ಆ್ಯಪ್ನಗರ

ರೈಲ್ವೆ ಗೇಟ್‌ ತೆರವಿಗೆ ಮನವಿ

ಗದಗ : ಲೋಕಸಭೆ ಮತದಾನಕ್ಕಿಂತ ಮೊದಲೇ ಮಲ್ಲಾಪುರ ರೈಲ್ವೆ ಗೇಟ್‌ ನಂ.ಎಲ್‌ಸಿ 31/16ನ್ನು ತೆರವುಗೊಳಿಸಲು ಆಗ್ರಹಿಸಿ ಮಂಗಳವಾರ ರೋಣ ತಾಲೂಕಿನ ಮಲ್ಲಾಪುರ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

Vijaya Karnataka 10 Apr 2019, 5:00 am
ಗದಗ : ಲೋಕಸಭೆ ಮತದಾನಕ್ಕಿಂತ ಮೊದಲೇ ಮಲ್ಲಾಪುರ ರೈಲ್ವೆ ಗೇಟ್‌ ನಂ.ಎಲ್‌ಸಿ 31/16ನ್ನು ತೆರವುಗೊಳಿಸಲು ಆಗ್ರಹಿಸಿ ಮಂಗಳವಾರ ರೋಣ ತಾಲೂಕಿನ ಮಲ್ಲಾಪುರ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
Vijaya Karnataka Web GDG-9RUDRAGOUD15
ಮಲ್ಲಾಪೂರ ರೈಲ್ವೆ ಗೇಟ್‌ ತೆರವುಗೊಳಿಸಲು ಆಗ್ರಹಿಸಿ ರೋಣ ತಾಲೂಕಿನ ಮಲ್ಲಾಪುರ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.


ಈ ಕುರಿತು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮತದಾನ ಬಹಿಷ್ಕಾರ ಮಾಡಲು ತೀರ್ಮಾನಿಸಲಾಗಿದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.

ಮಲ್ಲಾಪೂರದ ಸುಮಾರು 800 ಹೆಕ್ಟೇರ್‌ ಭೂಪ್ರದೇಶ ಕೌಜಗೇರಿ ಗ್ರಾಮದ ಹದ್ದಿನಲ್ಲಿದೆ. ಹೀಗಾಗಿ ಇಲ್ಲಿನ ರೈತರು ಜಮೀನಿಗೆ ಹೋಗಲು ಮಲ್ಲಾಪುರದಿಂದ ಕೌಜಗೇರಿ ಗ್ರಾಮಕ್ಕೆ ರೈಲ್ವೆ ಗೇಟ್‌ ಮುಖಾಂತರ ಹೋಗಿ ಬರುತ್ತಾರೆ . ಇದೇ ಮಾರ್ಗದ ಮಧ್ಯ ರೈಲ್ವೆ ಗೇಟ್‌ ನಂ. 16 ಇದ್ದು ಈ ಗೇಟ್‌ನ್ನು ಸುಮಾರು 2001 ರಿಂದ ಬಂದ್‌ ಮಾಡಿದ್ದಾರೆ.

ರೈಲ್ವೆ ನಿಲ್ದಾಣದ ಹತ್ತಿರದಲ್ಲಿ ಖುಲ್ಲಾ ರೈಲ್ವೆ ಜಾಗದಲ್ಲಿ ಇಲ್ಲಿಯವರೆಗೆ ಅಪಸಾತ್‌ ವಹಿವಾಟ ಮಾಡುತ್ತ ಬಂದಿದ್ದಾರೆ. ಆದರೆ ಸಧ್ಯ ರೈಲ್ವೆ ಜೋಡಿ ಮಾರ್ಗದ ಕಾಮಗಾರಿ ಪ್ರಾರಂಭವಾಗಿರುವುದರಿಂದ ಸದರಿ ವಹಿವಾಟು ರಸ್ತೆಯ ಸಂಪೂರ್ಣ ಮುಚ್ಚಿ ಹೋಗಿರುವುದರಿಂದ ಈ ಎಲ್ಲ ಜಮೀನುಗಳಿಗೆ ಮತ್ತು ಕೌಜಗೇರಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಇಲ್ಲದಂತೆ ಆಗಿದೆ.

ಮುಚ್ಚಿರುವ ರೈಲ್ವೆ ಗೇಟ್‌ ತೆರವುಗೊಳಿಸುವಂತೆ ಆಗ್ರಹಿಸಿ 2004 ರಿಂದ ಸಂಸದರು, ಶಾಸಕರು, ಹುಬ್ಬಳ್ಳಿ ವಿಭಾಗದ ಜನರಲ್‌ ಮ್ಯಾನೇಜರ್‌ಗೆ ಮನವಿ ಸಲ್ಲಿಸಿದರೂ ಯಾರೂ ಸರಿಯಾಗಿ ಸ್ಪಂದಿಸಿಲ್ಲ. ಸಧ್ಯ ಮಳೆಯಾದರೆ ಮಲ್ಲಾಪುರ ಗ್ರಾಮದ ರೈತರಿಗೆ ತಮ್ಮ ಜಮೀನಿಗೆ ಕೃಷಿ ಚಟುವಟಿಕೆ ಮಾಡಲು ರಸ್ತೆ ಇಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡರು.

ಕೂಡಲೇ ಜಿಲ್ಲಾಧಿಕಾರಿ, ಸಂಬಂಧಿಸಿದ ರೈಲ್ವೆ ಇಲಾಖೆಯೊಂದಿಗೆ ಚರ್ಚಿಸಿ ಅಗತ್ಯ ಪರಿಹಾರ ಒದಗಿಸಿಕೊಡು. ಲೋಕಸಭೆ ಮತದಾನಕ್ಕಿಂತ ಮೊದಲೇ ಈ ಗೇಟ್‌ ತೆರವುಗೊಳಿಸದೆ ಹೋದಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಹಾಗೂ ಗ್ರಾಮ ಪ್ರವೇಶಕ್ಕೆ ಅವಕಾಶ ಕೊಡುವುದಿಲ್ಲ ಎಂದು ಮನವಿಯಲ್ಲಿ ಹೇಳಲಾಗಿದೆ.

ಲಿಂಗರಾಜ ಪಾಟೀಲ, ಶಂಕರ ಕಳಿಗೊಣ್ಣವರ, ಮಲ್ಲಿಕಾರ್ಜುನ ದಾನರಡ್ಡಿ, ಬಸವರಾಜ ಉಗಲಾಟ, ಶ್ರೀಶೈಲಪ್ಪ ನರಿಯವರ, ಸುರೇಶ ವತ್ತಟ್ಟಿ, ಶರಣಪ್ಪ ಕರಲೆಕ್ಕನವರ, ಅರ್ಜುನ ಯಂಡಿಗೇರ, ಅಶೋಕ ಉಗಲಾಟ, ರೇಣುಕಗೌಡ್ರ ದಾನಪ್ಪಗೌಡ್ರ, ಹನಮಂತ ಕರಿಯಣ್ಣವರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ