ಗದಗ: ತನ್ನ ಪತ್ನಿ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಶಂಕಿಸಿ ವ್ಯಕ್ತಿಯೊಬ್ಬನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಆರೋಪಿಯನ್ನು ಮುಂಡರಗಿ ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಈ ಸಂಬಂಧ ಮಾಹಿತಿ ನೀಡಿದ್ದಾರೆ. ಶುಕ್ರವಾರ ಎಸ್ಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಡರಗಿ ತಾಲೂಕಿನ ಶಿರನಹಳ್ಳಿ ಗ್ರಾಮದ ರಂಗಪ್ಪ ಅಲಿಯಾಸ್ ರಂಗಸ್ವಾಮಿ ಎಂಬುವನೇ ಬಂಧಿತ ಆರೋಪಿ ಎಂದರು. ಗೌಂಡಿ ಕೆಲಸ ಮಾಡುವ ಆರೋಪಿ ರಂಗಪ್ಪನನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ, ತನ್ನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಇರಬಹುದು ಎಂದು ಶಂಕಿಸಿ ಫಕ್ಕೀರಪ್ಪನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೆ, ಕೊಲೆಯಾದ ಫಕ್ಕೀರಪ್ಪನಿಗೆ ಆರೋಪಿ ರಂಗಸ್ವಾಮಿ ದೂರದ ಸಂಬಂಧಿಯಾಗಿದ್ದು, ವರಸೆಯಲ್ಲಿ ಚಿಕ್ಕಪ್ಪನಾಗಬೇಕು ಎಂದು ತಿಳಿದುಬಂದಿದೆ.
ಪ್ರಿಯಕರನಿಗಾಗಿ ಪತಿಗೇ ಮುಹೂರ್ತ ಇಟ್ಟಳು ಪತ್ನಿ..! ದರೋಡೆ ಎಂದು ಬಿಂಬಿಸಲು ವಿಫಲ ಯತ್ನ..!
'ಕೊಲೆಯಾದ ಫಕ್ಕೀರಪ್ಪ ತಳವಾರ ಮೂಲತಃ ಶಿಂಗಟಾಲೂರು ಗ್ರಾಮದವನು. ಗಂಗಾಪೂರ ಶುಗರ್ ಫ್ಯಾಕ್ಟರಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ರಾತ್ರಿ ವೇಳೆ ಫ್ಯಾಕ್ಟರಿಯಲ್ಲಿ ಮಲಗಿಕೊಂಡಿದ್ದಾಗ ಆರೋಪಿ ರಂಗಪ್ಪ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ. ಈ ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ' ಎಂದು ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದರು.
ಚಾಮರಾಜನಗರ: ಹಣಕ್ಕಾಗಿ ಮಹಿಳೆಯನ್ನು ಕೊಂದಿದ್ದವನಿಗೆ ಜೀವಾವಧಿ ಶಿಕ್ಷೆ
ಗಂಗಾಪೂರ ಶುಗರ್ ಫ್ಯಾಕ್ಟರಿಯ ಸೆಕ್ಯೂರಿಟಿ ಗಾರ್ಡ್ನ ಕೊಲೆ ಪ್ರಕರಣ ಭೇದಿಸಲು ಎಸ್ಪಿ ಯತೀಶ್ ಎನ್, ಡಿಎಸ್ಪಿ ಶಿವಾನಂದ ಕಟಗಿ ಮಾರ್ಗದರ್ಶನದಲ್ಲಿ ಮುಂಡರಗಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುಧೀರ ಕುಮಾರ ಬೆಂಕಿ, ಸಿಬ್ಬಂದಿಗಳಾದ ಜೆ.ಐ.ಬಚ್ಚೇರಿ, ನೀಲಕಂಠ ಭಂಗಿ, ಕೊಟೇಶ ಒಡೆಯರ, ಜಿ.ಎನ್.ಮಜ್ಜಗಿ, ಮಂಜು ಮಾದರ, ಶರಣಪ್ಪ ನಾಗೇಂದ್ರಗಡ, ಗದಗ ಡಿಪಿಒದಲ್ಲಿರುವ ಗುರುರಾಜ ಬೂದಿಹಾಳ, ಆನಂದಸಿಂಗ್ ದೊಡ್ಡಮನಿ ಅವರನ್ನೊಳಗೊಂಡ ತಂಡವು ಶ್ರಮಿಸಿತ್ತು. ಈ ತಂಡಕ್ಕೆ ಎಸ್ಪಿ ಯತೀಶ್ ಅವರು ಅಭಿನಂದಿಸಿ ಪ್ರಶಂಸನಾ ಪತ್ರ ನೀಡಿದರು.
ಕೊರಟಗೆರೆಯಲ್ಲಿ ಒಂಟಿ ಮಹಿಳೆಗೆ ಕೊಲೆ ಬೆದರಿಕೆ, ದರೋಡೆ: ಆರೋಪಿ ಬಂಧನ
ಪ್ರಿಯಕರನಿಗಾಗಿ ಪತಿಗೇ ಮುಹೂರ್ತ ಇಟ್ಟಳು ಪತ್ನಿ..! ದರೋಡೆ ಎಂದು ಬಿಂಬಿಸಲು ವಿಫಲ ಯತ್ನ..!
'ಕೊಲೆಯಾದ ಫಕ್ಕೀರಪ್ಪ ತಳವಾರ ಮೂಲತಃ ಶಿಂಗಟಾಲೂರು ಗ್ರಾಮದವನು. ಗಂಗಾಪೂರ ಶುಗರ್ ಫ್ಯಾಕ್ಟರಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ರಾತ್ರಿ ವೇಳೆ ಫ್ಯಾಕ್ಟರಿಯಲ್ಲಿ ಮಲಗಿಕೊಂಡಿದ್ದಾಗ ಆರೋಪಿ ರಂಗಪ್ಪ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ. ಈ ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ' ಎಂದು ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದರು.
ಚಾಮರಾಜನಗರ: ಹಣಕ್ಕಾಗಿ ಮಹಿಳೆಯನ್ನು ಕೊಂದಿದ್ದವನಿಗೆ ಜೀವಾವಧಿ ಶಿಕ್ಷೆ
ಗಂಗಾಪೂರ ಶುಗರ್ ಫ್ಯಾಕ್ಟರಿಯ ಸೆಕ್ಯೂರಿಟಿ ಗಾರ್ಡ್ನ ಕೊಲೆ ಪ್ರಕರಣ ಭೇದಿಸಲು ಎಸ್ಪಿ ಯತೀಶ್ ಎನ್, ಡಿಎಸ್ಪಿ ಶಿವಾನಂದ ಕಟಗಿ ಮಾರ್ಗದರ್ಶನದಲ್ಲಿ ಮುಂಡರಗಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುಧೀರ ಕುಮಾರ ಬೆಂಕಿ, ಸಿಬ್ಬಂದಿಗಳಾದ ಜೆ.ಐ.ಬಚ್ಚೇರಿ, ನೀಲಕಂಠ ಭಂಗಿ, ಕೊಟೇಶ ಒಡೆಯರ, ಜಿ.ಎನ್.ಮಜ್ಜಗಿ, ಮಂಜು ಮಾದರ, ಶರಣಪ್ಪ ನಾಗೇಂದ್ರಗಡ, ಗದಗ ಡಿಪಿಒದಲ್ಲಿರುವ ಗುರುರಾಜ ಬೂದಿಹಾಳ, ಆನಂದಸಿಂಗ್ ದೊಡ್ಡಮನಿ ಅವರನ್ನೊಳಗೊಂಡ ತಂಡವು ಶ್ರಮಿಸಿತ್ತು. ಈ ತಂಡಕ್ಕೆ ಎಸ್ಪಿ ಯತೀಶ್ ಅವರು ಅಭಿನಂದಿಸಿ ಪ್ರಶಂಸನಾ ಪತ್ರ ನೀಡಿದರು.
ಕೊರಟಗೆರೆಯಲ್ಲಿ ಒಂಟಿ ಮಹಿಳೆಗೆ ಕೊಲೆ ಬೆದರಿಕೆ, ದರೋಡೆ: ಆರೋಪಿ ಬಂಧನ