ಆ್ಯಪ್ನಗರ

ಶರಣರ ಸನ್ಮಾರ್ಗದಲ್ಲಿ ಮಡವಾಳ ಮಾಚಿದೇವರು

ಮುಂಡರಗಿ : 12 ನೇ ಶತಮಾನದಲ್ಲಿ ತನ್ನ ಕಾಯಕನಿಷ್ಠೆಯಲ್ಲಿ ತೊಡಗಿಕೊಂಡು ಸಮಾಜದ ನ್ಯೂನತೆಗಳನ್ನು ವಚನ ಮೂಲಕ ಸಾದರ ಪಡಿಸುತ್ತ ಶರಣ ಬಸವಣ್ಣನವರ ಸನ್ಮಾರ್ಗದಲ್ಲಿ ನಡೆದ ಮಡಿವಾಳ ಮಾಚಿದೇವರು ನೇರ ನಿಷ್ಠುರತೆಗೆ ಹೆಸರಾಗಿದ್ದರು ಎಂದು ಮಡಿವಾಳ ಸಮಾಜದ ಅಧ್ಯಕ್ಷ ದ್ಯಾಮಣ್ಣ ಮಡಿವಾಳರ ಹೇಳಿದರು.

Vijaya Karnataka 2 Feb 2019, 5:00 am
ಮುಂಡರಗಿ : 12 ನೇ ಶತಮಾನದಲ್ಲಿ ತನ್ನ ಕಾಯಕನಿಷ್ಠೆಯಲ್ಲಿ ತೊಡಗಿಕೊಂಡು ಸಮಾಜದ ನ್ಯೂನತೆಗಳನ್ನು ವಚನ ಮೂಲಕ ಸಾದರ ಪಡಿಸುತ್ತ ಶರಣ ಬಸವಣ್ಣನವರ ಸನ್ಮಾರ್ಗದಲ್ಲಿ ನಡೆದ ಮಡಿವಾಳ ಮಾಚಿದೇವರು ನೇರ ನಿಷ್ಠುರತೆಗೆ ಹೆಸರಾಗಿದ್ದರು ಎಂದು ಮಡಿವಾಳ ಸಮಾಜದ ಅಧ್ಯಕ್ಷ ದ್ಯಾಮಣ್ಣ ಮಡಿವಾಳರ ಹೇಳಿದರು.
Vijaya Karnataka Web GDG-1MDR2 MM
ಮುಂಡರಗಿ ತಹಸೀಲ್ದಾರ ಕಾರ್ಯಾಲಯದಲ್ಲಿ ಶುಕ್ರವಾರ ಮಡಿವಾಳ ಮಾಚಿದೇವ ಜಯಂತಿ ಆಚರಿಸಲಾಯಿತು.


ಇಲ್ಲಿಯ ತಾಲೂಕು ಆಡಳಿತ ವತಿಯಿಂದ ನಡæದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಶರಣರಲ್ಲಿಯೇ ಅಗ್ರಗಣ್ಯರಾಗಿದ್ದ ಮಾಚಿದೇವ, ಎಲ್ಲರೊಂದಿಗೆ ಸಾಮರಸ್ಯ ಬದುಕು ನಡೆಸಿದರು. ಸಮಾಜ ಕ್ರಾಂತಿಗೆ ಬಸವಣ್ಣ ಇತರ ಶರಣರ ಜತೆಗೂಡಿ ಸಮಾನತೆ ಬಿಂಬಿಸಲು ಯತ್ನಿಸಿದ ಮಹಾಪುರುಷರು ಎಂದರು.

ಅಧ್ಯಕ್ಷ ತೆ ವಹಿಸಿದ್ದ ವೆಂಕಟೇಶ ನಾಯಕ ಮಾತನಾಡಿ, ಸರಕಾರ ಸಲ್ಲ ಸಮುದಾಯ ಮತ್ತು ಸಮಾಜದಲ್ಲಿ ಅನೇಕ ಬದಲಾವಣೆಗೆ ಕಾರಣವಾದ ಮಹಾನ್‌ ಪುರುಷರ ಜಯಂತಿ ಆಚರಿಸುತ್ತಿದೆ. ಸಮಾಜದಲ್ಲಿ ಬೇಧ-ಭಾವ ಇಲ್ಲದೆ ಒಂದೇ ರೀತಿಯಲ್ಲಿ ಬದುಕಲು ಹಕ್ಕಿದೆ ಎಂಬ ಪ್ರತಿಪಾದನೆ ಮಾಡಿದ ಶರಣರ ತತ್ವಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರಿಗೆ ನಿಜವಾದ ಗೌರವ ಸಲ್ಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಎಸ್‌.ಎಸ್‌.ಬಿಚ್ಚಾಲಿ, ಮೇಗಲಮನಿ, ಲಕ್ಷ ್ಮಣ ತಗಡಿಮನಿ, ನಾಗರಾಜ ಮಡಿವಾಳರ, ಮುತ್ತಣ್ಣ, ವಿರೇಶ, ಹನುಮಂತ, ಶಿವು ಮಡಿವಾಳರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ