ಆ್ಯಪ್ನಗರ

ನಳದಲ್ಲಿ ಬಂತು ಹಾವು !

ನರಗುಂದ: ಸತತ ಮಳೆಯಿಂದ ಹಲವು ವಿಷ ಜಂತುಗಳು ಕಂಡು ಬುರುವುದು ಸಹಜ. ಆದರೆ ನಳದಲ್ಲಿಹಾವು ಬಂದ ಅಚ್ಚರಿಯ ಘಟನೆ ಇಲ್ಲಿನ ವಿನಾಯಕ ನಗರದಲ್ಲಿಭಾನುವಾರ ಕಂಡು ಬಂದಿದೆ.

Vijaya Karnataka 15 Oct 2019, 5:00 am
ನರಗುಂದ: ಸತತ ಮಳೆಯಿಂದ ಹಲವು ವಿಷ ಜಂತುಗಳು ಕಂಡು ಬುರುವುದು ಸಹಜ. ಆದರೆ ನಳದಲ್ಲಿಹಾವು ಬಂದ ಅಚ್ಚರಿಯ ಘಟನೆ ಇಲ್ಲಿನ ವಿನಾಯಕ ನಗರದಲ್ಲಿಭಾನುವಾರ ಕಂಡು ಬಂದಿದೆ.
Vijaya Karnataka Web 14NRD1_25
ನರಗುಂದ ವಿನಾಯಕ ನಗರದ ಮನೆಯೊಂದರ ನಳದಲ್ಲಿಹಾವಿನ ಮರಿ ಬಂದಿದೆ.


ನಿತ್ಯದಂತೆ ಬಕೆಟ್‌ನಲ್ಲಿ24*7 ನಳದಲ್ಲಿನೀರು ಹಿಡಿಯುವ ಸಂದರ್ಭದಲ್ಲಿಬಕೆಟ್‌ನಲ್ಲಿಮಿಡಿ ನಾಗರ ಹಾವು ಬಿದ್ದಿರುವುದು ಕಂಡು ವಿನಾಯಕ ನಗರದ ನಿವಾಸಿ ಶಿಕ್ಷಕ ಮಾಂತೇಶ ಸಂಗಳಮಠ ಗಾಬರಿಗೊಂಡಿದ್ದಾರೆ. ಮೊದಲಿನಂತೆ 8ದಿನ, 10ದಿನಕ್ಕೆ ಬರುತ್ತಿದ್ದ ನೀರು ಈಗ 24*7 ಕುಡಿಯುವ ನೀರಿನ ಯೋಜನೆಯಿಂದ ನಿತ್ಯವೂ ನೀರು ಬರುತ್ತದೆ. ಇಂತಹ ಸಂದರ್ಭದಲ್ಲಿನಳದಲ್ಲಿ ಹಾವಿನ ಮರಿ ಬಂದಿರುವುದು ಅಕ್ಕಪಕ್ಕದ ಜನರಿಗೂ ಅಚ್ಚರಿ ಹಾಗೂ ಭಯವನ್ನುಂಟು ಮಾಡಿದೆ.

ನಗರದಲ್ಲಿ24*7 ಪೈಪ್‌ಗಳು ಸೋರಿಕೆ ಹೆಚ್ಚಾಗಿ ನೀರು ಪೋಲಾಗುತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಇಂತಹ ಸಂದರ್ಭದಲ್ಲಿಮರಿ ಹಾವು ಒಡೆದ ಪೈಪ್‌ಗಳಲ್ಲಿಅಥವಾ ನಲ್ಲಿಗಳಲ್ಲಿಸೇರಿಕೊಂಡು ಹರಿದು ಬಂದಿರಬಹುದು. ವಿನಾಯಕ ನಗರಕ್ಕೆ ಹೊಂದಿಕೊಂಡು ಹಾಲಬಾವಿ ಕೆರೆ ಸುತ್ತ ಗಲೀಜು ಇದ್ದು ಇಲ್ಲಿವಿಷ ಜಂತುಗಳು ಹೆಚ್ಚಾಗಿವೆ ಎಂಬ ಮಾತುಗಳು ಜನರಲ್ಲಿಕೇಳಿ ಬರುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ