ಆ್ಯಪ್ನಗರ

ಸಾಗುವಳಿ ಹಕ್ಕು ಪತ್ರ ನೀಡಲು ಮನವಿ

ಲಕ್ಷ್ಮೇಶ್ವರ : ಸರಕಾರಿ ಜಮೀನು ಸಾಗುವಳಿ ಮಾಡಿದ ಕುಟುಂಬದ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಬೇಕೆಂದು ತಾಲೂಕಿನ ಬಾಳೆಹೊಸೂರು ಗ್ರಾಮದ ಜನರು ತಹಸೀಲ್ದಾರಗೆ ಮನವಿ ಸಲ್ಲಿಸಿದರು.

Vijaya Karnataka 17 Mar 2020, 5:00 am
ಲಕ್ಷ್ಮೇಶ್ವರ : ಸರಕಾರಿ ಜಮೀನು ಸಾಗುವಳಿ ಮಾಡಿದ ಕುಟುಂಬದ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಬೇಕೆಂದು ತಾಲೂಕಿನ ಬಾಳೆಹೊಸೂರು ಗ್ರಾಮದ ಜನರು ತಹಸೀಲ್ದಾರಗೆ ಮನವಿ ಸಲ್ಲಿಸಿದರು.
Vijaya Karnataka Web request to issue a cultivation claim letter
ಸಾಗುವಳಿ ಹಕ್ಕು ಪತ್ರ ನೀಡಲು ಮನವಿ


ಫಕ್ಕೀರೇಶ ಮ್ಯಾಟಣ್ಣವರ ಮಾತನಾಡಿ, ಬಾಲೆಹೊಸೂರು ಗ್ರಾಮದ ಅರಣ್ಯ ಇಲಾಖೆಗೆ ಸಂಬಂಧಪಡುವ ಬೆಂಚಿಗುಡ್ಡದಲ್ಲಿರುವ ಅರಣ್ಯ ಜಮೀನನ್ನು ಸುಮಾರು 3ರಿಂದ 4 ತಲೆಮಾರುಗಳಿಂದ ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿರುವ 20 ಕುಟುಂಬಗಳ ಮೂಲಾಧಾರವಾಗಿದೆ.ದಲಿತ ಕುಟುಂಬಗಳಿಗೆ ಹಾಗೂ ಬೇರೆ ಬೇರೆ ಜಾತಿಯ ಬಡ ಕುಟುಂಬಗಳಿಗೆ ಭೂ ಒಡೆತನ ಯೋಜನೆ ಆಧಾರ ಮೇಲೆ ಪ್ರತಿ ಕುಟುಂಬಕ್ಕೆ ತಲಾ 2 ಎಕರೆ ಜಮೀನು ಮಂಜೂರ ಮಾಡಿ ಭೂ ರಹಿತ ಕುಟುಂಬಗಳಿಗೆ ಸ್ವಾವಲಂಬನೆ ಬದುಕು ನಡೆಸುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದರು.

ಹನಮಂತಪ್ಪ ಮುದಿಯಮ್ಮನವರ, ಚಂದ್ರಪ್ಪ ಒಂಟಿಪಡಿಯಪ್ಪನವರ, ಮಲ್ಲಪ್ಪ ಬಂಡಿವಡ್ಡರ, ಲಕ್ಷತ್ರ್ಮಪ್ಪ ಮ್ಯಾಟನವರ, ಕರಿಯಪ್ಪ ಮುದಿಯಮ್ಮನವರ, ಮಾರುತಿ ಒಂಟಿಪಡಿಯಪ್ಪನವರ, ನಾಗಪ್ಪ ಒಂಟಿಪಡಿಯಪ್ಪನವರ, ರಾಮಣ್ಣ ಬಂಡಿವಡ್ಡರ, ಲಕ್ಷತ್ರ್ಮಣ ಬಂಡಿವಡ್ಡರ, ಶೇಖಪ್ಪ ಮೇಲಿಮನಿ, ಮಂಜಪ್ಪ ಪಟ್ಟಣಶೆಟ್ಟಿ, ದುರಗಪ್ಪ ಮುಯಮ್ಮನವರ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ