ಆ್ಯಪ್ನಗರ

ಸುರಕ್ಷತೆ,ವಿಮೆ ನೀಡಲು ಮನವಿ

ವಿಕ ಸುದ್ದಿಲೋಕ ರೋಣ ಕೊರೊನಾ ಹೆಚ್ಚುತ್ತಿದ್ದು ಪ್ರಮುಖವಾಗಿ ಸುರಕ್ಷತಾ ಸಾಮಗ್ರಿಗಳ ಕೊರತೆಯಿಂದ ಮುಂಚೂಣಿಯಲ್ಲಿರುವ ಕಾರ್ಮಿಕರಿಗೆ ಸೋಂಕು ತಗುಲಿ ಅಪಾಯ ಹೆಚ್ಚಾಗುತ್ತಿದೆ...

Vijaya Karnataka 26 May 2020, 5:00 am
ರೋಣ : ಕೊರೊನಾ ಹೆಚ್ಚುತ್ತಿದ್ದು ಪ್ರಮುಖವಾಗಿ ಸುರಕ್ಷತಾ ಸಾಮಗ್ರಿಗಳ ಕೊರತೆಯಿಂದ ಮುಂಚೂಣಿಯಲ್ಲಿರುವ ಕಾರ್ಮಿಕರಿಗೆ ಸೋಂಕು ತಗುಲಿ ಅಪಾಯ ಹೆಚ್ಚಾಗುತ್ತಿದೆ.ಅಂತವರಿಗೆ ಹೂವು ನೀಡಿ ಸಮಾಧಾನ ಮಾಡುವ ಬದಲು ಜೀವನ ಪಣವಾಗಿಟ್ಟು ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್ಗೆ ಸುರಕ್ಷತೆ ಹಾಗೂ ವಿಮೆ ನೀಡಬೇಕು ಎಂದು ಸಿಐಟಿಯು ಜಿಲ್ಲಾಪ್ರಧಾನ ಕಾರ್ಯದರ್ಶಿ ಮಾರುತಿ ಚಿಟಗಿ ಆಗ್ರಹಿಸಿದರು
Vijaya Karnataka Web request for security insurance
ಸುರಕ್ಷತೆ,ವಿಮೆ ನೀಡಲು ಮನವಿ


ಅವರು ಸಿಐಟಿಯು ಸಂಘಟನೆ ಮೂಲಕ ತಹಸೀಲ್ದಾರಗೆ ಮನವಿ ಸಲ್ಲಿಸಿ ಮಾತನಾಡಿದರು.ಆಸ್ಪತ್ರೆ ಸಿಬ್ಬಂದಿ ಹಾಗೂ ನೈರ್ಮಲ್ಯಕರಣ ಸಿಬ್ಬಂದಿ ಅತೀ ಹೆಚ್ಚಿನ ಸಂಖ್ಯೆಯಲ್ಲಿಈ ಸೋಂಕು ಪೀಡಿತರಾಗುತ್ತಿದ್ದಾರೆ. ಇದರಿಂದ ಹಲವು ಆಸ್ಪತ್ರೆ ಮುಚ್ಚಲಾಗಿದೆ. ಯೋಜನಾ ಕಾರ್ಮಿಕರು ಅತ್ಯಂತ ಹೀನಾಯ ಸ್ಥಿತಿಯಲ್ಲಿಬಳಲುತ್ತಿದ್ದಾರೆ. ವೇತನದ ಪ್ರಶ್ನೆ ಬಂದಾಗ ಅವರನ್ನು ಸ್ವಯಂಸೇವಕರು ಎಂದು ಬಳಸಿಕೊಳ್ಳಲಾಗುತ್ತಿದೆ. ಸುಮಾರು 10 ಲಕ್ಷ ಆಶಾ ಕಾರ್ಯಕರ್ತೆಯರು ಸಮೀಕ್ಷೆಗೆ ಹೋಗುತ್ತಾರೆ. ಇಂತವರು ಈ ಕಾಯಿಲೆಗೆ ಬಲಿಯಾಗುವ ಸಾಧ್ಯತೆ ಹೆಚ್ಚು.ಸರಕಾರ ಎಚ್ಚೆತ್ತುಕೊಂಡು ಅಂಗನವಾಡಿ,ಆಶಾ ಕಾರ್ಯಕರ್ತೆಯರಿಗೆ ಹಾಗೂ ಆರೋಗ್ಯ ಸಿಬ್ಬಂದಿಗೆ ಯೋಗ್ಯ ಸುರಕ್ಷತೆ ನೀಡಬೇಕು ಎಂದು ಒತ್ತಾಯಿಸಿದರು

ಸಿಐಟಿಯು ಮುಖಂಡೆ ಶೋಭಾ ಭಜಂತ್ರಿ ಮಾತನಾಡಿದರು.ಶಾರದಾ ಸುಂಕದ, ರತ್ನಾ ಹುಲ್ಲೂರ, ಚಂದ್ರಕಲಾ ಕಬರಳ್ಳಿ,ವೀರನಗೌಡ ಪಾಟೀಲ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ