ಗದಗ : ಕಳೆದ ಕೆಲವು ದಿನಗಳಿಂದ ಮರೆಯಾಗಿದ್ದ ಮಳೆರಾಯ ಮತ್ತೆ ಕಾಣಿಸಿಕೊಂಡಿದ್ದಾನೆ. ಅವಳಿ ನಗರ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನ ತುಂತುರು ಮಳೆಯಾಯಿತು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮೋಡ-ಬಿಸಿಲಿನ ಜುಗಲ್ಬಂದಿ ನಡೆದಿತ್ತು. ಮಧ್ಯಾಹ್ನ ಏಕಾಏಕಿ ಅರ್ಧ ಗಂಟೆಗೂ ಹೆಚ್ಚು ಸಮಯ ಜೋರಾದ ಮಳೆ ಸುರಿಯಿತು. ಇಡೀ ದಿನ ಎಲ್ಲೆಡೆ ಮೋಡ ಮುಸುಕಿದ ವಾತಾವರಣ ಕಂಡುಬಂದಿತು. ಮಧ್ಯಾಹ್ನದಿಂದ ತುಂತುರು ಮಳೆ ಆರಂಭವಾಯಿತು. ತುಂತುರು ಮಳೆಯಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರು ಪರದಾಡಿದರು. ಹೀಗಾಗಿ ದೂಳಿನಿಂದ ಕೂಡಿದ್ದ ರಸ್ತೆಗೆ ತುಂತುರು ಮಳೆಯಿಂದ ಸ್ವಲ್ಪ ಧೂಳು ಕಡಿಮೆಯಾಗಿದೆ. ಹೀಗಾಗಿ ವಾಹನ ಸವಾರರು ಹಗಲಿನಲ್ಲಿ ಲೈಟ್ ಹಾಕಿಕೊಂಡು ಓಡಾಡುವ ಪ್ರಸಂಗ ಎದುರಾಗಿತ್ತು. ತುಂತುರು ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಅವಳಿ ನಗರದಲ್ಲಿ ತುಂತುರು ಮಳೆ
ಗದಗ : ಕಳೆದ ಕೆಲವು ದಿನಗಳಿಂದ ಮರೆಯಾಗಿದ್ದ ಮಳೆರಾಯ ಮತ್ತೆ ಕಾಣಿಸಿಕೊಂಡಿದ್ದಾನೆ. ಅವಳಿ ನಗರ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನ ತುಂತುರು ಮಳೆಯಾಯಿತು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮೋಡ-ಬಿಸಿಲಿನ ಜುಗಲ್ಬಂದಿ ನಡೆದಿತ್ತು. ಮಧ್ಯಾಹ್ನ ಏಕಾಏಕಿ ಅರ್ಧ ಗಂಟೆಗೂ ಹೆಚ್ಚು ಸಮಯ
Vijaya Karnataka 27 Jul 2019, 5:00 am