ಆ್ಯಪ್ನಗರ

ವೈದ್ಯ ವೃತ್ತಿಯಿಂದ ಜನ ಸೇವೆ ಮಾಡಿ

ಗದಗ : ದೇಶದಲ್ಲಿ ವಿಶ್ವ ಬ್ಯಾಂಕ್‌ ವರದಿ ಪ್ರಕಾರ ಹತ್ತು ಸಾವಿರ ಜನಸಂಖ್ಯೆಗೆ ಏಳು ವೈದ್ಯರಿರುತ್ತಾರೆ. ಇದು ಅತಿ ಕಡಿಮೆಯಾಗಿದ್ದು ಯುವ ಪೀಳಿಗೆಯು ವೈದ್ಯ ವೃತ್ತಿಯನ್ನು ಪಡೆದು ನಿಷ್ಠೆ, ಗೌರವಗಳಿಂದ ಜನ ಸೇವೆ ಮಾಡಬೇಕು ಎಂದು ಡಾ.ತ್ರಿವೇಣಿ ಜಂಬಾಳೆ ಹೇಳಿದರು.

Vijaya Karnataka 11 May 2019, 5:00 am
ಗದಗ : ದೇಶದಲ್ಲಿ ವಿಶ್ವ ಬ್ಯಾಂಕ್‌ ವರದಿ ಪ್ರಕಾರ ಹತ್ತು ಸಾವಿರ ಜನಸಂಖ್ಯೆಗೆ ಏಳು ವೈದ್ಯರಿರುತ್ತಾರೆ. ಇದು ಅತಿ ಕಡಿಮೆಯಾಗಿದ್ದು ಯುವ ಪೀಳಿಗೆಯು ವೈದ್ಯ ವೃತ್ತಿಯನ್ನು ಪಡೆದು ನಿಷ್ಠೆ, ಗೌರವಗಳಿಂದ ಜನ ಸೇವೆ ಮಾಡಬೇಕು ಎಂದು ಡಾ.ತ್ರಿವೇಣಿ ಜಂಬಾಳೆ ಹೇಳಿದರು.
Vijaya Karnataka Web serve people from a doctors profession
ವೈದ್ಯ ವೃತ್ತಿಯಿಂದ ಜನ ಸೇವೆ ಮಾಡಿ


ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಜೀವರಸಾಯನ ಶಾಸ್ತ್ರ ವಿಭಾಗದ ವತಿಯಿಂದ ಶುಕ್ರವಾರ ಆಧುನಿಕ ತಂತ್ರಜ್ಞಾನಗಳಿಂದ ರೋಗಗಳ ಪತ್ತೆ ಹಚ್ಚುವಿಕೆಯ ವೈದ್ಯಕೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಅನೇಕ ವಿರಳ ರೋಗಗಳು ಹಾಗೂ ಸಾಮಾನ್ಯ ರೋಗಗಳನ್ನು ಪತ್ತೆ ಹಚ್ಚಲು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಕಡಿಮೆ ಸಮಯದಲ್ಲಿ ವರದಿ ಕೊಡಬಹುದು. ಇಂತಹ ವಿರಳ ರೋಗ ಪತ್ತೆ ಹಚ್ಚುವುದರಲ್ಲಿ ಜೀವ ರಸಾಯನ ಶಾಸ್ತ್ರದ ಕೊಡುಗೆ ಅಪಾರವಾಗಿದೆ. ಈ ನಿಟ್ಟಿನಲ್ಲಿ ವೈದ್ಯರುಗಳಲ್ಲಿ ಹಾಗೂ ಜೀವರಸಾಯನ ಶಾಸ್ತ್ರದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಕಾರ್ಯಾಗಾರ ಸಹಕಾರಿಯಾಗಿದೆ ಎಂದರು.

ಪ್ರಾಂಶುಪಾಲ ಹಾಗೂ ಜೀವರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ ದೇಶಪಾಂಡೆ ಮಾತನಾಡಿ, ವೈದ್ಯ ವೃತ್ತಿ ಅತ್ಯಂತ ಪವಿತ್ರವಾಗಿದ್ದು, ರೋಗಿಗಳ ನೋವು ನಿವಾರಿಸುವ ಕೆಲಸವನ್ನು ವೈದ್ಯರು ಮಾಡಬೇಕು ಎಂದರು.

ಕರ್ನಾಟಕ ಸರಕಾರದ ಯುವ ಮತ್ತು ಕ್ರೀಡಾ ಇಲಾಖೆ ಅಪರ ಕಾರ್ಯದರ್ಶಿ ಡಾ.ಕಲ್ಪನಾ ಗೋಪಾಲನ್‌ ಮಾತನಾಡಿದರು.

ಡಾ.ಟಿ.ಎಸ್‌. ಕೇಶವಪ್ರಸಾದ, ಡಾ.ಶಿವಾಜಿ ಜಾಧವ್‌, ಡಾ.ರವೀಶಗೌಡ, ಡಾ.ಬಾಣಪ್ಪ, ಡಾ.ಕೆ. ಗೋಡಕಿಂಡಿ, ಡಾ.ಎಚ್‌. ಶ್ರೀನಿವಾಸ ಉಪನ್ಯಾಸ ನೀಡಿದರು. ಕಾರ್ಯಾಗಾರದಲ್ಲಿ 150ಕ್ಕೂ ಹೆಚ್ಚು ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ