ಆ್ಯಪ್ನಗರ

ರೆಡ್ಡಿ ಪರ ಶೆಟ್ಟರ್‌ ಬ್ಯಾಟಿಂಗ್‌

ಗದಗ : ಜನಾರ್ದನ ರೆಡ್ಡಿ ಬಂಧನದಲ್ಲಿ ರಾಜ್ಯ ಸರಕಾರದ ಕೈವಾಡ ಇರುವ ಅನುಮಾನ ಮೂಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಆರೋಪಿಸಿದ್ದಾರೆ.

Vijaya Karnataka 12 Nov 2018, 5:00 am
ಗದಗ : ಜನಾರ್ದನ ರೆಡ್ಡಿ ಬಂಧನದಲ್ಲಿ ರಾಜ್ಯ ಸರಕಾರದ ಕೈವಾಡ ಇರುವ ಅನುಮಾನ ಮೂಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಆರೋಪಿಸಿದ್ದಾರೆ.
Vijaya Karnataka Web shettar bat for reddys
ರೆಡ್ಡಿ ಪರ ಶೆಟ್ಟರ್‌ ಬ್ಯಾಟಿಂಗ್‌


ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ರಾಜ್ಯದಲ್ಲಿ ನೂರಾರು ಕೋಟಿ ರೂ. ಹಗರಣ ನಡೆದರೂ ಗಂಭೀರವಾಗಿ ಪರಿಗಣಿಸದ ಸರಕಾರ ಎಲ್ಲೋ ಕಮೀಷನ್‌ ಡೀಲಿಂಗ್‌ ಆಗಿದೆ ಎನ್ನುವ ಕಾರಣಕ್ಕೆ ರೆಡ್ಡಿ ಬಂಧನವಾಗಿದೆ. ಈ ಪ್ರಕರಣದಲ್ಲಿ ರಾಜಕೀಯ ಪ್ರಭಾವ ಬೀರಿರುವ ಅನುಮಾನ ಮೂಡುತ್ತದೆ'' ಎಂದು ತಿಳಿಸಿದರು.

''ಸಚಿವ ಡಿಕೆಶಿ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆ ನಡೆದಾಗ ಇದೇ ಕಾಂಗ್ರೆಸ್‌ ನಾಯಕರು ರಾಜಕೀಯ ಬಣ್ಣ ಹಚ್ಚಿದ್ದರು. ಅದೇ ರೀತಿ ರಾಜಕೀಯ ಕಾರಣಕ್ಕೆ ರೆಡ್ಡಿ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ'' ಎಂದು ಆರೋಪಿಸಿದರು.

''ಈಶ್ವರಪ್ಪ ವಿರುದ್ಧ ಸಿದ್ದರಾಮಯ್ಯ ಕೀಳಾಗಿ ಮಾತನಾಡಿದ್ದು ಸರಿಯಲ್ಲ. ಈಶ್ವರಪ್ಪ ಅವರಿಗೆ ಮೆದುಳಿಲ್ಲ, ದಡ್ಡ ಅನ್ನೋ ಪದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಶೋಭೆ ತರಲ್ಲ. ಇಡಿ ಜಗತ್ತಿನಲ್ಲಿ ಸಿದ್ದರಾಮಯ್ಯ ತಾವೊಬ್ಬರೇ ಶ್ಯಾಣ್ಯಾ ಎಂದು ತಿಳಿದುಕೊಂಡಿದ್ದಾರಾ? ಇದರಿಂದ ಈಶ್ವರಪ್ಪ ಅವರ ಗೌರವಕ್ಕೆ ಧಕ್ಕೆ ಏನೂ ಆಗಲ್ಲ'' ಎಂದು ತಿರುಗೇಟು ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ