ಆ್ಯಪ್ನಗರ

ಘನ, ದ್ರವ ತ್ಯಾಜ್ಯ ನಿರ್ವಹಣಾ ಕಾರ್ಯಗಾರ

ಗದಗ: ನಗರದ ರೈತ ಭವನದಲ್ಲಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಬಾಗಲಕೋಟ್‌ ಜಿಲ್ಲಾಪಂಚಾಯಿತಿ ಆಶ್ರಯದಲ್ಲಿಘನ ಮತ್ತು ದ್ರವ ತ್ಯಾಜ್ಯ ಸಂಪನ್ಮೂಲ ನಿರ್ವಹಣೆ ಕುರಿತು ಕಾರ್ಯಗಾರ ನಡೆಯಿತು.

Vijaya Karnataka 22 Jan 2020, 5:00 am
ಗದಗ: ನಗರದ ರೈತ ಭವನದಲ್ಲಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಬಾಗಲಕೋಟ್‌ ಜಿಲ್ಲಾಪಂಚಾಯಿತಿ ಆಶ್ರಯದಲ್ಲಿಘನ ಮತ್ತು ದ್ರವ ತ್ಯಾಜ್ಯ ಸಂಪನ್ಮೂಲ ನಿರ್ವಹಣೆ ಕುರಿತು ಕಾರ್ಯಗಾರ ನಡೆಯಿತು.
Vijaya Karnataka Web solid liquid waste management worker
ಘನ, ದ್ರವ ತ್ಯಾಜ್ಯ ನಿರ್ವಹಣಾ ಕಾರ್ಯಗಾರ


ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದ ವಿತ್ತಧಿಕಾರಿ ಜೆ.ಸಿ. ಪ್ರಶಾಂತ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿನೈರ್ಮಲ್ಯದ ನಿರ್ವಹಣೆ ಸಾಧಿಸುವುದು ಅತೀ ಅವಶ್ಯಕವಾಗಿದೆ. ಗ್ರಾಮ ಪಂಚಾಯಿತಿಗಳು ಈ ನಿಟ್ಟಿನಲ್ಲಿಸಕ್ರಿಯವಾಗಿ ತಮ್ಮದೆಯಾದಂತಹ ಘನ ಮತ್ತು ದ್ರವ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಮಾರ್ಗಗಳನ್ನು ರೂಪಿಸಿಕೊಳ್ಳಬೇಕು. ಸ್ವಚ್ಛ ಭಾರತ ಅಭಿಯಾನದಡಿ ಘನ ತ್ಯಾಜ್ಯ ನಿರ್ವಹಣೆಗೆ ಗ್ರಾಮ ಪಂಚಾಯಿತಿಗಳಿಗೆ ಅನುದಾನ ಸಾಕಷ್ಟು ಬರುತ್ತಿದ್ದು ಇದನ್ನು ಉಪಯೋಗಿಸಿಕೊಳ್ಳಬೇಕು ಎಂದರು.

ಈ ಕಾರ್ಯಗಾರದಲ್ಲಿಘನ ಮತ್ತು ದ್ರವ ತ್ಯಾಜ್ಯ ಸಂಪನ್ಮೂಲ ನಿರ್ವಹಣೆ, ಪರಿಕಲ್ಪನೆ, ಸ್ವಚ್ಛತೆ - ನೈರ್ಮಲ್ಯ ನಡೆದು ಬಂದ ಹಾದಿ, ಪ್ರಕೃತಿ ಜೀವನದ ಮೇಲೆ ತ್ಯಾಜ್ಯದ ಪರಿಣಾಮಗಳು, ಘನ ದ್ರವ ಸಂಪನ್ಮೂಲದ ನಿರ್ವಹಣೆ ವಿಧಗಳು, ಪ್ರಕ್ರಿಯೆಗಳು (ಹಸಿ - ಒಣ ಕಸ) ಸುಸ್ಥಿರತೆ, ಸ್ಥಳೀಯಾಡಳಿತದ ಪಾತ್ರ ಹಾಗೂ ನಾಗರಿಕರ ಜವಾಬ್ದಾರಿ, ಸ್ವಚ್ಛತಾ ಅಧಿನಿಯಮ 2016, ಘನ ತ್ಯಾಜ್ಯ ನಿರ್ವಹಣೆ - ಸವಾಲುಗಳು -ಪರಿಹಾರ ಅನುದಾನ ಲಭ್ಯತೆ - ಮಾರುಕಟ್ಟೆ ಲಭ್ಯತೆ, ಆರ್ಥಿಕ ನಿರ್ವಹಣೆ - ಆದಾಯ ಸೃಜನೆ, ಇನ್ಸಿನರೇಟರ್‌ - ಬಯೋ ಕಾಂಪೋಸ್ಟ್‌, ಸ್ವಚ್ಛಾಗ್ರಹಿ - ಸ್ವಚ್ಚತಾ ಕಾರ್ಯಕರ್ತರು, ಕಾಂಪೋಸ್ಟ್‌ ಪಿಟ್‌ಗಳ ಕುರಿತು ಉಪನ್ಯಾಸ ಕಾರ್ಯಕ್ರಮ ಹಾಗೂ ಚರ್ಚೆ, ಸಂವಾದಗಳು ನಡೆದವು.

ನಿವೃತ್ತ ಹಿರಿಯ ಪರಿಸರ ಅಧಿಕಾರಿ ಕುಮಾರಸ್ವಾಮಿ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಮಹೇಶ ಕೆ, ಡಾ.ಗುಳ್ಳಪ್ಪ ಡಿ, ಡಾ.ಅಬ್ಬುಲ್‌ ಅಜೀಜ್‌ ಮುಲ್ಲಾ, ಮಾತನಾಡಿದರು. ಉಮೇಶ ಬಾರಕೇರ, ಮುತ್ತುರಾಜ್‌, ವಿದ್ಯಾರ್ಥಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ