ಆ್ಯಪ್ನಗರ

ಜಾನುವಾರುಗಳಿಗೆ ಲಸಿಕೆ ಹಾಕಿಸಲು ಮನವಿ

ಮುಳಗುಂದ: ಸ್ಥಳೀಯ ಪಶು ಆಸ್ಪತ್ರೆಯಲ್ಲಿಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಕರ್ನಾಟಕ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ನಿ)ದಿಂದ ರಾಷ್ಟ್ರೀಯ ಕಾಲುಬಾಯಿ ರೋಗ ಲಸಿಕೆ ಅಭಿಯಾನ ಕಾರ್ಯಕ್ರಮಕ್ಕೆ ಪಪಂ ಸದಸ್ಯ ಎಸ್‌.ಸಿ.ಬಡ್ನಿ ಗೋವು ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು.

Vijaya Karnataka 22 Oct 2019, 5:00 am
ಮುಳಗುಂದ: ಸ್ಥಳೀಯ ಪಶು ಆಸ್ಪತ್ರೆಯಲ್ಲಿಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಕರ್ನಾಟಕ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ನಿ)ದಿಂದ ರಾಷ್ಟ್ರೀಯ ಕಾಲುಬಾಯಿ ರೋಗ ಲಸಿಕೆ ಅಭಿಯಾನ ಕಾರ್ಯಕ್ರಮಕ್ಕೆ ಪಪಂ ಸದಸ್ಯ ಎಸ್‌.ಸಿ.ಬಡ್ನಿ ಗೋವು ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು.
Vijaya Karnataka Web request to vaccinate livestock
ಜಾನುವಾರುಗಳಿಗೆ ಲಸಿಕೆ ಹಾಕಿಸಲು ಮನವಿ


ನಂತರ ಮಾತನಾಡಿದ ಅವರು, 16ನೇ ಸುತ್ತಿನ ಕಾಲುಬಾಯಿ ರೋಗದ ಲಸಿಕೆ ಇಂದಿನಿಂದ ಆರಂಭವಾಗಿದ್ದು ನ.4 ವರೆಗೆ ನಡೆಯಲಿದೆ.ರೈತರು ದನಕರುಗಳಿಗೆ ಕಾಲುಬಾಯಿ ನಿರೋಧಕ ಲಸಿಕೆ ಹಾಕಿಸುವ ಮೂಲಕ ದನಕರುಗಳ ಸಂಪತ್ತನ್ನು ರಕ್ಷಿಸಿಕೊಳ್ಳಬೇಕು ಎಂದರು.

ಮುಳಗುಂದ ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಡಿ.ಬಿ.ಹಕ್ಕಾಪಕ್ಕಿ ಪಶುಗಳಿಗೆ ಕಾಲುಬಾಯಿ ರೋಗ ನಿರೋಧಕ ಲಸಿಕೆ ಹಾಕಿ ಮಾತನಾಡಿ, ಈ ಕಾಯಿಲೆ ಜಾನುವಾರುಗಳಿಗೆ ಮಾರಕವಾಗಿದ್ದು, ರೈತರು ದನ, ಎಮ್ಮೆ, ಕುರಿ, ಮೇಕೆಗಳಿಗೆ ತಪ್ಪದೆ ವರ್ಷದಲ್ಲಿಎರಡು ಬಾರಿ ಲಸಿಕೆ ಹಾಕಿಸಿ ಜಾನುವಾರುಗಳನ್ನು ರಕ್ಷಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿಡಾ.ಡಿ.ಬಿ.ಹಕ್ಕಾಪಕ್ಕಿ, ಡಾ.ಜಗದೀಶ ಮಟ್ಟಿ, ಡಾ.ಕಿರಣ ಕೊಪ್ಪದ, ಡಾ.ಅರುಣ, ಪ್ರದೀಪ್‌, ಎ.ಎನ್‌.ಚಂದ್ರಗೀರಿ, ರೈತರಾದ ಸೋಮಣ್ಣಾ ಸುಂಕದ, ಮಂಜು ಕಬಾಡೆ, ವಿಜಯ ಹುಲಕೋಟಿ,ಸತೀಶ ಸಿದ್ದನಗೌಡರ, ಇಸ್ಮಾಯಿಲ್‌ ಕಲಕುಟ್ರ, ಬಸವರಾಜ ಕಮಾಜಿ, ಬಸವರಾಜ ಹಕಾರಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ