ಆ್ಯಪ್ನಗರ

ರಸ್ತೆ ದುರಸ್ತಿ: ಪ್ರತಿಭಟನೆ ಎಚ್ಚರಿಕೆ

ಮುಂಡರಗಿ : ತ್ವರಿತಗತಿಯಿಂದ ಬೆಳೆಯುತ್ತಿರುವ ನಗರವಾಗಿದ್ದರಿಂದ ಸಾರಿಗೆ ಸಂಚಾರ ವಿಪರೀತವಾಗಿದ್ದು ಬಸ್‌ ನಿಲ್ದಾಣದ ಎದುರಿನ ರಸ್ತೆ (ಡಿವೈಡರ್‌) ಒಂದು ವರ್ಷದಿಂದ ಯಾವ ರಿಪೇರಿ ಆಗದೆ ಸಂಚಾರಕ್ಕೆ ಅಡೆತಡೆಯಾಗಿದೆ.

Vijaya Karnataka 9 Mar 2019, 5:00 am
ಮುಂಡರಗಿ : ತ್ವರಿತಗತಿಯಿಂದ ಬೆಳೆಯುತ್ತಿರುವ ನಗರವಾಗಿದ್ದರಿಂದ ಸಾರಿಗೆ ಸಂಚಾರ ವಿಪರೀತವಾಗಿದ್ದು ಬಸ್‌ ನಿಲ್ದಾಣದ ಎದುರಿನ ರಸ್ತೆ (ಡಿವೈಡರ್‌) ಒಂದು ವರ್ಷದಿಂದ ಯಾವ ರಿಪೇರಿ ಆಗದೆ ಸಂಚಾರಕ್ಕೆ ಅಡೆತಡೆಯಾಗಿದೆ.
Vijaya Karnataka Web road repair protest warning
ರಸ್ತೆ ದುರಸ್ತಿ: ಪ್ರತಿಭಟನೆ ಎಚ್ಚರಿಕೆ


ಈಗಾಗಲೆ ಜನದಟ್ಟಣೆ ಬಹಳವಾಗಿದ್ದರಿಂದ ಪ್ರತಿದಿನ ಅಪಘಾತಗಳು ಆಗುತ್ತಲಿದ್ದು ಸಾಕಷ್ಟು ಜೀವ ಹಾನಿಗಳಾಗಿವೆ. ಇಷ್ಟಾದರೂ ಸರಕಾರ ಯಾವುದೆ ತಿರ್ಮಾಣ ತೆಗೆದುಕೊಳ್ಳದಿರುವುದು ನೋವಿನ ಸಂಗತಿ. ಕಾರಣ ಅಂಬಾಭವಾನಿ ನಗರ ನಾಗರಿಕ ವೇದಿಕೆ ಮುಂಡರಗಿ ವತಿಯಿಂದ ಸರಕಾರಕ್ಕೆ ವಿನಂತಿಸುವುದೇನಂದರೆ ತಾವು ತಕ್ಷ ಣ ಕ್ರಮ ಕೈಗೊಂಡು ಜನರಿಗಾಗುವ ತೊಂದರೆ ಪರಿಹರಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. ಇಲ್ಲವಾದಲ್ಲಿ ವೇದಿಕೆ ಆಶ್ರಯದಲ್ಲಿ ರಸ್ತೆ ಬಂದ್‌ ಮಾಡಿ ಪ್ರತಿಭಟನೆ ನಡೆಸಲಾಗುವುದೆಂದು ಅಂಬಾಭವಾನಿ ನಗರ ನಾಗರಿಕ ವೇದಿಕೆ ಅಧ್ಯಕ್ಷ ಎಂ.ಜಿ.ಗಚ್ಚಣ್ಣವರ, ಕಾರ್ಯದರ್ಶಿ ಆರ್‌.ಕೆ.ರಾಯನಗೌಡ್ರ, ಆರ್‌.ಎಲ್‌.ಪೋಲೀಸಪಾಟೀಲ, ಜಿ.ಆರ್‌.ಕಲಬುರ್ಗಿ ಮತ್ತು ಎಲ್ಲ ಸದಸ್ಯರು ಎಚ್ಚರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ