್ಲಿಸಂಭಾವಣೆ ಹೆಚ್ಚಿಸುವ ಭರವಸೆ ನೀಡಿದ್ದರು. ಅದು ಕಾರ್ಯಗತವಾಗದಿರುವುದು ವಿಷಾಧನೀಯ ಎಂದು ಮನವಿಯಲ್ಲಿತಿಳಿಸಿದ್ದಾರೆ.

ಎಐಟಿಯುಸಿ ಗೌರವಾಧ್ಯಕ್ಷ ಬಿ.ಬಾಬು, ಅಧ್ಯಕ್ಷ ಎಂ.ಎಚ್‌.ತಳವಾರ ಅವರು ತಹಸೀಲ್ದಾರ್‌ ವೆಂಕಟೇಶ ನಾಯಕ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಎ.ಎಂ.ಕಾತರಕಿ, ಸುಶೀಲಾ ವಾಲೀಕಾರ, ರೇಣುಕಾ ಹರ್ಲಾಪೂರ, ಸರೋಜಾ ಕಾತರಕಿ, ಮಂಜುಳಾ ಬೆನಕನಾಳ, ಜಾನವ್ವ ಹೊಟ್ಟಿ, ಚೆನ್ನಮ್ಮ ನಾಯಕ, ಅಕ್ಕಮ್ಮ ಜಡಿ, ಗೌರಮ್ಮ ದಂಡೀನ, ನಾಗರತ್ನಾ ವಡ್ಡಟ್ಟಿ, ಮಂಜುಳಾ ಬಾರಕೇರ, ನೂರಜಾನ್‌ ಶಿರಗುಪ್ಪಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ