ಆ್ಯಪ್ನಗರ

ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಗೆ ಆಯ್ಕೆ

ಗದಗ: ಚಿಕ್ಕಮಗಳೂರಿನಲ್ಲಿನಡೆದ ರಾಜ್ಯಮಟ್ಟದ 17 ವರ್ಷದೊಳಗಿನ 43 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿಕ್ರೀಡಾ ವಸತಿ ನಿಲಯದ ಶ್ವೇತಾ ಜಾಧವ ಪ್ರಥಮ ಸ್ಥಾನ ಪಡೆದು ದೆಹಲಿಯಲ್ಲಿನ. 20ರಿಂದ 28ರ ವರೆಗೆ ನಡೆಯುವ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

Vijaya Karnataka 14 Nov 2019, 5:00 am
ಗದಗ: ಚಿಕ್ಕಮಗಳೂರಿನಲ್ಲಿನಡೆದ ರಾಜ್ಯಮಟ್ಟದ 17 ವರ್ಷದೊಳಗಿನ 43 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿಕ್ರೀಡಾ ವಸತಿ ನಿಲಯದ ಶ್ವೇತಾ ಜಾಧವ ಪ್ರಥಮ ಸ್ಥಾನ ಪಡೆದು ದೆಹಲಿಯಲ್ಲಿನ. 20ರಿಂದ 28ರ ವರೆಗೆ ನಡೆಯುವ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
Vijaya Karnataka Web 13SALIM1_25
ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಗೆ ಆಯ್ಕೆಯಾಗಿರುವ ವಿದ್ಯಾರ್ಥಿಗಳು


ಅದೇ ರೀತಿ ನ. 2ರಿಂದ 4ರ ವರೆಗೆ ದಾವಣಗೆರಿಯಲ್ಲಿನಡೆದ ಕಾಲೇಜು ವಿಭಾಗದ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ(55 ಕೆಜಿ) ಸೋನಿಯಾ ಜಾಧವ ಪ್ರಥಮ ಸ್ಥಾನ ಪಡೆದು, ಡಿಸೆಂಬರ್‌ನಲ್ಲಿಮಹಾರಾಷ್ಟ್ರದ ಕೊಲ್ಲಾಪುರದಲ್ಲಿನಡೆಯುವ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಅದೇ ರೀತಿ ನ. 8ರಿಂದ 11ರ ವರೆಗೆ ತಮಿಳುನಾಡಿನ ನಂಕ್ಕಳನಲ್ಲಿನಡೆದ ಸೌತಝೋನ್‌ ಸೀನಿಯರ್‌ ಚಾಂಪಿಯನ್‌ಶಿಪ್‌ನಲ್ಲಿಪ್ರಶಾಂತ ಬೇಲೇರಿ, ಪ್ರೇಮಾ ಹುಚ್ಚಣ್ಣವರ, ಬಶೀರಾ ವಕಾರದ, ಶಾಹೀದಾಬೇಗಂ ಬಳಿಗಾರ, ಶ್ವೇತಾ ಬೆಳಗಟ್ಟಿ ಅವರು ಬಂಗಾರದ ಪದಕ ಗಳಿಸುವದರೊಂದಿಗೆ ಕರ್ನಾಟಕ ರಾಜ್ಯ ಚಾಂಪಿಯನ್‌ ತನ್ನದಾಗಿಸಿಕೊಂಡಿದೆ.

ಈ ಎಲ್ಲಕುಸ್ತಿಪಟುಗಳು ನ. 29ರಿಂದ ಡಿ. 1ರ ವರೆಗೆ ಪಂಜಾಬ್‌ನ ಜಲಂದರ್‌ನಲ್ಲಿನಡೆಯುವ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಎಲ್ಲಕುಸ್ತಿಪಟುಗಳು ಜಿಲ್ಲಾಕ್ರೀಡಾಂಗಣದ ಕುಸ್ತಿ ಮನೆಯಲ್ಲಿತರಬೇತಿ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಜಿಪಂ ಸಿಇಒ ಆನಂದ ಕೆ., ಜಿಪಂ ಉಪಕಾರ್ಯದರ್ಶಿ ಕಲ್ಮೇಶ್‌ ಹಾಗೂ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಬಿ. ವಿಶ್ವನಾಥ, ತರಬೇತುದಾರರಾದ ಶರಣಗೌಡ ಬೇಲೇರಿ, ಗಿರೀಶ ಬಳೂರ ಅಭಿನಂದಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ