ಆ್ಯಪ್ನಗರ

ಹಲ್ಲೆ ಮಾಡಿದವರನ್ನು ಬಂಧಿಸಲು ಆಗ್ರಹ

ರೋಣ: ಆಸರೆ ಮನೆಗಳ ಹಂಚಿಕೆ ಮತ್ತು ತೆರವು ವಿಚಾರದಲ್ಲಿಸೆ.9 ರಂದು ತಾಲೂಕಿನ ಬಿ.ಎಸ್‌.ಬೇಲೇರಿಯಲ್ಲಿನಡೆದ ದಲಿತರ ಮೇಲೆ ಹಲ್ಲೆಮಾಡಿ ಆರೋಪಿಗಳನ್ನು ಸೆ.12 ರೊಳಗೆ ಎಲ್ಲಆರೋಪಿಗಳನ್ನು ಬಂಧಿಸದಿದ್ದಲ್ಲಿಠಾಣೆ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಾಲೂಕು ಮಾದಿಗ ದಂಡೂರ ಸಮಿತಿ ಪೊಲೀಸ್‌ ಠಾಣೆಗೆತೆರಳಿ, ಸಿಪಿಐ ಮೂಲಕ ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.

Vijaya Karnataka 12 Sep 2019, 5:00 am
ರೋಣ: ಆಸರೆ ಮನೆಗಳ ಹಂಚಿಕೆ ಮತ್ತು ತೆರವು ವಿಚಾರದಲ್ಲಿಸೆ.9 ರಂದು ತಾಲೂಕಿನ ಬಿ.ಎಸ್‌.ಬೇಲೇರಿಯಲ್ಲಿನಡೆದ ದಲಿತರ ಮೇಲೆ ಹಲ್ಲೆಮಾಡಿ ಆರೋಪಿಗಳನ್ನು ಸೆ.12 ರೊಳಗೆ ಎಲ್ಲಆರೋಪಿಗಳನ್ನು ಬಂಧಿಸದಿದ್ದಲ್ಲಿಠಾಣೆ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಾಲೂಕು ಮಾದಿಗ ದಂಡೂರ ಸಮಿತಿ ಪೊಲೀಸ್‌ ಠಾಣೆಗೆತೆರಳಿ, ಸಿಪಿಐ ಮೂಲಕ ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.
Vijaya Karnataka Web request to arrest the assailants
ಹಲ್ಲೆ ಮಾಡಿದವರನ್ನು ಬಂಧಿಸಲು ಆಗ್ರಹ


ತಾಲೂಕು ಮಾದಿಗ ದಂಡೂರ ಸಮಿತಿ ಅಧ್ಯಕ್ಷ ಪ್ರಕಾಶ ಹೊಸಹಳ್ಳಿ ಮಾತನಾಡಿ, ಸೆ. 9 ರಂದು ಸಂಜೆ ಆಸರೆ ಮನೆಗಳನ್ನು ದಲಿತ ಕುಟುಂಬಗಳು ಖಾಲಿ ಮಾಡುವಂತೆ ಒತ್ತಾಯ ಮಾಡಿದ್ದಲ್ಲದೇ, ಹಲ್ಲೆಗಳನ್ನು ಸವರ್ಣಿಯರು ಮಾಡಿದ್ದಾರೆ. ಆರೋಪಿಗಳನ್ನು ಬಂಧಿಸುವಲ್ಲಿಹೊಳೆಆಲೂರ ಮತ್ತು ರೋಣ ಪೊಲೀಸ್‌ ಸಿಬ್ಬಂದಿ ವಿಫಲವಾಗಿದೆ. ಘಟನೆ ನಡೆದು 3 ದಿನವಾದರೂ ಪೊಲೀಸರು ಹಲ್ಲೆಗೊಳಗಾದವರ ಬಗ್ಗೆ ಕಳಕಳಿಯ ಕೆಲಸಗಳು ನಡೆಯುತ್ತಿಲ್ಲಎಂದು ಆರೋಪಿಸಿದರು.

ಬಿ.ಎಸ್‌.ಬೇಲೇರಿ ಗ್ರಾಮದ ದಲಿತರ ಮೇಲೆ ಹಲ್ಲೆನಡೆಸಿದ 21 ಜನರಲ್ಲಿಕೇವಲ ಕಾಟಾಚಾರಕ್ಕೆಂಬಂತೆ 4 ಜನರನ್ನು ಮಾತ್ರ ಬಂಧಿಸಲಾಗಿದೆ. ಇನ್ನುಳಿದವರು ಗ್ರಾಮದಲ್ಲಿರಾಜಾರೋಷವಾಗಿ ಇದ್ದಾರೆ. ಪೊಲೀಸ್‌ ಸಿಬ್ಬಂದಿ ಕಣ್ಣೆದುರಿಗೆ ಇದ್ದರೂ ಬಂಧಿಸುತ್ತಿಲ್ಲಎಂದರೇ ದಲಿತ ಮೇಲಿನ ದೌರ್ಜನ್ಯಕ್ಕೆ ಪೊಲೀಸ್‌ ಇಲಾಖೆ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು.

ಪುರಸಭೆ ಮಾಜಿ ಸದಸ್ಯ ಮಂಜುನಾಥ ಹಾಳಕೇರಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿದೌರ್ಜನ್ಯ, ಅಸ್ೊ್ರಶ್ಯತೆಯಂತೆ ಅಮಾನವೀಯ ಘಟನೆಗಳು ತಾಲೂಕಿನಲ್ಲಿಪದೇ ಪದೇ ನಡೆಯುತ್ತಿದ್ದರೂ, ಇಲಾಖೆ ಗಂಭೀರ ಕ್ರಮ ಕೈಗೊಳ್ಳುತ್ತಿಲ್ಲ. ಬಿ.ಎಸ್‌.ಬೇಲೆರಿ ಗ್ರಾಮದ ಆಸರೆ ಕಾಲೊನಿಯಲ್ಲಿಈ ಹಿಂದೆ 2009 ರಲ್ಲಿನ ಪ್ರವಾಹಕ್ಕೆ ಮನೆ ಕಳೆದುಕೊಂಡ ದಲಿತ ಕುಟುಂಬಗಳು ವಾಸವಾಗಿ 10 ವರ್ಷಗಳಾಗಿದ್ದು, ಈಗ ಕೆಲವರು ಆ ಮನೆಗಳನ್ನು ತೆರವು ಮಾಡಿಸಲು ಮುಂದಾಗಿದ್ದು ಯಾವ ನ್ಯಾಯ, ದಲಿತರಿಗೆ ಪ್ರತ್ಯೇಕ ಕಾಲೊನಿ ಮಾಡಲು ಹೊರಟಿರುವ ಅವರ ಕ್ರಮ ನಾಚಿಕಿಗೇಡಿನ ಸಂಗತಿ ಎಂದು ಮನವಿಯಲ್ಲಿತಿಳಿಸಿದ್ದಾರೆ.

ಮುರಳಿ ಮೇಲಿನಮನಿ, ಬಾಲಪ್ಪ ಮಾದರ, ಬಾಳಪ್ಪ ಬಂಡಿ, ಹನಮಂತ ಪೂಜಾರ, ನಿಂಗಪ್ಪ ಮುಂದಿನಮನಿ, ಮಾರುತಿ ಹಾದಿಮನಿ, ಮಂಜುನಾಥ ಬುರಡಿ, ಸಂಗಪ್ಪ ಹೊಸಮನಿ, ದುರಗೇಶ ಹಿರೇಮನಿ, ಮುತ್ತು ಪೂಜಾರ, ಈಶ್ವರ ಹಲಗಿ, ಪರಸಪ್ಪ ಮಾದರ, ಮಲ್ಲುಮಾದರ, ಈರಪ್ಪ ತೆಗ್ಗಿನಮನಿ, ಮಹಾದೇವಪ್ಪ ಮುಂದಿನಮನಿ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ