ರಸ್ತೆ, ಹಳ್ಳದ ಒತ್ತುವರಿ ಸರ್ವೆಗೆ ಆಗ್ರಹ
ರೋಣ : ಸವಡಿ ರಸ್ತೆ ಹಾಗೂ ಹಳ್ಳದ ಒತ್ತುವರಿಯನ್ನು ಸರ್ವೆ ಮಾಡಿ, ಹದ್ದು ಗುರುತಿಸಬೇಕು ಎಂದು ತಾಲೂಕಿನ ಜಕ್ಕಲಿ ಗ್ರಾಮದ ರೈತರು ಸೋಮವಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
Vijaya Karnataka 16 Jul 2019, 5:00 am
ರೋಣ : ಸವಡಿ ರಸ್ತೆ ಹಾಗೂ ಹಳ್ಳದ ಒತ್ತುವರಿಯನ್ನು ಸರ್ವೆ ಮಾಡಿ, ಹದ್ದು ಗುರುತಿಸಬೇಕು ಎಂದು ತಾಲೂಕಿನ ಜಕ್ಕಲಿ ಗ್ರಾಮದ ರೈತರು ಸೋಮವಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ತಹಸೀಲ್ದಾರಗೆ ಹಾಗೂ ಜಿಲ್ಲಾಧಿಕಾರಿಗೆ ಸಾಕಷ್ಟು ಬಾರಿ ಮನವಿ ಮಾಡಿದ ಪರಿಣಾಮ ತಾವು ಸರ್ವೆ ಇಲಾಖೆಗೆ ಸೂಚನೆ ನೀಡಿದ್ದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನಿರ್ಲಕ್ಷ ್ಯ ಭಾವನೆ ತಾಳಿದ್ದು, ಈ ರಸ್ತೆಯ ಮೂಲಕ ತಮ್ಮ ಜಮೀನುಗಳಿಗೆ ತೆರಳುವ ನೂರಾರು ರೈತರಿಗೆ, ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ, ತಕ್ಷ ಣವೇ ರಸ್ತೆ ಹಾಗೂ ಒತ್ತುವರಿಯಾದ ಹಳ್ಳದ ಸರ್ವೆ ಮಾಡುವ ಮೂಲಕ ಹದ್ದುಗಳನ್ನು ಗುರುತಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಮಯದಲ್ಲಿ ರೈತ ಮುಖಂಡ ವೀರಪ್ಪ ಮುಗಳಿ ಮಾತನಾಡಿ, ಸಾರ್ವಜನಿಕರಿಗೆ ಒತ್ತುವರಿಯಿಂದ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ತಾಲೂಕಾಡಳಿತ ಮತ್ತು ಜಿಲ್ಲಾಡಳಿತದ ಗಮನ ಸೆಳೆದಿದ್ದು, ಸರ್ವೆ ಇಲಾಖೆಗೆ ಸ್ಪಷ್ಟ ಸೂಚನೆ ನೀಡಿದ್ದರೂ ಸರ್ವೆ ಇಲಾಖೆ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಸರ್ವೆ ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ತಹಸೀಲ್ದಾರರೇ ಬಂದು ಸರ್ವೆ ಮಾಡುತ್ತಾರೆ ಎಂಬ ಹಾರಿಕೆ ಉತ್ತರ ಕೊಡುತ್ತಿದ್ದಾರೆ. ಸಾಕಷ್ಟು ಬಾರಿ ಸರ್ವೆ ಇಲಾಖೆಗೆ ಅಲೆದರೂ ಯಾವುದೇ ಸಕಾರಾತ್ಮಕ ಉತ್ತರ ಬರುತ್ತಿಲ್ಲ. ಹೀಗಾಗಿ ತಾವು ಮುತುವರ್ಜಿ ವಹಿಸಿ ರಸ್ತೆ ಹಾಗೂ ಹಳ್ಳದ ಒತ್ತುವರಿ ತೆರವುಗೊಳಿಸಲು ಸರ್ವೆ ಮಾಡಿ, ಹದ್ದುಗಳನ್ನು ಗುರುತಿಸಲು ತಕ್ಷ ಣವೇ ಸರ್ವೆ ಇಲಾಖೆಗೆ ಮತ್ತೊಮ್ಮೆ ಸೂಚನೆ ನೀಡಬೇಕು ಎಂದರು
ತಹಸೀಲ್ದಾರ ಶರಣಮ್ಮ ಕಾರಿ, ಸರ್ವೆ ಇಲಾಖೆ ಅಧಿಕಾರಿಗೆ ದೂರವಾಣಿ ಮೂಲಕ ಕರೆ ಮಾಡಿ ಕಚೇರಿಗೆ ಬರುವಂತೆ ತಿಳಿಸಿ, ಜಕ್ಕಲಿ ಗ್ರಾಮದ ರಸ್ತೆ ಹಾಗೂ ಹಳ್ಳದ ಒತ್ತುವರಿ ತೆರವುಗೊಳಿಸಲು ಸರ್ವೆ ಮಾಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಿದರೇ ಮೇಲಧಿಕಾರಿಗಳ ಗಮನ ಸೆಳೆಯಲಾಗುವುದು ಎಂದು ಎಚ್ಚರಿಕೆ ನೀಡಿದರು.
ಎಸ್.ಸಿ.ಮೇಟಿ, ಎಚ್.ಎಸ್.ಮೇಟಿ, ಎಮ್.ಎಸ್.ಮುಗಳಿ, ಎಮ್.ಬಿ.ರೇಣುಕಮಠ, ಎಮ್.ಎಲ್.ಶ್ಯಾಶೆಟ್ಟಿ, ಎಮ್.ಎಸ್.ನೀಡಗುಂದಿ, ಎ.ಬಿ.ಬೇನಹಾಳ, ಹೊಸಮನಿ ಸೇರಿದಂತೆ ಅನೇಕರು ಇದ್ದರು.
ತಹಸೀಲ್ದಾರಗೆ ಹಾಗೂ ಜಿಲ್ಲಾಧಿಕಾರಿಗೆ ಸಾಕಷ್ಟು ಬಾರಿ ಮನವಿ ಮಾಡಿದ ಪರಿಣಾಮ ತಾವು ಸರ್ವೆ ಇಲಾಖೆಗೆ ಸೂಚನೆ ನೀಡಿದ್ದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನಿರ್ಲಕ್ಷ ್ಯ ಭಾವನೆ ತಾಳಿದ್ದು, ಈ ರಸ್ತೆಯ ಮೂಲಕ ತಮ್ಮ ಜಮೀನುಗಳಿಗೆ ತೆರಳುವ ನೂರಾರು ರೈತರಿಗೆ, ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ, ತಕ್ಷ ಣವೇ ರಸ್ತೆ ಹಾಗೂ ಒತ್ತುವರಿಯಾದ ಹಳ್ಳದ ಸರ್ವೆ ಮಾಡುವ ಮೂಲಕ ಹದ್ದುಗಳನ್ನು ಗುರುತಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಮಯದಲ್ಲಿ ರೈತ ಮುಖಂಡ ವೀರಪ್ಪ ಮುಗಳಿ ಮಾತನಾಡಿ, ಸಾರ್ವಜನಿಕರಿಗೆ ಒತ್ತುವರಿಯಿಂದ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ತಾಲೂಕಾಡಳಿತ ಮತ್ತು ಜಿಲ್ಲಾಡಳಿತದ ಗಮನ ಸೆಳೆದಿದ್ದು, ಸರ್ವೆ ಇಲಾಖೆಗೆ ಸ್ಪಷ್ಟ ಸೂಚನೆ ನೀಡಿದ್ದರೂ ಸರ್ವೆ ಇಲಾಖೆ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಸರ್ವೆ ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ತಹಸೀಲ್ದಾರರೇ ಬಂದು ಸರ್ವೆ ಮಾಡುತ್ತಾರೆ ಎಂಬ ಹಾರಿಕೆ ಉತ್ತರ ಕೊಡುತ್ತಿದ್ದಾರೆ. ಸಾಕಷ್ಟು ಬಾರಿ ಸರ್ವೆ ಇಲಾಖೆಗೆ ಅಲೆದರೂ ಯಾವುದೇ ಸಕಾರಾತ್ಮಕ ಉತ್ತರ ಬರುತ್ತಿಲ್ಲ. ಹೀಗಾಗಿ ತಾವು ಮುತುವರ್ಜಿ ವಹಿಸಿ ರಸ್ತೆ ಹಾಗೂ ಹಳ್ಳದ ಒತ್ತುವರಿ ತೆರವುಗೊಳಿಸಲು ಸರ್ವೆ ಮಾಡಿ, ಹದ್ದುಗಳನ್ನು ಗುರುತಿಸಲು ತಕ್ಷ ಣವೇ ಸರ್ವೆ ಇಲಾಖೆಗೆ ಮತ್ತೊಮ್ಮೆ ಸೂಚನೆ ನೀಡಬೇಕು ಎಂದರು
ತಹಸೀಲ್ದಾರ ಶರಣಮ್ಮ ಕಾರಿ, ಸರ್ವೆ ಇಲಾಖೆ ಅಧಿಕಾರಿಗೆ ದೂರವಾಣಿ ಮೂಲಕ ಕರೆ ಮಾಡಿ ಕಚೇರಿಗೆ ಬರುವಂತೆ ತಿಳಿಸಿ, ಜಕ್ಕಲಿ ಗ್ರಾಮದ ರಸ್ತೆ ಹಾಗೂ ಹಳ್ಳದ ಒತ್ತುವರಿ ತೆರವುಗೊಳಿಸಲು ಸರ್ವೆ ಮಾಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಿದರೇ ಮೇಲಧಿಕಾರಿಗಳ ಗಮನ ಸೆಳೆಯಲಾಗುವುದು ಎಂದು ಎಚ್ಚರಿಕೆ ನೀಡಿದರು.
ಎಸ್.ಸಿ.ಮೇಟಿ, ಎಚ್.ಎಸ್.ಮೇಟಿ, ಎಮ್.ಎಸ್.ಮುಗಳಿ, ಎಮ್.ಬಿ.ರೇಣುಕಮಠ, ಎಮ್.ಎಲ್.ಶ್ಯಾಶೆಟ್ಟಿ, ಎಮ್.ಎಸ್.ನೀಡಗುಂದಿ, ಎ.ಬಿ.ಬೇನಹಾಳ, ಹೊಸಮನಿ ಸೇರಿದಂತೆ ಅನೇಕರು ಇದ್ದರು.