ಆ್ಯಪ್ನಗರ

ನಿವೇಶನ, ಧನಸಹಾಯಕ್ಕೆ ಆಗ್ರಹ

ಗದಗ: ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಅಧಿಕಾರಿಗಳ ಜತೆ ಚರ್ಚಿಸಿ ಸುಮಾರು 135 ಪೌರ ಕಾರ್ಮಿಕರಿಗೆ ನಿವೇಶನ ನೀಡಿ ಗೃಹಭಾಗ್ಯ ಯೋಜನೆಯಲ್ಲಿಮನೆ ನಿರ್ಮಾಣ ಮಾಡಿಕೊಳ್ಳಲು ಧನ ಸಹಾಯ ನೀಡಲು ಆಗ್ರಹಿಸಿ ಪೌರಕಾರ್ಮಿಕರು ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

Vijaya Karnataka 29 Dec 2019, 5:00 am
ಗದಗ: ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಅಧಿಕಾರಿಗಳ ಜತೆ ಚರ್ಚಿಸಿ ಸುಮಾರು 135 ಪೌರ ಕಾರ್ಮಿಕರಿಗೆ ನಿವೇಶನ ನೀಡಿ ಗೃಹಭಾಗ್ಯ ಯೋಜನೆಯಲ್ಲಿಮನೆ ನಿರ್ಮಾಣ ಮಾಡಿಕೊಳ್ಳಲು ಧನ ಸಹಾಯ ನೀಡಲು ಆಗ್ರಹಿಸಿ ಪೌರಕಾರ್ಮಿಕರು ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
Vijaya Karnataka Web request for shelter donation
ನಿವೇಶನ, ಧನಸಹಾಯಕ್ಕೆ ಆಗ್ರಹ


ಕರ್ನಾಟಕ ಸರಕಾರ ಪೌರ ಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ 2ಜಿ ಅಪಾರ್ಟಮೆಂಟ್‌ ನಿರ್ಮಾಣಕ್ಕೆ ಮಂಜೂರಾತಿ ನೀಡಿದೆ. ಪೌರಕಾರ್ಮಿಕರಿಗೆ ಸರಕಾರದ 6 ಎಕರೆ ಜಾಗದಲ್ಲಿಪ್ರತ್ಯೇಕವಾಗಿ ನೆಲಮನೆ ಕಟ್ಟಲು ಕೇಂದ್ರ ಸಪಾಯಿ ಕರ್ಮಚಾರಿ ಆಯೋಗದೊಂದಿಗೆ ಸದಸ್ಯ ಜಗದೀಶ ಹಿರೇಮನಿಯವರೊಂದಿಗೆ ಗದಗ-ಬೆಟಗೇರಿ ನಗರಸಭೆ ಯೋಜನಾ ನಿರ್ದೇಶಕರು ಹಾಗೂ ಪೌರಾಯುಕ್ತರು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು, ಸಂಘದ ಜಿಲ್ಲಾಧ್ಯಕ್ಷರು ಹಾಗೂ ಪೌರಕಾರ್ಮಿಕರೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬರಬೇಕು. ಕೌಟುಂಬಿಕ ಜತೆಗೆ ಕುರಿ, ಆಡು, ಆಕಳು ಮತ್ತು ಕೋಳಿ ಕೃಷಿ ಅಥವಾ ಕೃಷಿ ಚಟುವಟಿಕೆಗಳಲ್ಲಿಹಾಗೂ ಗುಡಿ ಕೈಗಾರಿಕೆ ಸ್ವಯಂ ಉದ್ಯೋಗವನ್ನು ತಲೆ ತಲಾಂತರಿಂದ ಪೌರ ಕಾರ್ಮಿಕರು ಸಾಗಿಸುತ್ತ ಬಂದಿರುತ್ತಾರೆ. ಕಾರಣ ಪ್ರತ್ಯೇಕವಾಗಿ ನೀಲನಕ್ಷೆಯ ಜತೆಗೆ ಪ್ರತ್ಯೇಕ ಪೌರಕಾರ್ಮಿಕರಿಗೆ ನಿವೇಶನ ನೀಡಬೇಕು. ಕೂಡಲೇ 135 ಪೌರ ಕಾರ್ಮಿಕರಿಗೆ ನಿವೇಶನ ನೀಡಿ ಮನೆ ನಿರ್ಮಾಣ ಮಾಡಿಕೊಳ್ಳಲು ಧನ ಸಹಾಯ ನೀಡಬೇಕೆಂದು ಆಗ್ರಹಿಸಿದರು.

ಸಂಘದ ಅಧ್ಯಕ್ಷ ವೀರುಪಾಕ್ಷಪ್ಪ ರಾಮಗಿರಿ, ಕೆಂಚಪ್ಪ ಪೂಜಾರ, ಸಣ್ಣಪ್ಪ ವಾಸಪ್ಪ, ಶಂಕರ ಶಿವಲಿಂಗಪ್ಪ ಸೋಂಪುರ, ಮೃತ್ಯುಂಜಯ ದೊಡ್ಡಮನಿ, ಶಂಕ್ರವ್ವ ಹರಿಜನ, ನಿಂಗವ್ವ ಹಾದಿಮನಿ, ಚಿನ್ನವ್ವ ದೊಡ್ಡಮನಿ, ಹನುಮವ್ವ ಮುಳಗುಂದ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ