ಆ್ಯಪ್ನಗರ

ಬಲಿಪಾಡ್ಯ ಪೂಜೆ ಸಡಗರ

ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಮನೆ, ಅಂಗಡಿಯಲ್ಲಿದೀಪಾವಳಿ ಹಬ್ಬ ಧನಲಕ್ಷಿತ್ರ್ಮ ಆರಾಧನೆ ನಡೆಸಿದ ಆಸ್ತಿಕರು ಸೋಮವಾರ ಬಲಿಪಾಡ್ಯ ಪೂಜೆಯನ್ನು ಭಕ್ತಿಯಿಂದ ನೆರವೇರಿಸಲಾಯಿತು.

Vijaya Karnataka 29 Oct 2019, 5:50 pm
ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಮನೆ, ಅಂಗಡಿಯಲ್ಲಿದೀಪಾವಳಿ ಹಬ್ಬ ಧನಲಕ್ಷಿತ್ರ್ಮ ಆರಾಧನೆ ನಡೆಸಿದ ಆಸ್ತಿಕರು ಸೋಮವಾರ ಬಲಿಪಾಡ್ಯ ಪೂಜೆಯನ್ನು ಭಕ್ತಿಯಿಂದ ನೆರವೇರಿಸಲಾಯಿತು.
Vijaya Karnataka Web sacrifice worship
ಬಲಿಪಾಡ್ಯ ಪೂಜೆ ಸಡಗರ


ಬೆಳಕಿನ ಹಬ್ಬದಂದು ದೇವರಿಗೆ ಸಾಮೂಹಿಕ ಮೊರೆಯಿಟ್ಟಿರುವುದು ಸಾಂಪ್ರದಾಯಿಕ ಮಹತ್ವ ಪಡೆಯಿತು. ಜತೆಗೆ ನವ ಚೈತನ್ಯ ನೀಡಿತು. ನರಕ ಚತುದರ್ಶಿಯಂದು ಶುರುವಾಗಿ ಕಾರ್ತಿಕ ಶುದ್ಧ ಬಲಿಪಾಡ್ಯೆಯಂದು ಕೊನೆಗೊಂಡ ದೀಪಾವಳಿಯನ್ನು ಮಹಿಳೆಯರು, ಮಕ್ಕಳ ಜತೆ ಎಲ್ಲವಯೋಮಾನದವರು ಒಗ್ಗೂಡಿ ದೀಪಾರಾಧನೆ ಜತೆ ಲಕ್ಷಿತ್ರ್ಮೕ ಪೂಜೆ ಮಾಡಿದರು.

ವ್ಯಾಪಾರಸ್ಥರಿಗೆ ದೊಡ್ಡ ಹಬ್ಬ :
ವರ್ತಕರಿಗೆ ದೀಪಾವಳಿ ಹೊಸ ಆರ್ಥಿಕ ವರ್ಷದ ಆರಂಭದ ದಿನ. ಹೊಸ ಲೆಕ್ಕದ ಪುಸ್ತಕಗಳನ್ನು ಈ ದಿನ ತೆಗೆಯುವುದು ಪದ್ಧತಿ. ಅದರಂತೆ ಪಟ್ಟಣದ ಪ್ರಮುಖ ವಾಣಿಜ್ಯ ಮಾರುಕಟ್ಟೆ ಅಂಗಡಿಯಲ್ಲಿಝಗ ಮಗಿಸುವ ದೀಪಾಲಂಕಾರ ಮಧ್ಯೆ ಪ್ರತಿಷ್ಠಾಪಿಸಿರುವ ಲಕ್ಷಿತ್ರ್ಮ ದೇವರ ಆರಾಧನೆ ಜತೆ ಬುಧವಾರ ಹೊಸ ಖಾತೆ ಪುಸ್ತಕ ಇಟ್ಟು ಪೂಜೆ ನೆರವೇರಿಸಿರುವುದು ವಿಶೇಷ.

ಸಂಭ್ರಮದ ಮಹಾಲಕ್ಷಿತ್ರ್ಮ ಪೂಜೆ :
ಮಕ್ಕಳು, ಹೆಂಗೆಳೆಯರು ಹೊಸ ಬಟ್ಟೆ ಧರಿಸಿ, ಮನೆ ಮುಂದೆ ರಂಗೋಲಿ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ರಾತ್ರಿ ಹಣತೆಗಳಿಂದ ಮನೆ ಸುತ್ತಲು ಹಚ್ಚಲಾಗಿತ್ತು.

ಕಾಳೇರ ಮಾಸ್‌ :
ಪಟ್ಟಣ ಸೇರಿದಂತೆ ಸುತ್ತಲಿನ ಲಂಬಾಣಿ ತಾಂಡಾಗಳಲ್ಲಿದೀಪಾವಳಿಯನ್ನು ಕಾಳೇರ ಮಾಸ್‌ ಹೆಸರಲ್ಲಿಆಚರಿಸಿದರು. ಬೆಳಗಿನ ಜಾವ ನಾಲ್ಕು ಗಂಟೆಗೆ ಪ್ರತಿ ಕುಟುಂಬದ ಹಿರಿಯ ಹೆಣ್ಣು ಮಕ್ಕಳು ದೀಪ ಹಾಕಿರುವುದು ವಿಶೇಷ. ಯುವತಿಯರು ತಲೆ ಮೇಲೆ ಕುಂಭ ಹೊತ್ತು ಬಂಧುಗಳು, ಹಿರಿಯರ ಮನೆ ಮುಂದೆ ನೃತ್ಯ ಮಾಡಿ ಹಣ ಪಡೆದರು. ರಾತ್ರಿ ಯಿಡಿ ನೃತ್ಯ ಮಾಡಿ ಸಂಭ್ರಮಿಸಿದರು. ನೃತ್ಯದಲ್ಲಿಎಲ್ಲಜನಾಂಗದವರು ಬೆರೆಯುವ ಮೂಲಕ ಭಾವೈಕ್ಯ ಮೆರೆದರು.

ಮರು ದಿನ ನೃತ್ಯ ಮಾಡಿದ ಎಲ್ಲರೂ ತಾಕರಕಿ ಹೂ ತರಲು ಹೋದರು. ಹೋಗುವಾಗ ಬಂದ ಕಾಣಿಕೆಯಲ್ಲಿಕಡಲೆ, ಬೆಲ್ಲ, ಕೊಬ್ಬರಿ, ಉತ್ತತ್ತಿ ಖರೀದಿಸಿದರು. ಹೂವು ಕಿತ್ತ ನಂತರ ಎಲ್ಲರೂ ಒಂದೆಡೆ ಸೇರಿ, ತಂದಿದ್ದ ಕಡಲೆ, ಬೆಲ್ಲ, ಕೊಬ್ಬರಿ, ಉತ್ತತ್ತಿ ಎಲ್ಲವನ್ನೂ ಹಂಚಿಕೊಂಡು ತಿಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ