ಆ್ಯಪ್ನಗರ

ಶಿವಾಜಿ ಮಹಾರಾಜರ ತೊಟ್ಟಿಲೋತ್ಸವ

ಗಜೇಂದ್ರಗಡ : ಸ್ಥಳೀಯ ಶಿವಾಜಿ ಪೇಟೆಯ ಶ್ರೀ ಮಾರುತೇಶ್ವರ ಜೀರ್ಣೋದ್ಧಾರ ಸಮಿತಿ, ಕ್ಷ ತ್ರೀಯ ಮರಾಠಾ ಸಮಾಜ, ಮಾರುತಿ ತರುಣ ಸಂಘದಿಂದ ಛತ್ರಪತಿ ಶಿವಾಜಿ ಮಹಾರಾಜರ 392ನೇ ಜಯಂತ್ಯುತ್ಸವ ಪ್ರಯುಕ್ತ ತೊಟ್ಟಿಲೋತ್ಸವ ಫೆ. 27 ರಂದು ನಡೆಯಲಿದೆ.

Vijaya Karnataka 26 Feb 2019, 5:00 am
ಗಜೇಂದ್ರಗಡ : ಸ್ಥಳೀಯ ಶಿವಾಜಿ ಪೇಟೆಯ ಶ್ರೀ ಮಾರುತೇಶ್ವರ ಜೀರ್ಣೋದ್ಧಾರ ಸಮಿತಿ, ಕ್ಷ ತ್ರೀಯ ಮರಾಠಾ ಸಮಾಜ, ಮಾರುತಿ ತರುಣ ಸಂಘದಿಂದ ಛತ್ರಪತಿ ಶಿವಾಜಿ ಮಹಾರಾಜರ 392ನೇ ಜಯಂತ್ಯುತ್ಸವ ಪ್ರಯುಕ್ತ ತೊಟ್ಟಿಲೋತ್ಸವ ಫೆ. 27 ರಂದು ನಡೆಯಲಿದೆ.
Vijaya Karnataka Web shivaji maharajs festival
ಶಿವಾಜಿ ಮಹಾರಾಜರ ತೊಟ್ಟಿಲೋತ್ಸವ


ಬೆಳಗ್ಗೆ 8.15 ಕ್ಕೆ ವೇದಘೋಷಣೆಯೊಂದಿಗೆ ಭಗವಾಧ್ವಾಜಾರೋಹಣ, ತೊಟ್ಟಿಲೋತ್ಸವ ನೆರವೇರಲಿದೆ. 11ಕ್ಕೆ ಬೈಕ್‌ರಾರ‍ಯಲಿ ನಡೆಯಲಿದೆ. ಯಶವಂತ ಪ್ರತಾಪಸಿಂಹ ಘೋರ್ಪಡೆ, ದಿಲೀಪಸಿಂಗ್‌ ಅಣ್ಣಾ ಸಾಹೇಬ ಘೋರ್ಪಡೆ ಉಪಸ್ಥಿತರಿರುವರು. ಮರಾಠಾ ಸಮಾಜ ಧರ್ಮಗುರು ಬಲರಾಮಗಿರಿ ಶಂಕರ್‌ ಗಿರಿ ಗೋಸಾವಿಮಠ ಸಾನ್ನಿಧ್ಯ ವಹಿಸುವರು. ಪರಶುರಾಮ ದುಮ್ಮಾಳ ಅಧ್ಯಕ್ಷ ತೆ ವಹಿಸುವರು. ಸಿದ್ಧೇಶ ಕೆ. ಸೌಭಾಗ್ಯವತಿ ವಿದಳಾ ಉಪನ್ಯಾಸ ನೀಡುವರು.

ಶಾಸಕ ಕಳಕಪ್ಪ ಬಂಡಿ, ಮಾಜಿ ಶಾಸಕ ಜಿ.ಎಸ್‌. ಪಾಟೀಲ, ತಹಸೀಲ್ದಾರ ಗುರುಸಿದ್ದಯ್ಯಾ ಹಿರೇಮಠ, ರೋಣ ತಹಸೀಲ್ದಾರ ಕೆ. ಶರಣಮ್ಮಾ, ಪುರಸಭೆ ಸದಸ್ಯರಾದ ಶಿವರಾಜ ಘೋರ್ಪಡೆ, ಯಮನಪ್ಪ ತಿರಕೋಜಿ, ಶೇಖಪ್ಪ ರಾಮಜಿ, ಪಿಎಸ್‌ಐ ರಮೆಶ ಜಲಗೇರಿ, ಶ್ರೀಕಾಂತ ಅವಧೂತ, ಬಾಳಪ್ಪ ಪವಾರ, ರೇಣಪ್ಪ ಇಂಗಳೆ, ಚಾವಣಿ, ಡಾ. ಪಿ.ಬಿ. ರಾಮಜಿ, ಕೃಷ್ಣಾ ಸೂರ್ಯವಂಶಿ, ಪಿ.ವೈ. ನಿಂಬೋಜಿ, ಶಿವಾಜಿ ಹಾಳಕೇರಿ, ಪ್ರೀಯಾಬಾಯಿ ಶಿವರಾಜ ಘೋರ್ಪಡೆ, ಕಾಸೀಬಾಯಿ ಪರಶುರಾಮ ದುಮ್ಮಾಳ ಪಾಲ್ಗೋಳ್ಳುವರು. ಎಸ್‌ಎಸ್‌ ಎಲ್‌ಸಿ,ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಸನ್ಮಾನ ಮತ್ತು ಎತ್ತುಗಳಿಗೆ ಬಹುಮಾನ ವಿತರಣೆ ನಡೆಯಲಿದೆ. ಫೆ 28 ರಂದು ಸಾಮೂಹಿಕ ವಿವಾಹ ನಡೆಯಲಿದೆ ಎಂದು ಉತ್ಸವ ಕಮೀಟಿ ಅಧ್ಯಕ್ಷ ರಾಜೇಂದ್ರ ಘೋರ್ಪಡೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ