ಆ್ಯಪ್ನಗರ

ಸಂಸ್ಕೃತ ಶ್ರಾವಣಿ ಕಾರ್ಯಕ್ರಮ

ಗದಗ : ನಗರದ ಡಿಜಿಎಂ ಸಂಸ್ಕೃತ ಪಾಠಶಾಲೆಯಲ್ಲಿ ಡಿಜಿಎಂ ಸಂಸ್ಕೃತ ಪಾಠಶಾಲೆ, ಜ.ತೋಂಟದಾರ್ಯ ಸಂಸ್ಕೃತ ಪಾಠಶಾಲೆ, ಪಿಪಿಜಿ ಸಂಸ್ಕೃತ ಪಾಠಶಾಲೆ ಹಾಗೂ ಜ.ಪಂಚಾಚಾ¿åರ್‍ ಸಂಸ್ಕೃತ ಪಾಠಶಾಲೆಗಳ ಸಹಯೋಗದಲ್ಲಿ ಜಿಲ್ಲೆಯಾದ್ಯಂತ ಜರುಗುವ ಸಂಸ್ಕೃತ ಶ್ರಾವಣಿ ಕಾರ್ಯಕ್ರಮ ನಡೆಯಿತು.

Vijaya Karnataka 20 Aug 2019, 5:00 am
ಗದಗ : ನಗರದ ಡಿಜಿಎಂ ಸಂಸ್ಕೃತ ಪಾಠಶಾಲೆಯಲ್ಲಿ ಡಿಜಿಎಂ ಸಂಸ್ಕೃತ ಪಾಠಶಾಲೆ, ಜ.ತೋಂಟದಾರ್ಯ ಸಂಸ್ಕೃತ ಪಾಠಶಾಲೆ, ಪಿಪಿಜಿ ಸಂಸ್ಕೃತ ಪಾಠಶಾಲೆ ಹಾಗೂ ಜ.ಪಂಚಾಚಾ¿åರ್‍ ಸಂಸ್ಕೃತ ಪಾಠಶಾಲೆಗಳ ಸಹಯೋಗದಲ್ಲಿ ಜಿಲ್ಲೆಯಾದ್ಯಂತ ಜರುಗುವ ಸಂಸ್ಕೃತ ಶ್ರಾವಣಿ ಕಾರ್ಯಕ್ರಮ ನಡೆಯಿತು.
Vijaya Karnataka Web sanskrit shravani program
ಸಂಸ್ಕೃತ ಶ್ರಾವಣಿ ಕಾರ್ಯಕ್ರಮ


ವಲಯ ವಿಷಯ ಪರಿವೀಕ್ಷ ಕ ಜಿ.ಎಸ್‌.ಗಾಂವಕರ ಮಾತನಾಡಿ, ಕೇಂದ್ರ ಸರಕಾರದ ಆದೇಶದಂತೆ ಶ್ರಾವಣಮಾಸ ಪರ‍್ಯಂತ ಸಂಸ್ಕೃತ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಅವರು ವಿದೇಶಕ್ಕೆ ಹೋದಾಗ ನೀವು ಸಂಸ್ಕೃತ ಉಪನಿಷತ್ತುಗಳ ಬಗ್ಗೆ ಮಾಹಿತಿ ಹೇಳುವಿರಾ ಎಂದು ಅಲ್ಲಿಯ ಪ್ರಜೆಗಳು ಕೇಳಿದಾಗ ನನ್ನ ದೇಶದ ಮೂಲ ಭಾಷೆ ನಾನೇ ತಿಳಿದಿಲ್ಲ ಎಂದು ವ್ಯಥೆಪಟ್ಟು ಪ್ರವಾಸ ಮುಗಿಸಿ ಬಂದ ತಕ್ಷ ಣ ಶ್ರಾವಣದಲ್ಲಿ ಸಂಸ್ಕೃತ ದಿನ, ಸಂಸ್ಕೃತ ಸಪ್ತಾಹ ಆಚರಿಸುವಂತೆ ಆದೇಶ ಮಾಡಿದರು. ಸಂಸ್ಕೃತ ಭಾಷೆಯು ನಮ್ಮ ರಾಷ್ಟ್ರ ಭಾಷೆಯನ್ನಾಗಿ ಮಾಡವುದು ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಮಹದಾಸೆಯಾಗಿತ್ತು ಎಂದರು.

ಡಿಜಿಎಂ ಮುಖ್ಯೋಪಾಧ್ಯಾಯ ಬಿ.ಎಸ್‌. ಬಣಕಾರ ಮಾತನಾಡಿ, ಮಾತುಗಳಲ್ಲಿ ಸಂಸ್ಕೃತ ಅಡಗಿದೆ. ಆಹ್ವಾನ ಪತ್ರಿಕೆ, ಜನ್ಮದಿನೋತ್ಸವ, ಹಸ್ತ, ಮುಖ ಇವೆಲ್ಲ ನೀವು ಮಾತನಾಡುತ್ತಿರಿ. ಸಂಸ್ಕೃತ ಎನ್ನುವುದು ನಿಮಗೆ ಗೊತ್ತಿಲ್ಲ. ಕಾರಣ ನೀವು ಸಂಸ್ಕೃತ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲಿರಿ ಎಂದರು.

ಜ.ತೋಂಟದಾರ್ಯ ಸಂಸ್ಕೃತ ಪಾಠಶಾಲೆ ಶಿಕ್ಷ ಕ ಎಸ್‌.ಎನ್‌.ಶಿಂಪಿಗೇರ ಮಾತನಾಡಿ, ಶ್ರಾವಣದಲ್ಲಿ ನಮ್ಮ ಕಿವಿ, ಮನಸ್ಸು, ಶರೀರ ಎಲ್ಲ ಪವಿತ್ರಗೊಳ್ಳಲು ನಾವು ಪುರಾಣ ಪುಣ್ಯ ಕಥೆ ಕೇಳುತ್ತೇವೆ. ಹಿಂದಿನ ಕಾಲದಲ್ಲಿ, ನಾವು ಈಗ ಕನ್ನಡ ಮಾತನಾಡುವಂತೆ ಸಂಸ್ಕೃತ ದಲ್ಲಿ ಮಾತನಾಡುತ್ತಿದ್ದರು. ಅಪಾರ ಜ್ಞಾನಸಂಪತ್ತು, ಗ್ರಂಥಗಳು ಸಂಸ್ಕೃತ ಭಾಷೆಯಲ್ಲಿವೆ ಎಂದರು. ಕೆ.ಎಸ್‌.ಕುರ್ತಕೋಟಿ, ಎಸ್‌.ಎಸ್‌.ಸಾಲಿಮಠ, ಪಿ.ಎಫ್‌.ಹಿರೇಮಠ, ಎಸ್‌.ಎಸ್‌. ಬಣಕಾರ, ಮಹಾಂತೇಶ ಮಾದರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ