ಆ್ಯಪ್ನಗರ

ಧಾರವಾಡಕ್ಕೆ ಹೊರಟ ಶಿಗ್ಲಿ ರೊಟ್ಟಿ

ಲಕ್ಷ್ಮೇಶ್ವರ : ವಿದ್ಯಾಕಾಶಿ ಮತ್ತು ಪೇಡಾ ನಗರಿ ಧಾರವಾಡದಲ್ಲಿ ಜರುಗಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ ಅವರ ತವರು ಗ್ರಾಮ ಶಿಗ್ಲಿಯಿಂದ ಕಡಕ್‌ ರೊಟ್ಟಿಗಳು ಬರುವ ಅತಿಥಿಗಳಿಗೆ ಉಣಬಡಿಸಲು ಸಿದ್ದಗೊಳ್ಳುತ್ತಿವೆ.

Vijaya Karnataka 30 Dec 2018, 5:00 am
ಲಕ್ಷ್ಮೇಶ್ವರ : ವಿದ್ಯಾಕಾಶಿ ಮತ್ತು ಪೇಡಾ ನಗರಿ ಧಾರವಾಡದಲ್ಲಿ ಜರುಗಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ ಅವರ ತವರು ಗ್ರಾಮ ಶಿಗ್ಲಿಯಿಂದ ಕಡಕ್‌ ರೊಟ್ಟಿಗಳು ಬರುವ ಅತಿಥಿಗಳಿಗೆ ಉಣಬಡಿಸಲು ಸಿದ್ದಗೊಳ್ಳುತ್ತಿವೆ.
Vijaya Karnataka Web shigli bread from dharwad
ಧಾರವಾಡಕ್ಕೆ ಹೊರಟ ಶಿಗ್ಲಿ ರೊಟ್ಟಿ


ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದವರಾದ ಕಸಾಪ ಅಧ್ಯಕ್ಷ ಮನು ಬಳಿಗಾರ ಸಮ್ಮೇಳನಕ್ಕೆ ಕಡಕ್‌ ರೊಟ್ಟಿ ಉಣ ಬಡಿಸಬೇಕು ಎಂಬ ಮಹಾದಾಸೆಯಿಂದ ಉತ್ತರ ಕರ್ನಾಟಕದ ಪ್ರಸಿದ್ದ ಜವಾರಿ ಕಡಕ್‌ ರೊಟ್ಟಿ ಸಿದ್ದವಾಗುತ್ತಿವೆ. ಈ ನಿಟ್ಟಿನಲ್ಲಿ ಶಿಗ್ಲಿ ಗ್ರಾಮದಲ್ಲಿ ಸ್ವಸಹಾಯದ ಗುಂಪಿನ ಮಹಿಳೆಯರು ತೆಳುವಾದ ರೊಟ್ಟಿ ಬಡಿಯುತ್ತಿದ್ದಾರೆ.

ಧಾರವಾಡ ಜಿಲ್ಲಾಡಳಿತ ರೊಟ್ಟಿ ಸಿದ್ದಪಡಿಸುವ ಹೋಣೆಗಾರಿಕೆಯನ್ನು ಮಧು ಹುಲಗೂರ, ಕಮಲಕ್ಕ ಕುಟ್ಟಪ್ಪನವರ, ಶೋಭಾ ಮೇಗಲನಿ ಅವರಿಗೆ ವಹಿಸಲಾಗಿದ್ದು, ಅವರೊಂದಿಗೆ ಅನೇಕ ಮಹಿಳೆಯರು ಕೈ ಜೋಡಿಸಿದ್ದು, ಕಳೆದ 15 ದಿನಗಳಿಂದ ನಿರಂತರವಾಗಿ ಮಾಡಲಾಗುತ್ತಿದೆ.

ರೊಟ್ಟಿ ಮಾಡುವ ವಿಧಾನ:

ಸಂಶಿಯಿಂದ ಮಾಲದಂಡಿ ಜೋಳ ತರಿಸಲಾಗಿದೆ.ಹಿಟ್ಟನ್ನು ನಾದಿ ಹದಗೊಳಿಸಿ ನಂತರ ನಾದಿದ ಹಿಟ್ಟನ್ನು ಯಂತ್ರದಲ್ಲಿ ಹಾಕಿ ನಂತರ ಗ್ಯಾಸ್‌ ಒಲೆಯಲ್ಲಿ ಬೇಯಿಸಿ ಬೆಂದ ನಂತರ ಒಣ ಹಾಕಲಾಗುತ್ತಿದೆ. ಜ.1 ರೊಳಗಾಗಿ ಸುಮಾರು 1 ಲಕ್ಷ ರೊಟ್ಟಿಯನ್ನು ಸಿದ್ದ ಪಡಿಸುವ ಗುರಿಯನ್ನು ಹೊಂದಲಾಗಿದೆ. ಹಗಲು-ರಾತ್ರಿಯನ್ನದೇ ಪ್ರತಿನಿತ್ಯ 3 ಸಾವಿರದಿಂದ 4 ಸಾವಿರ ರೊಟ್ಟಿ ಸಿದ್ದಪಡಿಸುತ್ತಿದ್ದು, ಪ್ರತಿ ರೊಟ್ಟಿಗೆ 3 ರೂ. ನಿಗಧಿ ಪಡಿಸಲಾಗುತ್ತಿದೆ. ಜೋಳದ ರೊಟ್ಟಿ ಜತೆಗೆ ಸಜ್ಜಿ ರೊಟ್ಟಿ ತಯಾರಿಸಲಾಗುತ್ತಿದೆ. ಒಟ್ಟಾರೆ ಶಿಗ್ಲಿಯ ಕಡಕ್‌ ರೊಟ್ಟಿಗಳು ರಾಜ್ಯಾಧ್ಯಂತ ಬರುವ ಸಾಹಿತ್ಯಾಸಕ್ತರಿಗೆ, ಸಾಹಿತಿಗಳಿಗೆ, ಬರುವ ಅತಿಥಿಗಳಿಗೆ ಮತ್ತು ಕನ್ನಡಾಭಿಮಾನಿಗಳ ಹೊಟ್ಟೆ ತುಂಬಿಸಲಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ