ಆ್ಯಪ್ನಗರ

ಬೆಂಬಲ ಬೆಲೆ ಘೋಷಿಸಲು ಆಗ್ರಹ

ಲಕ್ಷ್ಮೇಶ್ವರ : ಹಿಂಗಾರಿ ಹಾಗೂ ಬೇಸಿಗೆಯ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸುವ ಮತ್ತು ಖರೀದಿ ಕೇಂದ್ರ ಸ್ಥಾಪಿಸಿ ರೈತರಿಗೆ ಅನುಕೂಲ ಮಾಡಿ ಕೊಡಬೇಕೆಂದು ಎಂದು ಲಕ್ಷೆತ್ರ್ಮೕಶ್ವರ ತಾಲೂಕು ಸಮಗ್ರ ರೈತ ಹೋರಾಟ ಸಮಿತಿ ಸದಸ್ಯರು ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Vijaya Karnataka 24 Jan 2020, 6:53 pm
ಲಕ್ಷ್ಮೇಶ್ವರ : ಹಿಂಗಾರಿ ಹಾಗೂ ಬೇಸಿಗೆಯ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸುವ ಮತ್ತು ಖರೀದಿ ಕೇಂದ್ರ ಸ್ಥಾಪಿಸಿ ರೈತರಿಗೆ ಅನುಕೂಲ ಮಾಡಿ ಕೊಡಬೇಕೆಂದು ಎಂದು ಲಕ್ಷೆತ್ರ್ಮೕಶ್ವರ ತಾಲೂಕು ಸಮಗ್ರ ರೈತ ಹೋರಾಟ ಸಮಿತಿ ಸದಸ್ಯರು ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
Vijaya Karnataka Web request to declare support price
ಬೆಂಬಲ ಬೆಲೆ ಘೋಷಿಸಲು ಆಗ್ರಹ


ಚಂಬಣ್ಣ ಬಾಳಿಕಾಯಿ, ಸೋಮಣ್ಣ ಮುಳಗುಂದ ಮಾತನಾಡಿ ಸರಕಾರ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನಿಡುತ್ತಿರುವುದು ಸ್ವಾಗತಾರ್ಹವಾಗಿದೆ. ಆದರೆ ಅದು ಅವೈಜ್ಞಾನಿಕ ರೀತಿಯಲ್ಲಿನಡೆಯುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು. ಈಗ ಶೇಂಗಾ ಬೆಳೆಗೆ ಬೆಂಬಲ ಬೆಲೆ ಘೋಷಿಸಿದ್ದು ತುಂಬಾ ತಡವಾಗಿದೆ. ಈ ಮೊದಲೇ ಘೋಸಿಸಿದ್ದರೆ ಎಲ್ಲರೈತರಿಗೂ ನೇರವಾಗಿ ಅದರ ಲಾಭ ಸಿಗುತ್ತಿತ್ತು. ಆದರೆ ರೈತರೆಲ್ಲತಮ್ಮ ಅಡಚಣೆಗಾಗಿ ತಮ್ಮ ಬೆಳೆಗಳನ್ನು ಮಾರಾಟ ಮಾಡಿದ್ದು ರೈತರ ಫಸಲು ಶೇ. 90ರಷ್ಟು ಬೆಳೆ ಮಧ್ಯವರ್ತಿಗಳಿಗೆ ಲಾಭ ಸಿಕ್ಕಂತಾಗಿದೆ. ಎಂಬುದನ್ನು ತಮ್ಮ ಗಮನಕ್ಕೆ ತರಲಾಗಿದೆ. ರೈತರಿಗೆ ಸಹಾಯ ನೀಡಬೇಕೆಂಬ ತಮ್ಮ ಕನಸು ನುಚ್ಚು ನೂರಾಗಿದೆ ಎಂದರು.

ಷಣ್ಮುಖಗೌಡ್ರು ಪಾಟೀಲ್‌, ನಿಂಗಪ್ಪ ಬನ್ನಿ, ಸೋಮನಗೌಡ ಪಾಟೀಲ್‌, ರಾಮಣ್ಣ ಉಳ್ಳಟ್ಟಿ, ಸುರೇಶ ರಾಚನಾಯ್ಕರ್‌, ಎಂ.ಆರ್‌.ಪಾಟೀಲ್‌, ದೇವಿಂದ್ರಪ್ಪ ಉಮಚಗಿ, ಸೋಮಣ್ಣ ಅಣ್ಣಿಗೇರಿ, ನೀಲಪ್ಪ ಕರ್ಜೆಕಣ್ಣವರ, ಶಿವಯೋಗಿ ಅಂಕಲಕೋಟಿ, ಗಂಗಾಧರ ಮೆಣಸಿನಕಾಯಿ, ದುಂಡೇಶ ಕೊಟಗಿ ಮುಂತಾದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ