ಆ್ಯಪ್ನಗರ

ರೋಣ; ಗ್ರಾಪಂ ಚುನಾವಣೆ ತಾಲೀಮು !

ರೋಣ : ಕೊರೊನಾ ಹಾಗೂ ವರುಣನ ಅರ್ಭಟ ನಡುವೆ ಹಳ್ಳಿಗಳಲ್ಲಿಗ್ರಾಪಂ ಚುನಾವಣೆ ಬಿಸಿ ಹೆಚ್ಚುತ್ತಲಿದೆ. ಚುನಾವಣೆ ವೇಳಾಪಟ್ಟಿ ಇನ್ನು ಘೋಷಣೆ ಆಗಿಲ್ಲ. ಆದರೆ ಈಗಲೇ ರಾಜಕೀಯ ಪಕ್ಷಗಳು ಚುರುಕಾಗಿವೆ. ರಾಜಕಾರಣಿಗಳು ಹಳ್ಳಿಗಳತ್ತ ಮುಖ ಮಾಡಿದ್ದಾರೆ.

Vijaya Karnataka 11 Aug 2020, 5:00 am
ಯಲ್ಲಪ್ಪ ತಳವಾರ
Vijaya Karnataka Web 10 RON 1_25
ಗ್ರಾಪಂ ಕಟ್ಟಡ

ರೋಣ : ಕೊರೊನಾ ಹಾಗೂ ವರುಣನ ಅರ್ಭಟ ನಡುವೆ ಹಳ್ಳಿಗಳಲ್ಲಿಗ್ರಾಪಂ ಚುನಾವಣೆ ಬಿಸಿ ಹೆಚ್ಚುತ್ತಲಿದೆ. ಚುನಾವಣೆ ವೇಳಾಪಟ್ಟಿ ಇನ್ನು ಘೋಷಣೆ ಆಗಿಲ್ಲ. ಆದರೆ ಈಗಲೇ ರಾಜಕೀಯ ಪಕ್ಷಗಳು ಚುರುಕಾಗಿವೆ. ರಾಜಕಾರಣಿಗಳು ಹಳ್ಳಿಗಳತ್ತ ಮುಖ ಮಾಡಿದ್ದಾರೆ.

ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಸಾಕಷ್ಟು ಅನುದಾನ ಗ್ರಾಪಂಗೆ ಹರಿದುಬರುತ್ತಿದೆ. ಈ ವ್ಯವಸ್ಥೆ ಬಳಸಿಕೊಂಡು ಬಲಿಷ್ಠರಾಗಬಹುದು. ಗ್ರಾಪಂ ಮೂಲಕ ಸ್ಥಳೀಯರ ಕೆಲಸ ಮಾಡಿಕೊಟ್ಟು ಮುಂದೆ ಅಧಿಕಾರ ಹಿಡಿಯಬಹುದು ಎಂಬ ಆಸೆ ಹಳ್ಳಿಗಳ ಸಣ್ಣಪುಟ್ಟ ನಾಯಕರಲ್ಲಿಮನೆ ಮಾಡಿದೆ. ಹೀಗಾಗಿ ಗ್ರಾಪಂ ಚುನಾವಣೆ ಮಹತ್ವ ಪಡೆದುಕೊಳ್ಳುತ್ತಿದೆ.

5 ವರ್ಷ ಅಧಿಕಾರದ ಹಂಬಲ:
ಹಿಂದಿನ ಅವಧಿಯಿಂದ ಗ್ರಾಪಂ ಅಧ್ಯಕ್ಷರ ಅಧಿಕಾರವಧಿ 5 ವರ್ಷಕ್ಕೆ ನಿಗದಿಯಾಗಿದೆ. ಹೇಗಾದರೂ ಸರಿ ಅಧ್ಯಕ್ಷರಾದರೆ ಸಾಕು ಎಂಬ ಮಹದಾಸೆಯಿಂದ ಈ ಬಾರಿಯ ಗ್ರಾಪಂ ಚುನಾವಣೆ ಬಿರುಸುಗೊಳ್ಳುತ್ತಿದೆ.

ಈ ಹಿಂದೆ ಅಧ್ಯಕ್ಷ ಸ್ಥಾನಕ್ಕೆ ಆಗಿಹೋದ ಮೀಸಲು ಆಧರಿಸಿ ಮುಂದೆ ತಮ್ಮ ಗ್ರಾಪಂ ಅಧ್ಯಕ್ಷ ಸ್ಥಾನ ಯಾವ ಜಾತಿಗೆ ಮೀಸಲಾಗುತ್ತದೆ ಎಂಬ ಲೆಕ್ಕಾಚಾರ ನಡೆದಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಅನೇಕರು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು ರಾಜಕೀಯ ಚಟುವಟಿಕೆ ಶುರು ಮಾಡಿದ್ದಾರೆ. ಹಲವರು ತಮ್ಮ ರಾಜಕೀಯ ನೇತಾರರ ಹಿಂದೆ ಓಡಾಡುತ್ತಿದ್ದಾರೆ. ಹಳ್ಳಿಗಳಲ್ಲಿಎಲ್ಲಿನೋಡಿದರೂ ಚುನಾವಣೆ ಮಾತುಗಳು ಕೇಳಿಬರುತ್ತಿವೆ.

ಸಮಾರಂಭಕ್ಕೆ ತಪ್ಪದೇ ಹಾಜರ್‌ :
ಗ್ರಾಪಂ ಚುನಾವಣೆ ಆಕಾಂಕ್ಷಿಗಳು ಊರಲ್ಲಿಉಳಿದು ಜನರ ಕಷ್ಟ ಸುಖ ಕೇಳುತ್ತಿದ್ದಾರೆ. ಕೋವಿಡ್‌ ಸಮಯದಲ್ಲೂನಿಗದಿತ ಜನಸಂಖ್ಯೆಯಲ್ಲಿನಡೆಯುವ ಮದುವೆ,ಮುಂಜಿವೆ ಸೇರಿದಂತೆ ನಾನಾ ಕಾರ್ಯಕ್ರಮದಲ್ಲಿಮುಂದಾಳತ್ವ ವಹಿಸಿ ಮತದಾರರ ಹತ್ತಿರ ಹೋಗುತ್ತಿದ್ದಾರೆ. ಯುವಕ,ಯುವತಿ,ಸ್ವಸಹಾಯ ಸಂಘಗಳಿಗೆ ಸಹಾಯ ಹಸ್ತ, ಕೋವಿಡ್‌ನಿಂದ ತೊಂದರೆಯಲ್ಲಿರುವವರಿಗೆ ದವಸ,ಧಾನ್ಯ ವಿತರಣೆ ಮಾಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ