ಗದಗ: ನಗರದ ಅಡವೀಂದ್ರ ಸ್ವಾಮಿಮಠದ ಅನ್ನಪೂರ್ಣೆಶ್ವರಿ ಮಂದಿರದಲ್ಲಿ ಜ.1 ರಂದು ಸಂಜೆ 6.30ಕ್ಕೆ 279ನೇ ಮಾಸಿಕ ಶಿವಾನುಭವ ಗೋಷ್ಠಿ ನಡೆಯಲಿದೆ. ಸಮ್ಮುಖವನ್ನು ಶ್ರೀಮಠದ ಧರ್ಮದರ್ಶಿ ಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ, ಅಧ್ಯಕ್ಷ ತೆಯನ್ನು ಶಿವಾನುಭವ ಸಮಿತಿ ಅಧ್ಯಕ್ಷ ನಿಂಗಪ್ಪ ಬಳಿಗಾರ ವಹಿಸುವರು. ಪಶು ಆಸ್ಪತ್ರೆ ಪಶು ವೈದ್ಯಾಧಿಕಾರಿ ಡಾ.ಶಿವಕುಮಾರ ಹೊಸಮಠ ಪಶು ಸಂರಕ್ಷ ಣೆ ಕುರಿತು ಉಪನ್ಯಾಸ ನೀಡುವರು. ಶಿವಲೀಲಾ ಕುರಡಗಿ ಆಗಮಿಸುವರು. ಗೋವಿಂದಪ್ಪ ಮುಕ್ತುಮ ಅವರನ್ನು ಸನ್ಮಾನಿಸಲಾಗುವುದು. ಶಂಭಣ್ಣ ಅರ್ಕಸಾಲಿ, ಶೇಖರಪ್ಪ ಹುಲ್ಲೂರ, ಪಾಂಡುರಂಗ ಕುರ್ತಕೋಟಿ ಅವರಿಂದ ಸಂಗೀತವಿದೆ. ಭಕ್ತಿ ಸೇವೆಯನ್ನು ಮೋಹನ ಗ್ವಾರಿ ವಹಿಸಿಕೊಂಡಿದ್ದಾರೆ ಎಂದು ಶಿವಾನುಭವ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಬಿ.ಪಾಟೀಲ ತಿಳಿಸಿದ್ದಾರೆ.
ಅಡವೀಂದ್ರ ಮಠದಲ್ಲಿ ಶಿವಾನುಭವ
ಗದಗ: ನಗರದ ಅಡವೀಂದ್ರ ಸ್ವಾಮಿಮಠದ ಅನ್ನಪೂರ್ಣೆಶ್ವರಿ ಮಂದಿರದಲ್ಲಿ ಜ.1 ರಂದು ಸಂಜೆ 6.30ಕ್ಕೆ 279ನೇ ಮಾಸಿಕ ಶಿವಾನುಭವ ಗೋಷ್ಠಿ ನಡೆಯಲಿದೆ. ಸಮ್ಮುಖವನ್ನು ಶ್ರೀಮಠದ ಧರ್ಮದರ್ಶಿ ಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ, ಅಧ್ಯಕ್ಷ ತೆಯನ್ನು ಶಿವಾನುಭವ ಸಮಿತಿ ಅಧ್ಯಕ್ಷ
Vijaya Karnataka 1 Jan 2019, 5:00 am