ಆ್ಯಪ್ನಗರ

ಸ್ವಯಂ ಪ್ರೇರಿತ ರಕ್ತದಾನ ಅಗತ್ಯ

ಗಜೇಂದ್ರಗಡ : ಸ್ವಾಮಿ ವಿವೇಕಾನಂದರ ತತ್ವಾದರ್ಶ ನಿತ್ಯ ಬದುಕಿನಲ್ಲಿ ಅಳವಡಿಕೊಳ್ಳುವುದರ ಜತೆಗೆ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಯುವ ಸಮೂಹ ಮುಂದಾಗಬೇಕು ಎಂದು ಸ್ನೇಹಾ ಮಹಿಳಾ ಮಂಡಳ ಅಧ್ಯಕ್ಷೆ ಸಂಯುಕ್ತಾ ಬಂಡಿ ಹೇಳಿದರು.

Vijaya Karnataka 13 Jan 2019, 5:00 am
ಗಜೇಂದ್ರಗಡ : ಸ್ವಾಮಿ ವಿವೇಕಾನಂದರ ತತ್ವಾದರ್ಶ ನಿತ್ಯ ಬದುಕಿನಲ್ಲಿ ಅಳವಡಿಕೊಳ್ಳುವುದರ ಜತೆಗೆ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಯುವ ಸಮೂಹ ಮುಂದಾಗಬೇಕು ಎಂದು ಸ್ನೇಹಾ ಮಹಿಳಾ ಮಂಡಳ ಅಧ್ಯಕ್ಷೆ ಸಂಯುಕ್ತಾ ಬಂಡಿ ಹೇಳಿದರು.
Vijaya Karnataka Web self inspired blood donation is required
ಸ್ವಯಂ ಪ್ರೇರಿತ ರಕ್ತದಾನ ಅಗತ್ಯ


ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಶನಿವಾರ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಶಾಸಕ ಕಳಕಪ್ಪ ಬಂಡಿ ಅಭಿಮಾನ ಬಳಗದಿಂದ ರಕ್ತದಾನ ಶಿಬಿರ ಸಮಾರಂದ ಅಧ್ಯಕ್ಷ ತೆ ವಹಿಸಿ ಮಾತನಾಡಿದರು.

ಸಾವು ಬದಕಿನ ಮಧ್ಯೆ ಹೋರಾಟ ನಡೆಸಿದವರನ್ನು ಬದುಕಿಸಲು ರಕ್ತದಾನ ಮಾಡುವುದು ಸಮಾಜಮುಖಿ ಕಾರ್ಯದಲ್ಲಿ ಒಂದಾಗಿದೆ ಎಂದರು.

ತಾಲೂಕು ವೈದ್ಯಾಧಿಕಾರಿ ಎಂ.ಬಿ. ಪಾಟೀಲ, ಸಂಪತ್‌ಕುಮಾರ ಚಲವಾದಿ, ಕೆ.ಎ. ಹಾದಿಮನಿ ಮಾತನಾಡಿದರು.ಮತ್ತೊಂದು ಜೀವ ಉಳಿಸಿದ ಶ್ರೇಯಸ್ಸು ರಕ್ತದಾನಿಗೆ ಸಲ್ಲುತ್ತದೆ ಎಂದರು. ಭಾಸ್ಕರ್‌ ರಾಯಬಾಗಿ, ರಾಜೇಂದ್ರ ಘೋರ್ಪಡೆ, ಶರಣಪ್ಪ ರೇವಡಿ, ಶರಣಪ್ಪ ಉಪ್ಪಿನಬೆಟಗೇರಿ, ಸುಭಾಷ ಮ್ಯಾಗೇರಿ, ಯು.ಆರ್‌. ಚೆನ್ನಮ್ಮನವರ, ಸಿದ್ದಪ್ಪ ಚೋಳಿನ, ಕೌಸರಬಾನು ಹುನಗುಂದ, ಬಾಳು ಗೌಡರ, ವೈದ್ಯಾರಾದ ಸಂಗಮೇಶ ಬಂಕದ, ಮಹೇಶ ಚೋಳಿನ, ಸುನೀಲ ಹಬೀಬ, ಬಸವರಾಜ ನಾಲಗಟ್ಟಿ, ಅಶೋಕ ಕೋಳಿವಾಡ, ಉಪಸ್ಥಿತರಿದ್ದರು. 70 ದಾನಿಗಳು ಮಡಿದ ರಕ್ತವನ್ನು ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ರಕ್ತನಿಧಿ ಕೇಂದ್ರಕ್ಕೆ ಕಳಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ