ಆ್ಯಪ್ನಗರ

ಸಂವಿಧಾನ ಉಳಿಸಿ, ಪೌರತ್ವ ರಕ್ಷಿಸಿ ಅಭಿಯಾನ

ಗದಗ: ನಗರದ ಹಜರತ್‌ ಟಿಪ್ಪು ಸುಲ್ತಾನ ಸರ್ಕಲ್‌ನಲ್ಲಿವೆಲ್‌ಫೇರ್‌ ಪಾರ್ಟಿ ಆಪ್‌ ಇಂಡಿಯಾ ರಾಷ್ಟ್ರವ್ಯಾಪಿ ನಡೆಸುತ್ತಿರುವ ಸಂವಿಧಾನ ಉಳಿಸಿ, ಪೌರತ್ವ ರಕ್ಷಿಸಿ ಅಭಿಯಾನದಡಿ ವೆಲ್‌ಫೇರ್‌ ಪಾರ್ಟಿ ಆಫ್‌ ಇಂಡಿಯಾ ಜಿಲ್ಲಾಘಟಕದಿಂದ ಕ್ಯಾಂಡಲ್‌ ಮಾರ್ಚ್ ಕಾರ್ಯಕ್ರಮ ನಡೆಯಿತು.

Vijaya Karnataka 28 Jan 2020, 5:00 am
ಗದಗ: ನಗರದ ಹಜರತ್‌ ಟಿಪ್ಪು ಸುಲ್ತಾನ ಸರ್ಕಲ್‌ನಲ್ಲಿವೆಲ್‌ಫೇರ್‌ ಪಾರ್ಟಿ ಆಪ್‌ ಇಂಡಿಯಾ ರಾಷ್ಟ್ರವ್ಯಾಪಿ ನಡೆಸುತ್ತಿರುವ ಸಂವಿಧಾನ ಉಳಿಸಿ, ಪೌರತ್ವ ರಕ್ಷಿಸಿ ಅಭಿಯಾನದಡಿ ವೆಲ್‌ಫೇರ್‌ ಪಾರ್ಟಿ ಆಫ್‌ ಇಂಡಿಯಾ ಜಿಲ್ಲಾಘಟಕದಿಂದ ಕ್ಯಾಂಡಲ್‌ ಮಾರ್ಚ್ ಕಾರ್ಯಕ್ರಮ ನಡೆಯಿತು.
Vijaya Karnataka Web save the constitution protect citizenship campaign
ಸಂವಿಧಾನ ಉಳಿಸಿ, ಪೌರತ್ವ ರಕ್ಷಿಸಿ ಅಭಿಯಾನ


ಮೌಲಾನ್‌ ಇನಾಯತುಲ್ಲಾಪೀರಜಾದೆ ಮಾತನಾಡಿ, ಸಂವಿಧಾನ ರಕ್ಷಣೆ ಮತ್ತು ನಾಗರಿಕ ಹಕ್ಕು ನಮ್ಮೆಲ್ಲರ ಹೊಣೆ ಎಂದರು.

ಬಹುಜನ ಕ್ರಾಂತಿ ಮೋರ್ಚಾ ತಾಲೂಕು ಸಂಚಾಲಕ ಮೈಲಾರಿ ಹಾದಿಮನಿ ಮಾತನಾಡಿ, ಸಂವಿಧಾನ ತಿದ್ದುಪಡಿ, ಸಿಎಎ, ಎನ್‌ಆರ್‌ಸಿ ಮಾಡಲು ಬಿಡುವುದಿಲ್ಲ. ಸಿಎಎ, ಎನ್‌ಆರ್‌ಸಿ ಮಾಡುವುದಾದರೆ ಡಿಎನ್‌ಎ ಆಧಾರದ ಮೇಲೆ ಜಾರಿಗೆ ತನ್ನಿ ಎಂದರು.

ಅಂಜುಮನ್‌ ಏ ಇಸ್ಲಾಂ ಕಮೀಟಿಯ ಅಧ್ಯಕ್ಷ ಮಹಮ್ಮದ ಯೂಸೂಫ ನಮಾಜಿ ಮಾತನಾಡಿ, ದೇಶದಲ್ಲಿನಿರುದ್ಯೋಗ ಹೆಚ್ಚಾಗಿದೆ. ಜಿಡಿಪಿ ಕುಸಿಯುತ್ತಿದೆ. ಇದರ ಬಗ್ಗೆ ಮಾತನಾಡದೆ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಸರಕಾರ ಈ ಸಿಎಎ, ಎನ್‌ಆರ್‌ಸಿ ಜಾರಿಗೆ ತರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಜಮಾತ್‌ ಇಸ್ಲಾಮಿ ಧಾರವಾಡ ವಲಯ ಸಂಚಾಲಕ ಕೆ.ಐ. ಶೇಖ ಮಾತನಾಡಿ, ಸಿಎಎ ಹಾಗೂ ಎನ್‌ಆರ್‌ಸಿ ಧರ್ಮದ ಆಧಾರದ ಮೇಲೆ ಮಾಡಬಾರದು ಇದು ಸಂವಿಧಾನ ವಿರೋಧಿಯಾಗಿದೆ ಎಂದರು. ಜಾಸ್ಮೀನ್‌ ಬೇಸ್ಮಿ ಮಾತನಾಡಿ, ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ವಿರುದ್ಧ ಹೋರಾಟದಲ್ಲಿಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸಬೇಕೆಂದರು.

ಜಿಲ್ಲಾಧ್ಯಕ್ಷರು ಜುನೇದ ಉಮಚಗಿ ಮಾತನಾಡಿ, ಸಿಎಎ, ಎನ್‌ಆರ್‌ಸಿ, ಎನ್‌ಪಿಸಿ ಕೇಂದ್ರ ಸರಕಾರ ಎಲ್ಲಿಯವರೆಗೂ ರದ್ದುಗೊಳಿಸುವುದಿಲ್ಲವೋ ಅಲ್ಲಿಯವರೆಗೆ ಈ ಹೋರಾಟ ನಿರಂತರವಾಗಿರುತ್ತದೆ ಎಂದು ಹೇಳಿದರು.

ಮಹ್ಮದ ರಫೀಕ, ತೌಸೀಪ ಶಿರಹಟ್ಟಿ, ಇಲಿಯಾಸ ಖೈರಾತಿ, ಮುಸ್ತಫಾ ಶಿರಹಟ್ಟಿ, ಇಸ್ಮಾಯಿಲ್‌ ರೋಣ, ಅನ್ವರ, ಅಬ್ದುಲ್‌ ಕದೀರ, ಮುನವರ ಸುಲ್ತಾನಾ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ