ಆ್ಯಪ್ನಗರ

ಅತ್ಯಾಚಾರಿಗಳ ವಿರುದ್ಧ ಎಸ್‌ಎಫ್‌ಐ ಆಕ್ರೋಶ

ಗಜೇಂದ್ರಗಡ : ಉತ್ತರ ಪ್ರದೇಶ ಉನ್ನಾವದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಜೀವ ಕಳೆದುಕೊಂಡ ಸಂತ್ರಸ್ಥೆಗೆ ನ್ಯಾಯ ಸಿಗಬೇಕು ಹಾಗೂ ಕೂಡಲೇ ಕಾಮುಕರಿಗೆ ಗಲ್ಲುಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿ ಎಸ್‌ಎಫ್‌ಐ ಕಾರ‍್ಯಕರ್ತರು ಪ್ರತಿಭಟನೆ ನಡೆಸಿದರು.

Vijaya Karnataka 10 Dec 2019, 6:15 pm
ಗಜೇಂದ್ರಗಡ : ಉತ್ತರ ಪ್ರದೇಶ ಉನ್ನಾವದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಜೀವ ಕಳೆದುಕೊಂಡ ಸಂತ್ರಸ್ಥೆಗೆ ನ್ಯಾಯ ಸಿಗಬೇಕು ಹಾಗೂ ಕೂಡಲೇ ಕಾಮುಕರಿಗೆ ಗಲ್ಲುಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿ ಎಸ್‌ಎಫ್‌ಐ ಕಾರ‍್ಯಕರ್ತರು ಪ್ರತಿಭಟನೆ ನಡೆಸಿದರು.
Vijaya Karnataka Web sfis outrage against rapists
ಅತ್ಯಾಚಾರಿಗಳ ವಿರುದ್ಧ ಎಸ್‌ಎಫ್‌ಐ ಆಕ್ರೋಶ


ಪುರಸಭೆ ಆವರಣದಿಂದ ರಾರ‍ಯಲಿ ಆರಂಭಿಸಿ ಕೆಕೆ ಸರ್ಕಲ್‌ ತಲುಪಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದ ಉಪ ತಹಸೀಲ್ದಾರ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿದರು.

ಬಹಿರಂಗ ಸಭೆಯಲ್ಲಿಚಂದ್ರು ರಾಠೋಡ ಮಾತನಾಡಿ, ಉತ್ತರಪ್ರದೇಶದ ಉನ್ನಾವದಲ್ಲಿಅತ್ಯಾಚಾರಕ್ಕೆ ಒಳಗಾಗಿದ್ದ ಯುವತಿ ಮೇಲೆ ಕಾಮುಕರು ಪೆಟ್ರೋಲ್‌ ಸುರಿದು,ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.ಇದೊಂದು ಬೆಚ್ಚಿ ಬೀಳಿಸುವ ಘಟನೆ ಎಂದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಕಳಕೇಶ ವಾಲೀಕಾರ,ಅರ್ಜುನ್‌ ರಾಠೋಡ, ಷಣ್ಮುಖ ಚವ್ಹಾಣ,ರೇಣುಕಾ ಕುರಿ,ಶೋಭಾ ಅಂಗಡಿ,ವೈಷ್ಣವಿ,ಶೋಭಾ ಅಂಗಡಿ,ಸಾವಿತ್ರಿ ರಾಠೋಡ,ವಿನೀತ ನಾಯಕ,ವಿದ್ಯಾಶ್ರೀ ನರೇಗಲ್ಲ,ಸವಿತಾ ಬಾಣದ,ಸಾವಿತ್ರಿ ಮೂಲಿಮನಿ, ಅಕ್ಷತಾ ಜಕ್ಕಲಿ,ಹುಸೇನಬಿ ದ್ಯಾಂಪುರ, ಮೌನೇಶ ಬಡಿಗೇರ, ಪವಿತ್ರಾ ರಾಠೋಡ , ಪ್ರತಿಭಾ ಪಾಟೀಲ,ಗೀತಾ ವಡ್ಡಟ್ಟಿ, ಸವಿತಾ ಅಜ್ಮೀರ, ರಮೇಶ ಕೊಳಗಲಿ, ರಾಜು ಮರಾಠಿ, ಮಹೇಶ ಮಾಳೋತ್ತರ, ಸಲೀಂಭಾಷಾ,ಅನು ಹಡಪದ ಇತರರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ