ಆ್ಯಪ್ನಗರ

ವೇತನಕ್ಕೆ ಆಗ್ರಹಿಸಿ ಸರಕಾರಿ ನೌಕರರ ಮನವಿ

ಮುಂಡರಗಿ: ಎಲ್ಲ ಸರಕಾರಿ ನೌಕರರ ವೇತನ ವಿಳಂಬವಾಗುತ್ತಿದ್ದು, ಶೀಘ್ರವೇ ವೇತನ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ ತಹಸೀಲ್ದಾರ ಡಾ.ವೆಂಕಟೇಶ ನಾಯ್ಕರಿಗೆ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

Vijaya Karnataka 20 Nov 2019, 5:00 am
ಮುಂಡರಗಿ: ಎಲ್ಲ ಸರಕಾರಿ ನೌಕರರ ವೇತನ ವಿಳಂಬವಾಗುತ್ತಿದ್ದು, ಶೀಘ್ರವೇ ವೇತನ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ ತಹಸೀಲ್ದಾರ ಡಾ.ವೆಂಕಟೇಶ ನಾಯ್ಕರಿಗೆ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
Vijaya Karnataka Web request for salaries of government employees
ವೇತನಕ್ಕೆ ಆಗ್ರಹಿಸಿ ಸರಕಾರಿ ನೌಕರರ ಮನವಿ


ನೌಕರರ ಸಂಘದ ಅಧ್ಯಕ್ಷ ಡಾ. ಬಸವರಾಜ ಬಳ್ಳಾರಿ ಮಾತನಾಡಿ, ಸರಕಾರಿ ನೌಕರರ ವೇತನ ಈ ಆರ್ಥಿಕ ವರ್ಷದಲ್ಲಿತುಂಬಾ ವಿಳಂಬವಾಗುತ್ತಿದೆ. ಶಿಕ್ಷಣ ಇಲಾಖೆ ಸೇರಿದಂತೆ ಇತರ ಇಲಾಖೆಗಳ ನೌಕರರ ತಿಂಗಳ ಸಂಬಳ ವಿಳಂಬವಾಗುತ್ತಿದೆ. ಎಲ್ಲಸರಕಾರಿ ನೌಕರರ ವೇತನವನ್ನು 5ನೇ ತಾರಿಖಿನೊಳಗೆ ಮಾಡಬೇಕು. ವಿವಿಧ ಇಲಾಖೆಗಳಲ್ಲಿಕೊರತೆ ಅನುದಾನ ನೀಗಿಸಲು ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸಬೇಕು. ಖಜಾನೆ-2 ಮತ್ತು ಖಜಾನೆ-1ನಲ್ಲಿಆಗುತ್ತಿರುವ ತೊಂದರೆಯನ್ನು ಕೂಡಲೇ ಸರಿಪಡಿಸಲು ಆರ್ಥಿಕ ಇಲಾಖೆಗೆ ಪತ್ರ ಬರೆಯಬೇಕು ಎಂದು ಆಗ್ರಹಿಸಿದರು.

ತಹಸೀಲ್ದಾರ ಡಾ.ವೆಂಕಟೇಶ ನಾಯ್ಕ ಮನವಿ ಸ್ವೀಕರಿಸಿ, ಜಿಲ್ಲಾಧಿಕಾರಿ ಜತೆಯಲ್ಲಿನೌಕರರ ವೇತನ ಮತ್ತು ಕೊರತೆ ಬೀಳಲಿರುವ ಅನುದಾನದ ಪ್ರಸ್ತಾವನೆ ಸಲ್ಲಿಸುವ ಕುರಿತು ಚರ್ಚೆ ಮಾಡಲಾಗಿದೆ. ವೇತನದಲ್ಲಿಆಗುತ್ತಿರುವ ವಿಳಂಬದ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಲಾಗುವುದು ಎಂದರು.

ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎನ್‌.ಚಳ್ಳಮರದ, ಮಂಜುನಾಥ ಕಿಲಬನವರ, ಉಮೇಶ ಸಜ್ಜನ, ಎಸ್‌.ಎನ್‌.ಡೋಣಿ, ಎ.ಡಿ.ಬಂಡಿ, ವಿಶ್ವನಾಥ ಉಳ್ಳಾಗಡ್ಡಿ, ಎಫ್‌.ಎಂ.ಛಲವಾದಿ, ಮಹಾಂತೇಶ ಖೋತ, ಮಹ್ಮದರಫೀ, ನಾಗರಾಜ ಹಳ್ಳಿಕೇರಿ, ಎಚ್‌.ಎಸ್‌.ಇಮ್ರಾಪೂರ, ಎಂ.ಎಫ್‌.ಕಲಕಂಬಿ, ಎಸ್‌.ಎಸ್‌.ಸರ್ವದೆ, ಎಲ್‌.ಆರ್‌.ನಾಯಕ, ಕೆ.ಐ.ಕುಷ್ಟಗಿ, ವೈ.ಎಚ್‌.ರಜಪೂತ, ಎಂ.ವೀರೇಶ, ಸಂತೋಷ, ಎಂ.ಎ.ಯರಗುಡಿ, ಎಂ.ಎಚ್‌.ಪೂಜಾರ, ಎನ್‌.ಎಂ.ಬಡಿಗೇರ, ಕುಮಾರ,ಶರಣು ಗಿರಣಿ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ