ಆ್ಯಪ್ನಗರ

ಸಮಾಜಮುಖಿ ಮಹಿಳೆಯಿಂದ ಸಮಾಜೋನ್ನತಿ ಸಾಧ್ಯ: ಪಾಟೀಲ

ಗದಗ : ಮನೆಯ ಹೊಸ್ತಿಲು ದಾಟಿ ಮಹಿಳೆ ಹೊರಗೆ ಬರಬಾರದೆಂಬ ಕಾಲ ಘಟ್ಟ ದಾಟಿ ಇಂದು ಮಹಿಳೆ ಸರಕಾರದ ಸೌಲಭ್ಯ, ಶೈP್ಷÜಣಿಕ ಸವಲತ್ತು ಮತ್ತು ಸ್ವ-ಪ್ರಯತ್ನಗಳಿಂದ ಎಲ್ಲ ಕ್ಷೇತ್ರಗಳ ಪ್ರಗತಿ ಪಥದ ಮುಂಚೂಣಿಯಲ್ಲಿದಾಳೆ ಎಂದು ಸಮಾಜ ಕಾರ್ಯಕರ್ತೆ ರತ್ನಕ್ಕ ಪಾಟೀಲ ಹೇಳಿದರು.

Vijaya Karnataka 12 Mar 2019, 5:00 am
ಗದಗ : ಮನೆಯ ಹೊಸ್ತಿಲು ದಾಟಿ ಮಹಿಳೆ ಹೊರಗೆ ಬರಬಾರದೆಂಬ ಕಾಲ ಘಟ್ಟ ದಾಟಿ ಇಂದು ಮಹಿಳೆ ಸರಕಾರದ ಸೌಲಭ್ಯ, ಶೈP್ಷÜಣಿಕ ಸವಲತ್ತು ಮತ್ತು ಸ್ವ-ಪ್ರಯತ್ನಗಳಿಂದ ಎಲ್ಲ ಕ್ಷೇತ್ರಗಳ ಪ್ರಗತಿ ಪಥದ ಮುಂಚೂಣಿಯಲ್ಲಿದಾಳೆ ಎಂದು ಸಮಾಜ ಕಾರ್ಯಕರ್ತೆ ರತ್ನಕ್ಕ ಪಾಟೀಲ ಹೇಳಿದರು.
Vijaya Karnataka Web sociable woman can be sociable patil
ಸಮಾಜಮುಖಿ ಮಹಿಳೆಯಿಂದ ಸಮಾಜೋನ್ನತಿ ಸಾಧ್ಯ: ಪಾಟೀಲ


ಇಲ್ಲಿಯ ಸಿದ್ಧಲಿಂಗ ನಗರದ ಬಸವೇಶ್ವರ ಪ್ರಾಥಮಿಕ, ಪ್ರೌಢಶಾಲೆಯ ಆವರಣದಲ್ಲಿರುವ ಬಸವಯೋಗ ಮಂದಿರದಲ್ಲಿ ಮನ್ನಿರಂಜನ ಯಳಂದೂರು ಬಸವಲಿಂಗ ಮಹಾಸ್ವಾಮಿಗಳ ಸ್ಮಾರಕ ಯೋಗ ಪಾಠಶಾಲೆಯ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳೆ ಸಮಾಜದ ಒಳಿತಿಗಾಗಿ ಚಿಂತನಾಶೀಲಳಾಗಿ ಮುಂದಾಳತ್ವ ವಹಿಸಿ ಅಭಿವೃದ್ಧಿ ಕಾರ್ಯ ನಿರ್ವಹಿಸಿದಲ್ಲಿ ಈ ಧರೆ ಪವಿತ್ರ, ಪುಣ್ಯ ಕ್ಷೇತ್ರವಾಗುವುದರಲ್ಲಿ ಸಂದೇಹವಿಲ್ಲ. ಈ ನಿಟ್ಟಿನಲ್ಲಿ ಸಮಾಜಮುಖಿ ಮಹಿಳೆಯಿಂದ ಸಮಾಜೋನ್ನತಿ ಸಾಧ್ಯ ಎಂದರು.

ಶಕುಂತಲಾ ರಡ್ಡೇರ ಮಾತನಾಡಿ, ಮಹಿಳೆ ಕರ್ತವ್ಯಗಳಿಂದ ವಿಮುಖಳಾಗಿ ಕೇವಲ ಪೂಜೆ, ವೃತ, ಮೂಢನಂಬಿಕೆ, ಕಂದಾಚಾರ ಪರಿಪಾಲಿಸದೇ ತನ್ನ ಕಾಯಕದಲ್ಲಿ ದೇವರನ್ನು ಕಂಡುಕೊಂಡು ಆರೋಗ್ಯ ಬಗ್ಗೆ ಕಾಳಜಿ ವಹಿಸಿ ನಾಡಿನ ಅಭ್ಯುದಯಕ್ಕೆ ಶ್ರಮಿಸಬೇಕೆಂದರು.

ಡಿಜಿಎಂ ಆಯುರ್ವೇದಿಕ ಮೆಡಿಕಲ್‌ ಕಾಲೇಜ್‌ ಪ್ರಾಧ್ಯಾಪಕ ಡಾ.ಎಂ.ವಿ.ಐಹೊಳ್ಳಿ ಮಾತನಾಡಿ, ಮಕ್ಕಳು ಪ್ರತಿಭಾವಂತರಾಗಿ ಬೆಳೆಯಲು ಮಹಿಳೆಯೇ ಮೂಲ ಕಾರಣಿಕರ್ತಳು. ಜೀಜಾಬಾಯಿ ಶಿವಾಜಿಯನ್ನು ಬೆಳೆಸಿದಂತೆ ವೀರ, ಶೂರ, ಧೀರ, ಜಾಣ್ಮೆಯುಳ್ಳ ಉತ್ತಮ ಮಕ್ಕಳನ್ನು ಬೆಳೆಸುವ ಗುರುತರ ಜವಾಬ್ದಾರಿ ಮಹಿಳೆಯರದಾಗಿದೆ ಎಂದರು. ವಿ.ಎಂ.ಮುಂದಿನಮನಿ ಮಾತನಾಡಿದರು.

ಪಲ್ಲವಿ ಐಹೊಳ್ಳಿ, ಶಾಂತಾ ಕುಂದಗೋಳ, ಪುಷ್ಪಾ ಹಿರೇಮಠ, ಕಸ್ತೂರಿ ಮರಿಗೌಡ್ರ, ಮಹಾದೇವಿ ಚರಂತಿಮಠ, ಸುಲೋಚನಾ ಐಹೊಳ್ಳಿ, ಸುಲೋಚನಾ ಕಾಲವಾಡಮಠ, ಅರುಣಾ ಇಂಗಳಳ್ಳಿ, ಲಲಿತಾ ಅಣ್ಣಿಗೇರಿ, ಅಬಿದಾ ಶೇಖ, ಜ್ಯೋತಿ ಜಾನೋಪಂತರ, ಶಕುಂತಲಾ ಬ್ಯಾಳಿ, ರೇಣುಕಾ ದ್ಯಾಮಣ್ಣವರ, ಸಂಗೀತಾ ನಾಕೋಡ, ಪುಷ್ಪಾ ತಿಪ್ಪಶೆಟ್ಟಿ, ನಾಗಲಕ್ಷ್ಮೀ, ಕೆ.ಪಿ. ಕುರಗೋಡ ಇದ್ದರು.

ಗೌರಿ ಜೀರಂಕಳಿ ಪ್ರಾರ್ಥಿಸಿದರು. ಸುನಿತಾ ಹಾವೇರಿ ಸ್ವಾಗತಿಸಿದರು. ವಿಜಯಲಕ್ಷ್ಮೀ ಮೇಕಳಿ ವಂದಿಸಿದರು. ಅಶ್ವಿನಿ ಹೊಸಮನಿ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ