ಆ್ಯಪ್ನಗರ

ಮಳೆ-ಗಾಳಿಗೆ 1.25 ಕೋಟಿ ಹಾನಿ

ಗದಗ : ಬರದ ಮಧ್ಯೆಯೂ ಭರ್ಜರಿ ಬೆಳೆಯ ನೀರಿಕ್ಷೆಯಲ್ಲಿದ್ದ ರೈತರಿಗೆ ಗುರುವಾರ ಸಂಜೆ ಸುರಿದ ಮಳೆ ಶಾಕ್‌ ನೀಡಿದೆ. ತಾಲೂಕಿನ ಹುಲಕೋಟಿ ಹಾಗೂ ಸುತ್ತ ಮುತ್ತಲಿನ ಭಾಗದಲ್ಲಿ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಆರ್ಭಟ ರೈತರ ಬದುಕಲ್ಲಿ ಬಿರುಗಾಳಿ ಎಬ್ಬಿಸಿದೆ. ಸುಮಾರು 70 ಹೆಕ್ಟೇರ್‌ ಪ್ರದೇಶದಷ್ಟು ಮಾವಿನ ತೋಟ, ಕಬ್ಬು, ಗೋಡಂಬಿ, ಬಾಳೆ ತೋಟಗಳು ನಾಶವಾಗಿವೆ. ಒಟ್ಟಾರೆ ತಾಲೂಕಿನಲ್ಲಿ 1.25 ಕೋಟಿ ರೂ. ಹಾನಿಯಾಗಿದೆ.

Vijaya Karnataka 25 May 2019, 5:00 am
ಗದಗ : ಬರದ ಮಧ್ಯೆಯೂ ಭರ್ಜರಿ ಬೆಳೆಯ ನೀರಿಕ್ಷೆಯಲ್ಲಿದ್ದ ರೈತರಿಗೆ ಗುರುವಾರ ಸಂಜೆ ಸುರಿದ ಮಳೆ ಶಾಕ್‌ ನೀಡಿದೆ. ತಾಲೂಕಿನ ಹುಲಕೋಟಿ ಹಾಗೂ ಸುತ್ತ ಮುತ್ತಲಿನ ಭಾಗದಲ್ಲಿ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಆರ್ಭಟ ರೈತರ ಬದುಕಲ್ಲಿ ಬಿರುಗಾಳಿ ಎಬ್ಬಿಸಿದೆ. ಸುಮಾರು 70 ಹೆಕ್ಟೇರ್‌ ಪ್ರದೇಶದಷ್ಟು ಮಾವಿನ ತೋಟ, ಕಬ್ಬು, ಗೋಡಂಬಿ, ಬಾಳೆ ತೋಟಗಳು ನಾಶವಾಗಿವೆ. ಒಟ್ಟಾರೆ ತಾಲೂಕಿನಲ್ಲಿ 1.25 ಕೋಟಿ ರೂ. ಹಾನಿಯಾಗಿದೆ.
Vijaya Karnataka Web GDG-24RUDRAGOUD4K
ಭಾರಿ ಮಳೆಗೆ ಬೇವಿನ ಗಿಡವು ರಸ್ತೆ ಬದಿಯಲ್ಲಿ ಧರೆಗೆ ಉರಿಳಿದ ಪರಿಣಾಮ ಮೇಕೆಗಳು ಅದನ್ನು ದಾಟಿಕೊಂಡು ಹೋಗುತ್ತಿರುವುದು.


ಗುರುವಾರ ಸಾಯಂಕಾಲ ಸುಮಾರಿಗೆ ತುಂತುರು ಮಳೆ ಆರಂಭವಾಗಿ ನಂತರ ಗಾಳಿಯೊಂದಿಗೆ ಆಣೆಕಲ್ಲು ಮಳೆ ಸಹಿತೆ ಜೋರಾಗಿ ಗಾಳಿ ಬೀಸಿದ್ದರಿಂದ ಹುಲಕೋಟಿ, ಶ್ಯಾಗೋಟಿ ಗ್ರಾಮದ ತೋಟಗಳಲ್ಲಿ ಮಾವು, ಚಿಕ್ಕು ಮತ್ತು ಪೇರಲ ಗಿಡಗಳು ನೆಲಕ್ಕುರುಳಿವೆ. ಅದರೊಂದಿಗೆ ಅಪಾರ ಪ್ರಮಾಣದ ಕಾಯಿ, ಹಣ್ಣುಗಳು ನೆಲಕ್ಕೆ ಉದುರಿ ಬಿದ್ದಿವೆ. ಪರಿಣಾಮ ಎಕರೆಗೆ ಸುಮಾರು 1 ಲಕ್ಷ ರೂ. ಬೆಳೆ ಹಾನಿ ಸಂಭವಿಸಿದ್ದು, ರೈತರು ಕಂಗಾಲಾಗಿದ್ದಾರೆ.

ಲಕ್ಷಾಂತರ ರೂ. ಬೆಳೆ ಹಾನಿ:

ತಾಲೂಕಿನ ಶ್ಯಾಗೋಟಿ ಗ್ರಾಮದ ಸುತ್ತಮುತ್ತಲಿನ ಭಾಗದಲ್ಲಿ ಬೆಳೆಯಲಾಗಿದ್ದ ಮಾವು, ಕಬ್ಬು, ಗೋಡಂಬಿ, ಬಾಳೆ ಗಿಡಗಳಿಗೆ ಹೆಚ್ಚಿನ ಹಾನಿಯಾಗಿದೆ. ಮೊದಲೇ ಪ್ರಸಕ್ತ ವರ್ಷ ಇಳುವರಿ ಕಡಿಮೆ ಆಗಿದೆ. ಆದರೆ ಬಂದ ಅಲ್ಪ ಸ್ವಲ್ಪ ಬೆಳೆಗಳು ಮಣ್ಣು ಪಾಲು ಆಗಿವೆ. ಸದ್ಯ ಮಾವು, ಗೋಡಬಿ, ಕಬ್ಬು, ಬಾಳೆ ಗಿಡಗಳೂ ಫಲ ನೀಡುವ ಕಾಲವಿದು. ಮಾವು ಪ್ರತಿ ಎಕರೆಗೆ 15ರಿಂದ 20 ಟನ್‌ ಇಳುವರಿ ಬರಲಿದ್ದು, ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್‌ಗೆ 7ರಿಂದ 8 ಸಾವಿರ ರೂಪಾಯಿ ಧಾರಣೆಯಿದೆ. ಬಾಳೆ ತೋಟವು 50 ಹೆಕ್ಟೇರ್‌ ನಷ್ಟ ಉಂಟಾಗಿದೆ.

ನೂರಕ್ಕೂ ಹೆಚ್ಚು ವಿದ್ಯುತ್‌ ಕಂಬ ಧರೆಗೆ:

ತಾಲೂಕಿನ ಹುಲಕೋಟಿ, ಶ್ಯಾಗೋಟಿ ಗ್ರಾಮದಲ್ಲಿ ಬಾರಿ ಮಳೆಗೆ 113ಕ್ಕೂ ಅಧಿಕ ಬೇವಿನ ಗಿಡ, ಹತ್ತುಕ್ಕೂ ಅಧಿಕ ಸಾಗವಾನಿ ಗಿಡ, ಹತ್ತಕ್ಕೂ ಅಧಿಕ ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ. ಆ ಭಾಗದಲ್ಲಿನ ಸಂಚಾರ ಹಾಗೂ ವಿದ್ಯುತ್‌ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ಜತೆಗೆ ಹೊಲದಲ್ಲಿರುವ ಶೆಡ್‌ನ ತಗಡು, ಪೈಪ್‌ಗಳು ಗಾಳಿ ರಭಸಕ್ಕೆ ಹಾರಿ ಹೋಗಿವೆ. ರೈತರು ಇಡೀ ದಿನ ವಸ್ತುಗಳನ್ನು ಸರಿಯಾಗಿ ಜೋಡಿಸುವುದೇ ಕೆಲಸವಾಗಿದೆ.

ಕೈ ಬಂದ ತುತ್ತು ಬಾಯಿಗೆ ಬರಲಿಲ್ಲ:

ಹುಲಕೋಟಿ, ಶ್ಯಾಗೋಟಿ ಗ್ರಾಮಗಳಲ್ಲಿ ಹೆಚ್ಚಾಗಿ ಮಾವು, ಗೋಡಂಬಿ, ಬಾಳೆ, ಕಬ್ಬು ಬೆಳೆಯಲಾಗುತ್ತದೆ. ಇಲ್ಲಿನ ಮಾವು ಅತ್ಯಂತ ಉತ್ಕೃಷ್ಟ ತಳಿಯಾಗಿದ್ದು, ವಿದೇಶಗಳಿಗೂ ರಫ್ತಾಗುತ್ತದೆ. ಹೀಗಾಗಿ ವರ್ಷವಿಡೀ ತೋಟದ ನಿರ್ವಹಣೆ, ಕಾವಲುಗಾರ ಹಾಗೂ ಕೂಲಿ, ಗಿಡಗಳಿಗೆ ಔಷಧಿಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿ, ಪ್ರತಿ ಗಿಡವನ್ನೂ ಚಿಕ್ಕ ಮಗುವಂತೆ ಜೋಪಾನ ಮಾಡಿದ್ದರು. ಶ್ರಮವಹಿಸಿ ಬೆಳೆಸಿದ ಮಾವು, ಕಬ್ಬು, ಬಾಳೆ, ಗೋಡಂಬಿ ಗಿಡಗಳು ಕಣ್ಣು ಮುಂದೆಯೇ ಧರೆಗುರುಳಿರುವುದನ್ನು ಕಂಡು ಕಣ್ಣೀರಿಡುವಂತಾಯಿತು. ಒಲ್ಲದ ಮನಸ್ಸಿನಿಂದಲೇ ನೆಲದಲ್ಲಿ ಬಿದ್ದಿರುವ ಹಣ್ಣು, ಕಾಯಿಗಳನ್ನು ಎಕ್ಕಿದರು. ಟೊಂಕ ಮುರಿದಂತೆ ಬಿದ್ದಿದ್ದ ಗಿಡಗಳಿಗೆ ಬಂಬು, ಕಟ್ಟಿಗೆಗಳನ್ನು ಆಸರೆ ನೀಡಿ ನಿಲ್ಲಿಸುವಲ್ಲಿ ನಿರತರಾಗಿದ್ದ ದೃಶ್ಯ ಸಾಮಾನ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕೂಡಲೇ ಬೆಳೆ ಹಾನಿ ಬಗ್ಗೆ ಸರಕಾರ ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರ ಒದಗಿಸಬೇಕು ಎಂಬುದು ರೈತರ ಆಗ್ರಹ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ