ಆ್ಯಪ್ನಗರ

ಸಂಘಟಿತ ಪ್ರಯತ್ನದಿಂದ ಸಮಾಜ ಅಭಿವೃದ್ಧಿ

ಗದಗ: ಸಮಾಜದ ಅಂಧಕಾರ ಕಳೆಯುವ ಈ ದೀಪ ಜ್ಯೋತಿ ಬೆಳಗಿಸಿ ಸದಾ ಈ ಸಮಾಜಕ್ಕೆ ಜ್ಞಾನ ನೀಡುವ ಸಂಕೇತವಾಗಬೇಕು. ಸಮಾಜವು ಪ್ರಗತಿಯ ಪಥದತ್ತ ಮುನ್ನಡೆಯಲು ಜನರಿಗೆ ಶಕ್ತಿ, ಸಾಮರ್ಥ್ಯ ಹಾಗೂ ಪ್ರೇರಣೆ ನೀಡಲಿ ಎಂದು ಹಂಪಿ ಹೇಮಕೂಟ ಗಾಯತ್ರಿಪೀಠದ ಪೀಠಾಧ್ಯಕ್ಷ ದಯಾನಂದಪುರಿ ಸ್ವಾಮೀಜಿ ಹೇಳಿದರು.

Vijaya Karnataka 20 Nov 2019, 5:00 am
ಗದಗ: ಸಮಾಜದ ಅಂಧಕಾರ ಕಳೆಯುವ ಈ ದೀಪ ಜ್ಯೋತಿ ಬೆಳಗಿಸಿ ಸದಾ ಈ ಸಮಾಜಕ್ಕೆ ಜ್ಞಾನ ನೀಡುವ ಸಂಕೇತವಾಗಬೇಕು. ಸಮಾಜವು ಪ್ರಗತಿಯ ಪಥದತ್ತ ಮುನ್ನಡೆಯಲು ಜನರಿಗೆ ಶಕ್ತಿ, ಸಾಮರ್ಥ್ಯ ಹಾಗೂ ಪ್ರೇರಣೆ ನೀಡಲಿ ಎಂದು ಹಂಪಿ ಹೇಮಕೂಟ ಗಾಯತ್ರಿಪೀಠದ ಪೀಠಾಧ್ಯಕ್ಷ ದಯಾನಂದಪುರಿ ಸ್ವಾಮೀಜಿ ಹೇಳಿದರು.
Vijaya Karnataka Web social development through organized effort
ಸಂಘಟಿತ ಪ್ರಯತ್ನದಿಂದ ಸಮಾಜ ಅಭಿವೃದ್ಧಿ


ಬೆಟಗೇರಿಯ ಹಳೇ ಬನಶಂಕರಿದೇವಿ ದೇವಸ್ಥಾನದಲ್ಲಿಕಾರ್ತಿಕೋತ್ಸವದಲ್ಲಿಕಾರ್ತಿಕ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಸಂಘಟಿತ ಪ್ರಯತ್ನದಿಂದ ಸಮಾಜದಲ್ಲಿಬೃಹತ್‌ ಬದಲಾವಣೆ ತರಲು ಸಾಧ್ಯ. ಇಲ್ಲಿನ ಸಮಾನ ಮನಸ್ಕರು ಏರ್ಪಡಿಸಿರುವ ಸಮಾಜಮುಖಿ ಕಾರ್ಯಕ್ರಮಗಳು ಸ್ತುತ್ಯಾರ್ಹ. ಅಜ್ಞಾನದ ಕತ್ತಲೆಯನ್ನು ಕಳೆದ ಸುಜ್ಞಾನವನ್ನು ನೀಡುವ ದೀಪ ಸದಾ ಸಮಾಜದ ಅಭಿವೃದ್ಧಿಗೆ ಸ್ಪೂರ್ತಿ ನೀಡಲಿ ಎಂದರು.

ಉಪನ್ಯಾಸಕಿ ರಾಧಿಕಾ ಕೊಳ್ಳಿ, ಹಳೇಬನಶಂಕರಿದೇವಿ ದೇವಸ್ಥಾನ ಟ್ರಸ್ಟ್‌ ಕಮೀಟಿ ಚೇರಮನ್‌ ರಾಜೇಂದ್ರ ಬರದ್ವಾಡ ಮಾತನಾಡಿದರು.ಡಾ.ಸಾಗರ ಕೊಳ್ಳಿ ,ಅಶೋಕ ಹೊನ್ನಳ್ಳಿ ದಂಪತಿಯನ್ನು ಸನ್ಮಾನಿಸಲಾಯಿತು.

ಕೇಶವರಾಮ ಕೊಳ್ಳಿ, ಮೋಹನ ಹೊನ್ನಳ್ಳಿ, ವೀಣಾ ನೀಲಗುಂದ, ಐಶ್ವರ್ಯ ಶಿಂಗಾಡಿ, ಸುಮಲತಾ ಎಲಿ, ಶಿವಣ್ಣ ಮಾಗುಂಡ, ರಾಘವೇಂದ್ರ ಕೊಪ್ಪಳ, ದಶರಥ ಕೊಳ್ಳಿ, ಪ್ರಭು ನೀಲಗುಂದ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ