ಆ್ಯಪ್ನಗರ

ಉತ್ತಮ ನಾಗರಿಕನಾಗಲು ಸಂಸ್ಕಾರ ಅವಶ್ಯ

ನರಗುಂದ: ಉತ್ತಮ ನಾಗರಿಕನಾಗಲು ಸಂಸ್ಕಾರ, ಸಾತ್ಮಿಕ ಗುಣಗಳು ಅವಶ್ಯ.ಅಂತಹ ಅಂಶಗಳನ್ನು ಮಕ್ಕಳಿಗೆ ನೀಡುವ ಮೂಲಕ ಗುರುಗಳು ಶ್ರಮಿಸುತ್ತಾರೆ. ವಿದ್ಯಾರ್ಥಿ ಉನ್ನತ ಸ್ಥಾನ ಹೊಂದಿದಾಗ ಕಲಿಸಿದ ಗುರುವಿಗೆ ಗೌರವ ತಂದುಕೊಡುತ್ತದೆ ಎಂದು ನ್ಯಾಯವಾದಿ ಎಂ.ಬಿ.ಕುಲಕರ್ಣಿ ಹೇಳಿದರು.

Vijaya Karnataka 4 Feb 2020, 5:00 am
ನರಗುಂದ: ಉತ್ತಮ ನಾಗರಿಕನಾಗಲು ಸಂಸ್ಕಾರ, ಸಾತ್ಮಿಕ ಗುಣಗಳು ಅವಶ್ಯ.ಅಂತಹ ಅಂಶಗಳನ್ನು ಮಕ್ಕಳಿಗೆ ನೀಡುವ ಮೂಲಕ ಗುರುಗಳು ಶ್ರಮಿಸುತ್ತಾರೆ. ವಿದ್ಯಾರ್ಥಿ ಉನ್ನತ ಸ್ಥಾನ ಹೊಂದಿದಾಗ ಕಲಿಸಿದ ಗುರುವಿಗೆ ಗೌರವ ತಂದುಕೊಡುತ್ತದೆ ಎಂದು ನ್ಯಾಯವಾದಿ ಎಂ.ಬಿ.ಕುಲಕರ್ಣಿ ಹೇಳಿದರು.
Vijaya Karnataka Web samskara is essential to become a good citizen
ಉತ್ತಮ ನಾಗರಿಕನಾಗಲು ಸಂಸ್ಕಾರ ಅವಶ್ಯ


ಇಲ್ಲಿನ ಸರಕಾರಿ ಶಾಸಕರ ಮಾದರಿ ಶಾಲೆ ನಂ.1 ರಲ್ಲಿ2004-5ನೆ ಸಾಲಿನ ಏಳನೆ ತರಗತಿಯ ವಿದ್ಯಾರ್ಥಿಗಳು ಹಮ್ಮಿಕೊಂಡು ಗುರುವಂದನೆಯಲ್ಲಿಮಾತನಾಡಿದರು. ವಿದ್ಯಾರ್ಥಿಗಳು ಬದುಕಿನಲ್ಲಿಯಶಸ್ವಿ ನಾಗರಿಕನಾದರೆ ಅದೇ ಶಿಕ್ಷಕರಿಗೆ ಸಿಗುವ ಕಾಣಿಕೆ ಎಂದರು.

ಅತಿಥಿ ಮುಖ್ಯ ಶಿಕ್ಷಕ ಎಸ್‌.ಐ.ಅಂಕಲಿ ಮಾತನಾಡಿ,ಗುರು ಮತ್ತು ಶಿಷ್ಯರ ಸಂಬಂಧ ಅತ್ಯಂತ ಮಧುರವಾದುದು.ಬದುಕಿನಲ್ಲಿಎಂದೂ ಮರೆಯಲಾಗದ ಕ್ಷಣ ಎಂಬುದಕ್ಕೆ ಹಳೆ ವಿದ್ಯಾರ್ಥಿಗಳು ಕಲಿಸಿದ ಗುರುಗಳನ್ನು ಸನ್ಮಾನಿಸಿದ ಕ್ಷಣ ಮೆರೆಯಲಾಗದು. ಅಕ್ಷರ ಕಲಿಸಿ ಸಂಸ್ಕಾರ ನೀಡಿದ ಶಿಕ್ಷಕರನ್ನು ಗೌರವಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.

ನಿವೃತ್ತರಾದ ವಿ.ಎಸ್‌.ಮೇಗೂರ, ಸಿ.ಎಂ.ಕೋರಿ, ಬಿ.ಜಿ.ಅರ್ಭಾಣದ, ಆರ್‌.ಎ.ಚಪ್ಪರಬಂಧ,

ಎನ್‌.ಎನ್‌.ಠಾಕೂರದಾಸ, ಎಚ್‌.ಎಚ್‌.ರಾಯರಡ್ಡಿ, ಆರ್‌.ಬಿ.ಶಿರಸಂಗಿ, ಎಂ.ಬಿ.ಮಲ್ಲಾಪೂರ, ಎಸ್‌.ಎಸ್‌.ಉಳ್ಳಾಗಡ್ಡಿ, ಕೆ.ಎನ್‌.ಶಿರಬಡಗಿ, ಎಸ್‌.ಎಚ್‌.ಪಾಣಿಗಟ್ಟಿ, ಬಿ.ಎಂ.ಭೂಯ್ಯಾರ, ಎಸ್‌.ಎ.ಹೊಸಮನಿ, ಎಂ.ಕೆ.ನೆಲಗುಡ್ಡ ಶಿಕ್ಷಕಿಯರನ್ನು ಹಳೆ ವಿದ್ಯಾರ್ಥಿಗಳು ಸನ್ಮಾನಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ವಿಠಲ ಚವ್ಹಾಣ ಅಧ್ಯಕ್ಷತೆಯಲ್ಲಿನಡೆದ ಗುರುವಂದನಾ ಕಾರ್ಯಕ್ರಮದಲ್ಲಿಹನಮಂತಗೌಡ ಮುದ್ದನಗೌಡ್ರ, ಪ್ರಭಾಕರ ಅಬ್ಬಿಗೇರಿ, ಹರೀಶ ರಾಮದುರ್ಗ ಮಾತನಾಡಿದರು.

ಹಳೆ ವಿದ್ಯಾರ್ಥಿಗಳು ಪರಸ್ಪರ ಪರಿಚಯಿಸಿಕೊಂಡು ಹಳೆಯ ನೆನಪು ಹಂಚಿಕೊಂಡರು. ಪ್ರತಿಭಾ ಉಪ್ಪಿನ ಪ್ರಾರ್ಥಿಸಿದರು.ಪ್ರಕಾಶ ಮಟಗೇರ ಸ್ವಾಗತಿಸಿದರು.ಸಂಗನಗವಡ ಹುಡೇಮನಿ ನಿರೂಪಿಸಿ,ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ