ಆ್ಯಪ್ನಗರ

ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ಅಗತ್ಯ

ರೋಣ: ಪ್ರತಿಯೊಂದು ಜೀವಿಗಳಲ್ಲೂ ಒಂದೊಂದು ಅದ್ಭುತವಾದ ಮತ್ತು ಅಗಾಧ ಶಕ್ತಿ ಅಡಗಿದೆ. ಅವುಗಳನ್ನು ಪ್ರೋತ್ಸಾಹಿಸಿ ಬೆಳೆಸುವ ಮೂಲಕ ಗ್ರಾಮೀಣ ಕ್ರೀಡೆಯ ಸಂಪತ್ತು ಕಾಪಾಡಬೇಕಾಗಿದೆ. ಅಂತಹವುಗಳಲ್ಲಿ ಟಗರಿನ ಕಾಳಗ ಪ್ರಾಣಿಗಳ ಮೇಲಿನ ಪ್ರೀತಿ ಹೆಚ್ಚಿಸಿ, ನೋಡುಗರಿಗೆ ರೋಮಾಂಚನ ನೀಡುವ ಸ್ಪರ್ಧೆಯಾಗಿದೆ ಎಂದು ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶರಣಪ್ಪ ಕಂಬಳಿ ಹೇಳಿದರು

Vijaya Karnataka 17 May 2019, 5:00 am
ರೋಣ: ಪ್ರತಿಯೊಂದು ಜೀವಿಗಳಲ್ಲೂ ಒಂದೊಂದು ಅದ್ಭುತವಾದ ಮತ್ತು ಅಗಾಧ ಶಕ್ತಿ ಅಡಗಿದೆ. ಅವುಗಳನ್ನು ಪ್ರೋತ್ಸಾಹಿಸಿ ಬೆಳೆಸುವ ಮೂಲಕ ಗ್ರಾಮೀಣ ಕ್ರೀಡೆಯ ಸಂಪತ್ತು ಕಾಪಾಡಬೇಕಾಗಿದೆ. ಅಂತಹವುಗಳಲ್ಲಿ ಟಗರಿನ ಕಾಳಗ ಪ್ರಾಣಿಗಳ ಮೇಲಿನ ಪ್ರೀತಿ ಹೆಚ್ಚಿಸಿ, ನೋಡುಗರಿಗೆ ರೋಮಾಂಚನ ನೀಡುವ ಸ್ಪರ್ಧೆಯಾಗಿದೆ ಎಂದು ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶರಣಪ್ಪ ಕಂಬಳಿ ಹೇಳಿದರು
Vijaya Karnataka Web GDG-15 RON 2,,


ತಾಲೂಕಿನ ಹೊಸಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ಜಾತ್ರೆಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಮಂಡಳದವರು ಆಯೋಜಿಸಿದ್ದ ರಾಜ್ಯಮಟ್ಟದ ಟಗರಿನ ಕಾಳಗ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು

ಟಗರುಗಳನ್ನು ಸ್ಪರ್ಧೆಯಿದ್ದಾಗ ಮಾತ್ರ ಪ್ರೀತಿಸಬಾರದು. ಅವುಗಳ ಅಗಾಧ ಶಕ್ತಿಗೆ ಸತತವಾಗಿ ಪ್ರೋತ್ಸಹಿಸುವಂತಾಗಬೇಕು. ಅವುಗಳಿಗೆ ಉತ್ತಮ ಆಹಾರ,ಲಾಲನೆ, ಪಾಲನೆ ಕೈಕೊಳ್ಳಬೇಕು. ಅವುಗಳ ಜೀವನವು ಮನುಷ್ಯ ಜೀವನದಷ್ಟೆ ಪ್ರಮುಖವಾದದ್ದು. ಪ್ರಾಣಿ, ಪಕ್ಷಿಗಳು ಎಲ್ಲಿ ಕಾಣುತ್ತವೆಯೋ ಅಲ್ಲಿ ಸ್ವರ್ಗ ನಿರ್ಮಾಣವಾಗುತ್ತದೆ ಎಂದರು

ಇಂದಿನ ಆಧುನಿಕ ಭರಾಟೆಗೆ ಸಿಲುಕಿ ಜನತೆಗೆ ಮುದ ನೀಡುತ್ತಿದ್ದ ಪ್ರಾಣಿಗಳ ಸ್ಪರ್ಧೆಗಳು ಮಾಯವಾಗುತ್ತಿರುವುದು ವಿಷಾದದ ಸಂಗತಿ. ಇಂದಿನ ಯುವಕರು ಪೂರ್ವಜರ ಕಾಲದ ಕ್ರೀಡೆಗಳ ಉಳಿವಿಗೆ ಶ್ರಮಿಸಬೇಕಾದದ್ದು ಅವಶ್ಯವಾಗಿದೆ. ಆ ನಿಟ್ಟಿನಲ್ಲಿ ಸಂಘ, ಸಂಸ್ಥೆಗಳು ಕಾರ್ಯೋನ್ಮುಖರಾಗುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.

ಅಧ್ಯಕ್ಷ ತೆ ವಹಿಸಿದ್ದ ಬಸವಂತಪ್ಪ ಮಾರನಬಸರಿ ಮಾತನಾಡಿ,ಇಂತಹ ಸ್ಪರ್ಧೆಗಳಿಂದ ಪ್ರಾಣಿಗಳಿಗೆ ಹಿಂಸೆಯಾಗಬಾರದು. ಸೋತರು ಅವುಗಳನ್ನು ಪ್ರೀತಿಸಬೇಕು, ಗೆದ್ದರೂ ಪ್ರೀತಿಸಬೇಕು. ಇಂದಿನ ಸೋಲು ಮುಂದಿನ ಗೆಲುವಿಗೆ ದಾರಿದೀಪವಾಗಿದೆ ಎಂದರು

ಯುವ ಮುಖಂಡ ಮಲ್ಲು ಮಾದರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಇಂತಹ ಕ್ರೀಡೆಗಳು ವಿರಳವಾಗುತ್ತಿವೆ. ಸರಿಯಾದ ಪ್ರೋತ್ಸಾಹ,ಉತ್ತೇಜನವಿಲ್ಲದೇ ಅವನತಿಯತ್ತ ಸಾಗುತ್ತಿವೆ. ಆದ್ದರಿಂದ ಪ್ರಾಣಿಗಳ ಬಗ್ಗೆ ಪ್ರತಿಯೊಬ್ಬರು ಕಳಕಳಿ ಹೊಂದಬೇಕು. ಪ್ರಾಣಿಗಳಲ್ಲಿನ ಪ್ರತಿಭೆ ಗುರುತಿಸುವಲ್ಲಿ ಟಗರಿನ ಕಾಳಗ, ಗಾಡಿ ಚಕ್ಕಡಿ ಸ್ಪರ್ಧೆಗಳಂತಹ ಗ್ರಾಮೀಣ ಕ್ರೀಡೆಗಳನ್ನು ಯುವಕರು, ಸಂಘಟನಾಕಾರರು ಹೆಚ್ಚು ಹೆಚ್ಚು ಏರ್ಪಡಿಸಬೇಕು. ಅಂದಾಗ ಮೂಲ ಗ್ರಾಮೀಣ ಕ್ರೀಡೆಗಳು ಉಳಿಯಲು ಸಾಧ್ಯ ಎಂದು ಹೇಳಿದರು.

ಸಮಾರಂಭದಲ್ಲಿ ಎಚ್‌.ವಿ.ಹಿರೇಮಠ, ಹನಮಪ್ಪ ಜಾಲಿಹಾಳ, ಅಂದಪ್ಪ ಮರಗಣ್ಣವರ, ಪರಶು ಮಾದರ, ಗ್ರಾಪಂ ಸದಸ್ಯರು, ಮುಖಂಡರು, ಶ್ರೀ ಬಸವೇಶ್ವರ ದೇವಸ್ಥಾನ ಕಮೀಟಿ ಸದಸ್ಯರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಮಂಡಳದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಆರ್‌.ಎನ್‌.ಜೋಶಿ ನಿರೂಪಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ