ಆ್ಯಪ್ನಗರ

ಬೇಡಿಕೆ ಈಡೇರದಿದ್ದರೆ ಹೆಸ್ಕಾಂಗೆ ಮುತ್ತಿಗೆ

ಶಿರಹಟ್ಟಿ : ಕೇಂದ್ರ ಸರಕಾರ ಪ್ರಧಾನಮಂತ್ರಿ ಸೌಭಾಗ್ಯ ಯೋಜನೆ ಸಹಜ್‌ ಬಿಜಲಿ ಹರ ಘರ್‌ ಯೋಜನೆಯನ್ನು ಜಾರಿಗೆ ತಂದಿದ್ದರೂ ಸಹ ತಾಲೂಕಿನಲ್ಲಿ ಈ ಯೋಜನೆ ಅನುಷ್ಠಾನಗೊಳ್ಳದಿರುವುದಕ್ಕೆ ನಮ್ಮ ಬೇಡಿಕೆಗಳು ಜೂ.30ರ ಒಳಗೆ ಈಡೇರದಿದ್ದಲ್ಲಿ ಜು.1ರಂದು ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಭಾರತೀಯ ಕಿಸಾನ ಸಂಘದ ಪ್ರಾಂತ ಕಾರ‍್ಯಕಾರಿಣಿ ಸದಸ್ಯ ವೀರಣ್ಣ ಮಜ್ಜಗಿ ಹೇಳಿದರು.

Vijaya Karnataka 29 Jun 2019, 5:00 am
ಶಿರಹಟ್ಟಿ : ಕೇಂದ್ರ ಸರಕಾರ ಪ್ರಧಾನಮಂತ್ರಿ ಸೌಭಾಗ್ಯ ಯೋಜನೆ ಸಹಜ್‌ ಬಿಜಲಿ ಹರ ಘರ್‌ ಯೋಜನೆಯನ್ನು ಜಾರಿಗೆ ತಂದಿದ್ದರೂ ಸಹ ತಾಲೂಕಿನಲ್ಲಿ ಈ ಯೋಜನೆ ಅನುಷ್ಠಾನಗೊಳ್ಳದಿರುವುದಕ್ಕೆ ನಮ್ಮ ಬೇಡಿಕೆಗಳು ಜೂ.30ರ ಒಳಗೆ ಈಡೇರದಿದ್ದಲ್ಲಿ ಜು.1ರಂದು ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಭಾರತೀಯ ಕಿಸಾನ ಸಂಘದ ಪ್ರಾಂತ ಕಾರ‍್ಯಕಾರಿಣಿ ಸದಸ್ಯ ವೀರಣ್ಣ ಮಜ್ಜಗಿ ಹೇಳಿದರು.
Vijaya Karnataka Web siege to hescom if demand is not met
ಬೇಡಿಕೆ ಈಡೇರದಿದ್ದರೆ ಹೆಸ್ಕಾಂಗೆ ಮುತ್ತಿಗೆ


ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.ಇದಕ್ಕಾಗಿ ಪ್ರಧಾನಿಯವರು 1600ಕೋಟಿ ರೂ. ಮೀಸಲಿರಿಸಿದ್ದಾರೆ. 31 ಮಾ 2019ರೊಳಗಾಗಿ ಅರ್ಹ ಫಲಾನುಭವಿಗಳ ಮನೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕಾಗಿತ್ತು. ಆದರೆ ಶಿರಹಟ್ಟಿಯ ಪಟ್ಟಣದಲ್ಲಿಯ 581 ಫಲಾನುಭವಿಗಳಿಗೂ ಸಹ ಇನ್ನೂ ವರೆಗೂ ವಿದ್ಯುತ್‌ ಸಂಪರ್ಕ ಕಲ್ಪಿಸಿಲ್ಲ. ಈ ಬಗ್ಗೆ ಹಲವು ಬಾರಿ ಮೌಖಿಕ ಹಾಗೂ ಲಿಖಿತವಾಗಿ ಮನವಿ ಸಲ್ಲಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ್ಲ. ಆದ್ದರಿಂದ ಕೇಂದ್ರ ಸರಕಾರದ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಜೂ.30ರ ವರೆಗೂ ಸಮಯಾವಕಾಶ ನೀಡಿದೆ. ಅವರು ಸ್ಪಂದಿಸದೇ ಹೋದಲ್ಲಿ ಅನಿವಾರ‍್ಯವಾಗಿ ಫಲಾನುಭವಿಗಳು ಸೇರಿದಂತೆ ಸಾರ್ವಜನಿಕರ ಸಹಕಾರದೊಂದಿಗೆ ಹೆಸ್ಕಾಂಗೆ ಮುತ್ತಿಗೆ ಹಾಕಲಾಗುವುದು ಎಂದರು. ಪಪಂ ಸದಸ್ಯ ಫಕ್ಕೀರೇಶ ರಟ್ಟಿಹಳ್ಳಿ, ಪರಶುರಾಮ ಡೊಂಕಬಳ್ಳಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ