ಆ್ಯಪ್ನಗರ

'ಶರಣರ ವಚನ ಚಿಂತನೆ ಮಾಡಿ '

ಮುಳಗುಂದ : ಷಟ್‌ಸ್ಥಲ ಎಂಬುದೊಂದು ವಿಚಾರ ಧಾರೆಗಳನ್ನು ಮೀರಿ ಇರುವುದು. ಐಕ್ಯದಿಂದಾಚೆ ಇರುವ ಶರಣರ ಸಾಧನೆಯನ್ನು ಎಲ್ಲರೂ ಆಚರಿಸಬೇಕು. ಶರಣರ ವಚನಗಳ ಬಗ್ಗೆ ಚಿಂತೆ ಇರಬೇಕು. ಜಾತ್ರೆ ಎನ್ನುವುದನ್ನು ಆನಂದಿಸಬೇಕು ಎಂದು ನೀಲಗುಂದದ ಗುದ್ನೇಶ್ವರ ಮಠದ ಪ್ರಭುಲಿಂಗದೇವರು ಹೇಳಿದರು.

Vijaya Karnataka 17 Feb 2019, 5:00 am
ಮುಳಗುಂದ : ಷಟ್‌ಸ್ಥಲ ಎಂಬುದೊಂದು ವಿಚಾರ ಧಾರೆಗಳನ್ನು ಮೀರಿ ಇರುವುದು. ಐಕ್ಯದಿಂದಾಚೆ ಇರುವ ಶರಣರ ಸಾಧನೆಯನ್ನು ಎಲ್ಲರೂ ಆಚರಿಸಬೇಕು. ಶರಣರ ವಚನಗಳ ಬಗ್ಗೆ ಚಿಂತೆ ಇರಬೇಕು. ಜಾತ್ರೆ ಎನ್ನುವುದನ್ನು ಆನಂದಿಸಬೇಕು ಎಂದು ನೀಲಗುಂದದ ಗುದ್ನೇಶ್ವರ ಮಠದ ಪ್ರಭುಲಿಂಗದೇವರು ಹೇಳಿದರು.
Vijaya Karnataka Web HBL-1602-2-3-16MUL1
ಮುಳಗುಂದ ಬಾಲಲೀಲಾ ಮಹಾಂತ ಶಿವಯೋಗಿಗಳ 160ನೇ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅಗಡಿ ಹಾಗೂ ಗುತ್ತಲದ ಪ್ರಭುಸ್ವಾಮಿಮಠದ ಶ್ರೀ ಗುರುಸಿದ್ದ ಮಹಾಸ್ವಾಮಿಗಳು ಧ್ವಜಾರೋಹಣ ನೆರವೇರಿಸಿದರು.


ಅವರು ಶನಿವಾರ ಪಟ್ಟಣದ ಬಾಲಲೀಲಾ ಮಹಾಂತ ಶಿವಯೋಗಿಗಳ 160ನೇ ಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವ ಷಟ್‌ಸ್ಥಲ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಭುಸ್ವಾಮಿಮಠ ಅಗಡಿ ಹಾಗೂ ಗುತ್ತಲದ ಗುರುಸಿದ್ದ ಮಹಾಸ್ವಾಮಿಗಳು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಶರಣರು ಹಾಕಿಕೊಟ್ಟ ಆಚಾರ ವಿಚಾರಗಳನ್ನು ಎಲ್ಲರೂ ಚಿಂತನ ಮಂಥನ ಮಾಡುವಂತಾಗಬೇಕು ಎಂದರು. ಮುಳಗುಂದ ಗವಿಮಠ ,ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಕಂಪ್ಲಿ ಕಲ್ಮಠದ ಅಭಿನವ ಪ್ರಭು ಮಹಾಸ್ವಾಮಿಗಳು, ಗದಗ ಎಪಿಎಮ್‌ಸಿ ಅಧ್ಯಕ್ಷ ಸಿ.ಬಿ.ಬಡ್ನಿ. ಕೆ.ಎಲ್‌ ಕರಿಗೌಡ್ರ, ಜಾತ್ರಾ ಮಹೋತ್ಸವ ಕಮೀಟಿ ಅಧ್ಯಕ್ಷ ಷಣ್ಮುಖಪ್ಪ ಬಡ್ನಿ, ಉಪಾಧ್ಯಕ್ಷ ಗುರಣ್ಣ ಜವಳಿ,ಮಹಾಂತೇಶ ಕೋರಿ, ಫಕ್ಕೀರಯ್ಯ ಅಮೋಘಿಮಠ, ವಿಜಯಕುಮಾರ ನೀಲಗುಂದ, ಅಶೋಕ ಸೊನಗೋಜಿ, ಬಿ.ವಿ.ಸುಂಕಾಪೂರ, ರಾಮಣ್ಣಾ ಕಮಾಜಿ, ಸಂಜಯ ನೀಲಗುಂದ, ಶಿವಬಸವ ಹಸಬಿ, ಶಿದ್ಧಲಿಂಗೇಶ ಕುರ್ತಕೋಟಿ, ನಾಗೇಶ ಪ್ರ. ಬಾಳೀಕಾಯಿ, ಜಗದೀಶ ಬಟ್ಟೂರ, ಎಸ್‌.ಎಮ್‌.ಉಜ್ಜಣ್ಣವರ, ರಾಮಣ್ಣ ಕುಲಕರ್ಣಿ, ಶಿದ್ದು. ಕತ್ತಿಶೆಟ್ಟರ, ಅಶೋಕ ಮೆಣಸಿನಕಾಯಿ, ಇತರರು ಉಪಸ್ಥಿತರಿದ್ದರು. ಶಿಕ್ಷ ಕ ಪಿ.ಎಸ್‌. ಮರಿದೇವರಮಠ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

ಯೋಧರಿಗೆ ಗೌರವ :

ಜಮ್ಮು -ಕಾಶ್ಮೀರದಲ್ಲಿ ವೀರ ಮರಣಹೊಂದಿದ ವೀರಯೋಧರಿಗೆ ಮುಳಗುಂದದ ಬಾಲಲೀಲಾ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ನಡೆದ ನಡೆದ ಷಟ್‌ಸ್ಥಲ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮೌನಾಚರಣೆ ಮಾಡಿ ಗೌರವ ಸೂಚಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ