ಆ್ಯಪ್ನಗರ

ಹೊಸ ಬಸ್‌ ನೀಡಲು ಮನವಿ

ಲಕ್ಷ್ಮೇಶ್ವರ : ವಾಕರಸಾ ಸಂಸ್ಥೆ ಲಕ್ಷ್ಮೇಶ್ವರ ಘಟಕದಲ್ಲಿ 10 ಲಕ್ಷ ಕ್ಕೂ ಹೆಚ್ಚು ಕಿ.ಮೀ. ಓಡಿರುವ ಹಾಗೂ ಹಳೆಯ ಬಸ್‌ಗಳಿದ್ದು, ಇದರಿಂದ ಪ್ರಯಾಣಿಕರಿಗೆ ಸೂಕ್ತವಾದ ಸಾರಿಗೆ ವ್ಯವಸ್ಥೆ ದೊರೆಯುತ್ತಿಲ್ಲ. ಕೂಡಲೇ ಹೊಸ ಬಸ್‌ ನೀಡಬೇಕು ಎಂದು ವ್ಯಾಪಾರಸ್ಥರ ಮಂಡಳಿಯ ಪದಾಧಿಕಾರಿಗಳು ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

Vijaya Karnataka 14 Jun 2019, 5:00 am
ಲಕ್ಷ್ಮೇಶ್ವರ : ವಾಕರಸಾ ಸಂಸ್ಥೆ ಲಕ್ಷ್ಮೇಶ್ವರ ಘಟಕದಲ್ಲಿ 10 ಲಕ್ಷ ಕ್ಕೂ ಹೆಚ್ಚು ಕಿ.ಮೀ. ಓಡಿರುವ ಹಾಗೂ ಹಳೆಯ ಬಸ್‌ಗಳಿದ್ದು, ಇದರಿಂದ ಪ್ರಯಾಣಿಕರಿಗೆ ಸೂಕ್ತವಾದ ಸಾರಿಗೆ ವ್ಯವಸ್ಥೆ ದೊರೆಯುತ್ತಿಲ್ಲ. ಕೂಡಲೇ ಹೊಸ ಬಸ್‌ ನೀಡಬೇಕು ಎಂದು ವ್ಯಾಪಾರಸ್ಥರ ಮಂಡಳಿಯ ಪದಾಧಿಕಾರಿಗಳು ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
Vijaya Karnataka Web request to give a new bus
ಹೊಸ ಬಸ್‌ ನೀಡಲು ಮನವಿ


ಪಟ್ಟಣವು ತಾಲೂಕು ಕೇಂದ್ರ ಹಾಗೂ ಕೇಂದ್ರೀಯ ಸ್ಥಳವಾಗಿರುವುದರಿಂದ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದಿಂದ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರು ವ್ಯಾಪಾರ-ವಹಿವಾಟು, ಶಾಲಾ-ಕಾಲೇಜುಗಳಿಗೆ ವಿದ್ಯಾಭ್ಯಾಸಕ್ಕಾಗಿ ಆಗಮಿಸುತ್ತಾರೆ. ಅವರಿಗೆ ಸೂಕ್ತವಾದ ಸಾರಿಗೆ ವ್ಯವಸ್ಥೆಯಿಲ್ಲ. ಸಂಜೆ ಹುಬ್ಬಳ್ಳಿಯಿಂದ ಆಗಮಿಸುವ ಜನರಿಗೆ ಸರಿಯಾಗಿ ಬಸ್‌ ವ್ಯವಸ್ಥೆ ಇಲ್ಲ. ಘಟಕದಲ್ಲಿರುವ ಅರ್ಧದಷ್ಟೂ ಬಸ್‌ಗಳು ಹಳೆಯದಾಗಿವೆ. ಪ್ರಯಾಣಿಕರು ಆ ಬಸ್‌ಗಳಲ್ಲಿ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ. ಸರಿಯಾದ ಸಮಯಕ್ಕೆ ಬಸ್‌ಗಳು ಹೋಗುವುದಿಲ್ಲ. ಬಸ್‌ಗಳು ಹಳೆಯದಾಗಿರುವುದರಿಂದ ವೇಗವು ಕಡಿಮೆಯಾಗಿದೆ. ಅಲ್ಲದೇ ಆ ಬಸ್‌ಗಳ ದಟ್ಟವಾದ ಹೊಗೆಯಿಂದ ಪರಿಸರ ಹಾನಿಯಾಗುತ್ತಿದೆ. ಪದೇ ಪದೇ ರಸ್ತೆ ಮಧ್ಯದಲ್ಲಿ ಕೆಟ್ಟು ನಿಲ್ಲುತ್ತಿವೆ. ಆದ್ದರಿಂದ ಘಟಕಕ್ಕೆ ಹೊಸ ಬಸ್‌ಗಳನ್ನು ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಲಕ್ಷ್ಮೇಶ್ವರದಿಂದ ಹುಬ್ಬಳ್ಳಿಗೆ ಹೆಚ್ಚಿನ ಬಸ್ಸು ನೀಡಬೇಕು. ಧರ್ಮಸ್ಥಳ, ಪುಣೆ, ಪಣಜಿ, ಬೆಳಗಾವಿ, ಮಂಗಳೂರು, ಹೈದರಾಬಾದ್‌, ಇಚಲಕರಂಜಿ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಬಸ್‌ ಬಿಡಬೇಕು. ಇಲ್ಲವಾದರೆ ಡಿಪೋ ಬಂದ್‌ ಮಾಡಿ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಅಶೋಕ ಬಟಕುರ್ಕಿ, ಮಾಂತೇಶ ಅಂಗಡಿ, ಗುರು ಬಾಳೇಶ್ವರಮಠ, ರಾಮಣ್ಣ ರಿತ್ತಿ, ಮಂಜಣ್ಣ ಸವಣೂರ, ಶಕ್ತಿ ಕತ್ತಿ, ಮಹೇಶ ಹುಲಬಜಾರ ಸೇರಿದಂತೆ ಮುಂತಾದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ