ಆ್ಯಪ್ನಗರ

ಜನಪದ ಉಳಿಸಿ ಬೆಳೆಸಿ

ರೋಣ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಿಂತ ಜನಪದ ಪರಿಷತ್‌ ಕಾರ್ಯಕ್ರಮ ಹಮ್ಮಿಕೊಂಡು ಜನಪದ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕನ್ನಡ ಜನಪದ ಪರಿಷತ್‌ ರಾಜ್ಯಾಧ್ಯಕ್ಷ ಡಾ.ಎಸ್‌. ಬಾಲಾಜಿ ಅಭಿಪ್ರಾಯಪಟ್ಟರು. ಪಟ್ಟಣದ ಶಾರದಾ ಬಾಲಕಿಯರ ಪ್ರೌಢಶಾಲೆಯಲ್ಲಿಕನ್ನಡ ಜನಪದ ಪರಿಷತ್‌ ತಾಲೂಕು ಘಟಕ ಉದ್ಘಾಟನಾ ಸಮಾರಂಭದಲ್ಲಿಮಾತನಾಡಿದರು.

Vijaya Karnataka 19 Feb 2020, 5:50 pm
ರೋಣ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಿಂತ ಜನಪದ ಪರಿಷತ್‌ ಕಾರ್ಯಕ್ರಮ ಹಮ್ಮಿಕೊಂಡು ಜನಪದ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕನ್ನಡ ಜನಪದ ಪರಿಷತ್‌ ರಾಜ್ಯಾಧ್ಯಕ್ಷ ಡಾ.ಎಸ್‌. ಬಾಲಾಜಿ ಅಭಿಪ್ರಾಯಪಟ್ಟರು. ಪಟ್ಟಣದ ಶಾರದಾ ಬಾಲಕಿಯರ ಪ್ರೌಢಶಾಲೆಯಲ್ಲಿಕನ್ನಡ ಜನಪದ ಪರಿಷತ್‌ ತಾಲೂಕು ಘಟಕ ಉದ್ಘಾಟನಾ ಸಮಾರಂಭದಲ್ಲಿಮಾತನಾಡಿದರು.
Vijaya Karnataka Web save and grow folklore
ಜನಪದ ಉಳಿಸಿ ಬೆಳೆಸಿ


ಜನಪದ ಸಾಹಿತ್ಯ ಎನ್ನುವುದು ಸರಳವಾಗಿದೆ ಜನಪದ ಸಾಹಿತ್ಯ ಉಳಿಸಿ ಬೆಳೆಸಲು ಪ್ರತಿಯೊಬ್ಬರು ಮುಂದಾಗಬೇಕು. ಜನಪದ ಕಲಾವಿದರನ್ನು ಈಗಾಗಲೇ 15 ಜಿಲ್ಲೆಯಲ್ಲಿಗುರುತಿಸಲಾಗಿದೆ. ಸಾಕಷ್ಟು ಸಂಖ್ಯೆಯಲ್ಲಿಜನಪದ ಕಲಾವಿದರು ಇದ್ದಾರೆ ಕಲಾವಿದರನ್ನು ಬೆಳೆಸಲು ಜನಪದ ಪರೀಷತ್‌ ಬದ್ಧವಾಗಿದೆ ಎಂದರು.

ಉದ್ಘಾಟಿಸಿ ಮಾತನಾಡಿದ ಜಿಲ್ಲಾಪಂಚಾಯಿತಿ ಉಪಾಧ್ಯಕ್ಷೆ ಮಲ್ಲಮ್ಮ ಬಿಚ್ಚೂರ ಮಾತನಾಡಿ, ಕಂಪ್ಯೂಟರ್‌, ಮೊಬೈಲ್‌ ಗಳ ಪ್ರಭಾವದಿಂದ ಹಿಂದಿನ ಸಂಪ್ರದಾಯದ ಕಲೆ ಸಾಹಿತ್ಯಗಳು ನಶಿಸಿ ಹೋಗುತ್ತಿವೆ ಎಂದರು.

ಸಾನ್ನಿಧ್ಯ ವಹಿಸಿದ್ದ ಮ.ನಿ.ಪ್ರ. ಗುರುಪಾದೇಶ್ವರ ಸ್ವಾಮೀಜಿ ಗುಲಗಂಜಿಮಠ ಮಾತನಾಡಿ, ಜನಪದ ಕಲೆ, ಸಾಹಿತ್ಯ, ಕ್ರೀಡೆ, ಗಾದೆ, ಒಗಟು, ಹಾಡು ಕುಣಿತಗಳ ಅಳಿವು ಉಳಿವು ನಮ್ಮ ಕೈಯಲ್ಲಿದೆ. ಜನಪದ ಕಲೆ ಸಾಹಿತ್ಯ ಉಳಿಸಲು ನಾವೆಲ್ಲರೂ ಕಂಕಣ ಬದ್ಧರಾಗಬೇಕು ಎಂದರು.

ಇದೇ ಸಂದರ್ಭದಲ್ಲಿಜನಪದ ಕಲಾವಿದರಾದ ವಜೀರಬಾಬು ನದಾಫ್‌, ಹಿರೇಕಲ್ಲಪ್ಪನವರ, ಸಂಕನಗೌಡ ಪಾಟೀಲ, ಹನಮಪ್ಪ ರಂಗಣ್ಣವರ ಹಾಗೂ ಯುವ ಕಲಾವಿದ ಪ್ರವೀಣ ಗಡಗಿ ಅವರನ್ನು ಸನ್ಮಾನಿಸಲಾಯಿತು. ಕಲಾವಿದ ಪ್ರವೀಣ ಗಡಗಿಯವರು ಕೊಡ ಮಾಡಿದ ಪೆನ್ನು ಹಾಗೂ ನೋಟ್‌ ಪುಸ್ತಕಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ನೂತನ ಕನ್ನಡ ಜನಪದ ಪರಿಷತ್‌ ಪದಾಧಿಕಾರಿಗಳ ಪದಗ್ರಹಣ ನಡೆಯಿತು.ಚಂದ್ರಶೇಖರ ವಡಗೇರಿ, ಈಶ್ವರಪ್ಪ ರೇವಡಿ, ರವೀಂದ್ರನಾಥ ದೊಡ್ಡಮೇಟಿ, ಪ್ರೊ.ಕೆ.ಎಸ್‌. ಕೌಜಲಗಿ ಮಾತನಾಡಿದರು. ಶಾಂತಕುಮಾರ್‌ ಭಜಂತ್ರಿ ಅಧ್ಯಕ್ಷತೆ ವಹಿಸಿದ್ದರು.

ಸುರೇಶ್‌ ರೈ ಸೂಡಿಮುಳ್ಳು, ಎಚ್‌.ಆರ್‌.ಹೊಸಮನಿ, ಡಿ.ಬಿ.ತಳವಾರ, ಕೆ.ಬಿ.ಭಜಂತ್ರಿ, ಎಚ್‌.ಎಲ್‌.ದಾಸರ, ಈಶ್ವರ ಕುರಿ, ಮಹಾದೇವಪ್ಪ ಬೇವಿನಕಟ್ಟಿ ಇದ್ದರು. ವಿದ್ಯಾರ್ಥಿಗಳು ಪ್ರಾರ್ಥನೆ ಗೀತೆ ಹಾಡಿದರು. ಹೊನಕೇರಪ್ಪ ಕಟ್ಟಿಮನಿ ಸ್ವಾಗತಿಸಿದರು. ಎಫ್‌.ಎಫ್‌.ದೊಡಮನಿ ನಿರೂಪಿಸಿದರು. ಶಿವಾನಂದ ಪರಸಣ್ಣವರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ