ಆ್ಯಪ್ನಗರ

ಸದೃಢ ಆರೋಗ್ಯಕ್ಕೆ ಪರಿಸರ ಉಳಿಸಿ

ಗದಗ: ಇಲ್ಲಿಯ ಡಂಬಳನಾಕಾದ ಸಿದ್ಧರಾಮೇಶ್ವರ ನಗರದಲ್ಲಿರುವ ನಂದಿವೇರಿ ಸಂಸ್ಥಾನಮಠದಲ್ಲಿ 27ನೇ ಪರಿಸರಾನುಭವ ಶಿವಾನುಭವ ಹಾಗೂ ವಿಶ್ವ ಪರಿಸರ ದಿನಾಚರಣೆ ನಡೆಯಿತು.

Vijaya Karnataka 9 Jun 2019, 5:00 am
ಗದಗ: ಇಲ್ಲಿಯ ಡಂಬಳನಾಕಾದ ಸಿದ್ಧರಾಮೇಶ್ವರ ನಗರದಲ್ಲಿರುವ ನಂದಿವೇರಿ ಸಂಸ್ಥಾನಮಠದಲ್ಲಿ 27ನೇ ಪರಿಸರಾನುಭವ ಶಿವಾನುಭವ ಹಾಗೂ ವಿಶ್ವ ಪರಿಸರ ದಿನಾಚರಣೆ ನಡೆಯಿತು.
Vijaya Karnataka Web save the environment for strong health
ಸದೃಢ ಆರೋಗ್ಯಕ್ಕೆ ಪರಿಸರ ಉಳಿಸಿ


ಸಾನ್ನಿಧ್ಯ ವಹಿಸಿದ್ದ ಶಿವಕುಮಾರ ಸ್ವಾಮೀಜಿ ಮಾತನಾಡಿ, ಇಂದು ಪರಿಸರ ನಾಶದಿಂದ ಶುದ್ಧ ಗಾಳಿ, ನೀರು, ಆಹಾರ ಸಿಗುತ್ತಿಲ್ಲ. ಇದರಿಂದ ಮನುಷ್ಯನು ತನ್ನ ಆರೋಗ್ಯವನ್ನು ಸದೃಢವಾಗಿ ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪರಿಸರ ರಕ್ಷಿಸುವ ಹೊಣೆ ನಮ್ಮದಾಗಬೇಕೆಂದು ತಿಳಿಸಿದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಚ್‌.ಆರ್‌.ಕೋಣಿಮನಿ ಮಾತನಾಡಿ, ಪರಿಸರದಲ್ಲಿಯ ಗಿಡಮರಗಳು ನಾಶವಾದರೆ ಸಮಗ್ರ ಮನುಕುಲವೇ ನಾಶವಾದಂತೆ ಎಂಬುದನ್ನು ಅರಿತು ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು ಅವುಗಳನ್ನು ಮಕ್ಕಳಂತೆ ರಕ್ಷಿಸುವ ಮನೋಭಾವನೆ ಬೆಳೆದಾಗ ಮಾತ್ರ ಪರಿಸರ ಉಳಿಯಬಹುದು ಎಂದು ತಿಳಿಸಿದರು.

ಪರಿಸರಾನುಭವ ಶಿವಾನುಭವ ಸಮಿತಿ ಅಧ್ಯಕ್ಷ ಜಂಬಯ್ಯ ವಸ್ತ್ರದ, ಬಿ.ಡಿ.ಕಿಲಬನವರ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳು ಮನುಷ್ಯರಲ್ಲಿ ಸಂಸ್ಕೃತಿ ಸಂಸ್ಕಾರ ಬೆಳೆಸುತ್ತವೆ ಎಂದರು. ಕೋಟುಮಚಗಿ ಗ್ರಾಮದ ಶರಣಪ್ಪ ಜಗ್ಗಲ್‌ ಹಾಗೂ ಸಂಗಡಿಗರಿಂದ ಪ್ರಾರ್ಥನೆ ಹಾಗೂ ಸಂಗೀತಸೇವೆ ಜರುಗಿತು.

ಪ್ರೊ.ಬಿ.ಬಿ.ಪಾಟೀಲ, ಬಿ.ಎಸ್‌.ಹುಡೇದ, ಪ್ರೊ.ವಿ.ಎಂ.ಕುಂದ್ರಾಳಹಿರೇಮಠ, ಸುಧೀಂದ್ರ ಜಾಧವ, ಮಲ್ಲಣ್ಣ ಗಬ್ಬಸಾವಳಗಿ, ಬಸವರಾಜ ಕುಷ್ಟಗಿ, ಆಂಜನೇಯ ಕಟಗಿ, ಸಹದೇವ ಕೋಟಿ, ಈಶ್ವರ, ಪ್ರೊ. ಎಸ್‌. ಬಿ. ವಕ್ರದ, ಬಿ.ಎಸ್‌.ಬಾಣದ, ಅಂಜಲಿ ಬೆಟಗೇರಿ, ನಿರ್ಮಲಾ ಕೋಣಿಮನಿ, ವಿದ್ಯಾ ಪಾಟೀಲ, ಸುಮಿತ್ರಾ, ಅಕ್ಕಮಹಾದೇವಿ ಕೋಟಿ, ಚೆನ್ನಮ್ಮ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ