ಆ್ಯಪ್ನಗರ

ಮಕ್ಕಳಿಗೆ ಸಮಯ ಮೀಸಲಿಡಿ

ಗದಗ: ಮಕ್ಕಳ ಇಷ್ಟ-ಕಷ್ಟಗಳನ್ನು ಪಾಲಕರೇ ನಿರ್ಧರಿಸಬೇಕು, ಅವರಿಗಾಗಿ ಮಮತೆ ಮತ್ತು ಸಮಯವನ್ನು ಮಕ್ಕಳಿಗಾಗಿ ಮೀಸಲಿಡಬೇಕು ಎಂದು ವೀರೇಶ ಪಾಟೀಲ ಹೇಳಿದರು.

Vijaya Karnataka 14 Jan 2020, 5:32 pm
ಗದಗ: ಮಕ್ಕಳ ಇಷ್ಟ-ಕಷ್ಟಗಳನ್ನು ಪಾಲಕರೇ ನಿರ್ಧರಿಸಬೇಕು, ಅವರಿಗಾಗಿ ಮಮತೆ ಮತ್ತು ಸಮಯವನ್ನು ಮಕ್ಕಳಿಗಾಗಿ ಮೀಸಲಿಡಬೇಕು ಎಂದು ವೀರೇಶ ಪಾಟೀಲ ಹೇಳಿದರು.
Vijaya Karnataka Web set aside time for children
ಮಕ್ಕಳಿಗೆ ಸಮಯ ಮೀಸಲಿಡಿ


ಸ್ಥಳೀಯ ಬಾರತೀಯ ಶಿಕ್ಷಣ ಸಂಸ್ಥೆಯ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯಡಿಯಲ್ಲಿಇತ್ತೀಚೆಗೆ ಆಯೋಜಿಸಲಾದ ಪಾಲಕರಿಗಾಗಿ ಅಭಿಪ್ರೇರಣಾತ್ಮಕ ಹಾಗೂ ಮಾರ್ಗದರ್ಶನ ಕಾರ್ಯಕ್ರಮದಲ್ಲಿಮಾತನಾಡಿದರು.

ತಾಯಿಯ ಗರ್ಭದಿಂದಲೇ ಆರಂಭವಾಗುವ ಮಗುವಿನ ಶಿಕ್ಷಣ, ಸಂಸ್ಕಾರ, ಪರೋಪಕಾರ ಬುದ್ಧಿ, ನೈತಿಕ ಮೌಲ್ಯಗಳು, ಮಮತೆ, ಅಂತಃಕರಣಗಳಂತ ಸಾವಿರಾರು ಜೀವನದ ಪಾಠಗಳನ್ನು ರಕ್ತಗತವಾಗಿ ಪಡೆ ಬರುವುದರಿಂದ ಪಾಲಕರಲ್ಲಿಆ ಗುಣಗಳ ಬೆಳೆದು, ಅದರ ಮೇಲೆ ಮಗುವಿನ ಬದುಕಿನ ಸುಂದರತೆ ಮತ್ತು ಸುವಿಚಾರಗಳನ್ನು ಒಡಮೂಡಿಸಲು ಸಾಧ್ಯ. ಅಲ್ಲದೇ ವಿದ್ಯಾರ್ಥಿಗಳಲ್ಲಿಪರಿವರ್ತನೆಯಾಗುವ ಮೊದಲು ಪಾಲಕರು ಪರಿವರ್ತನೆಗೊಳ್ಳಬೇಕು ಎಂದರು.

ಮಗುವಿನ ಸರ್ವಾಂಗೀಣ ಪ್ರಗತಿಗೆ ಹೆತ್ತವರ ಹೊಣೆಗಾರಿಕೆ ಹೆಚ್ಚಿನದಾಗಿದ್ದು ಅದರತ್ತ ಜಾಗೃತಿ ವಹಿಸಬೇಕು ಎಂದರು.

ಪ್ರೊ.ರವೀಂದ್ರ ಕೊಪ್ಪರ ಅಧ್ಯಕ್ಷತೆ ವಹಿಸಿ, ಮಕ್ಕಳ ಸಮಗ್ರ ಅಭಿವೃದ್ಧಿಯು ಶಿಕ್ಷಣ ರಂಗದ ಮೂಲ ತತ್ವ ಸಿದ್ಧಾಂತಗಳು ಸಾಕಾರಗೊಂಡಾಗ ಮಾತ್ರ ಸಾಧ್ಯ. ಇದನ್ನು ಸಫಲಗೊಳಿಸುವಲ್ಲಿಸಂಸ್ಥೆ, ಪಾಲಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಂಪೂರ್ಣ ಸಹಕಾರ, ಸಹಾಯ ಜವಾಬ್ದಾರಿ ಹೊಂದಬೇಕು. ತಮ್ಮ ಮಕ್ಕಳಿಗೆ ಬೇಕಾದ ವಾತಾವರಣವನ್ನು ಪಾಲಕರು ಒದಗಿಸಬೇಕು. ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಕರು ಆ ದಿಸೆಯಲ್ಲಿಕೈ ಜೋಡಿಸಬೇಕು ಎಂದರು.

ಡಾ.ಎಸ್‌.ವೈ.ಚಿಕ್ಕಟ್ಟಿ ಮಾತನಾಡಿ, ಇಂದಿನ ಕೆಲವು ಪಾಲಕರು ಮಕ್ಕಳಿಗೆ ಕಲಿಕೆಗೆ ಅನವಶ್ಯಕವಾದ ಇಚ್ಛೆಗಳನ್ನು ಪೂರೈಸಿ ದಾರಿ ತಪ್ಪುವುದಕ್ಕೆ ಒಂದು ರೀತಿಯಲ್ಲಿಕಾರಣರಾಗಿದ್ದಾರೆ. ವಿದ್ಯಾರ್ಥಿಗಳ ಮನಸ್ಸು ಯಾವಾಗಲೂ ಪರಿಶುದ್ಧವಾಗಿರುವಂತಹದ್ದು. ಅದನ್ನು ಅರಿತು ವರ್ತಿಸಬೇಕು. ಶಾಲಾ ಪಾಲಕರಿಗೆ ತಮ್ಮ ಕರ್ತವ್ಯದ ಅರಿವು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪಾಲಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಎ.ಕೆ.ಕಿರೇಸೂರು, ವಿ.ಬಿ.ಶೇಷಗಿರಿ, ಪ್ರೊ.ಎಚ್‌.ಎಫ್‌. ಪೂಜಾರ, ಸುರೇಶ ಚಿಕ್ಕಟ್ಟಿ, ಯಲ್ಲಪ್ಪ ಟಿ., ಪ್ರೊ.ವಿನಯ್‌ ಚಿಕ್ಕಟ್ಟಿ, ಜಯದೇವಿ ಕವಲೂರು ಇದ್ದರು.

ಪ್ರಾ.ವಿನಯ್‌ ಚಿಕ್ಕಟ್ಟಿ ಸ್ವಾಗತಿಸಿದರು. ಪ್ರೊ.ಬಿಪಿನ್‌ ಚಿಕ್ಕಟ್ಟಿ ವಂದಿಸಿದರು. ಪ್ರತಿಭಾ ಅಂಗಡಿ, ಭೂಮಿಕಾ ಟಿ.ಎಚ್‌. ನಿರೂಪಿಸಿದರು. ಸರ್ಪಭೂಷಣ ಅಂಗಡಿ ಪರಿಚಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ