ಆ್ಯಪ್ನಗರ

ಸಮಾಜದಲ್ಲಿ ಸಮನ್ವಯತೆ ಸಾಧಿಸಿ

ಗದಗ: ಸಮನ್ವಯತೆ ಕೇವಲ ಶಾಲೆಯಲ್ಲಿ ಮಾತ್ರ ಸಾಧಿಸಿದರೆ ಸಾಲದು, ಮನೆ, ನೆರೆಹೊರೆ, ಸಮುದಾಯದಲ್ಲೂ ಸ್ನೇಹ ವಾತಾವರಣ ಕಲ್ಪಿಸಿದರೆ ಸಮನ್ವಯತೆ ಸಾಧ್ಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಎಪಿಸಿಒ ಎಸ್‌.ಎಸ್‌. ರಡ್ಡೇರ್‌ ಹೇಳಿದರು.

Vijaya Karnataka 30 Nov 2018, 5:00 am
ಗದಗ: ಸಮನ್ವಯತೆ ಕೇವಲ ಶಾಲೆಯಲ್ಲಿ ಮಾತ್ರ ಸಾಧಿಸಿದರೆ ಸಾಲದು, ಮನೆ, ನೆರೆಹೊರೆ, ಸಮುದಾಯದಲ್ಲೂ ಸ್ನೇಹ ವಾತಾವರಣ ಕಲ್ಪಿಸಿದರೆ ಸಮನ್ವಯತೆ ಸಾಧ್ಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಎಪಿಸಿಒ ಎಸ್‌.ಎಸ್‌. ರಡ್ಡೇರ್‌ ಹೇಳಿದರು.
Vijaya Karnataka Web solve integration in society
ಸಮಾಜದಲ್ಲಿ ಸಮನ್ವಯತೆ ಸಾಧಿಸಿ


ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ದಿ. ಅಸೋಸಿಯೇಶನ್‌ ಆಫ್‌ ಪೀಪಲ್‌ ವಿತ್‌ ಡಿಸೆಬಿಲಿಟಿ ಸಂಸ್ಥೆ ಆಶ್ರಯದಲ್ಲಿ ಗದಗ ಜಿಲ್ಲಾ ವಿಶೇಷ ಸಂಪನ್ಮೂಲ ಶಿಕ್ಷಕರಿಗಾಗಿ ನಡೆದ ತರಬೇತಿಯಲ್ಲಿ ಭಾಗವಹಿಸಿ ಮಾತನಾಡಿದರು.

ಸಮನ್ವಯ ಶಿಕ್ಷಣ ಎಂದರೆ ಕೇವಲ ಕಲಿಕೆಯಲ್ಲಿ ಹಿಂದಿರುವ ಮಕ್ಕಳು, ವಿಶೇಷ ಅಗತ್ಯತೆಯುಳ್ಳ ಮಕ್ಕಳು ಮತ್ತು ಇತರೆ ಮಕ್ಕಳನ್ನು ಜತೆಯಲ್ಲಿ ಸೇರಿಸಿ, ನಿರೀಕ್ಷಿತ ಮಟ್ಟದ ಕಲಿಕೆಯನ್ನುಂಟು ಮಾಡಲು ರೂಪಿಸಿದ ಒಂದು ವ್ಯವಸ್ಥೆಯಾಗಿದೆ ಎಂದರು.

ತರಬೇತಿ ಸಂಪನ್ಮೂಲ ವ್ಯಕ್ತಿ ಆರ್‌.ರವಿ ಹಾಗೂ ಪ್ರಕಾಶ ಮಾತನಾಡಿ, ಕ್ಷೇತ್ರ ಸಂಪನ್ಮೂಲ ಶಿಕ್ಷಕರು ತಮಗೆ ನಿಗದಿಪಡಿಸಿದ ಶಾಲೆ, ಸಂಪನ್ಮೂಲ ಕೇಂದ್ರ ಶಾಲಾ ಸಿದ್ಧತಾ ಕೇಂದ್ರಗಳಿಗೆ ಭೇಟಿ ನೀಡಿ ವಿಶೇಷ ಚೇತನ ಮಕ್ಕಳ ಪಟ್ಟಿ ಸಿದ್ಧಪಡಿಸುವುದು. ವೈಯುಕ್ತಿಕ ಶೈಕ್ಷಣಿಕ ಯೋಜನೆ ರೂಪಿಸಬೇಕು ಎಂದರು.

ಕೆ.ಎಸ್‌. ಬೇಲೇರಿ, ಡಾ.ನಿಂ.ಗು. ಸೊಲಗಿ, ಸಿ.ಎಸ್‌. ಚಳಗೇರಿ, ಡಿ.ಎಚ್‌. ದೊಡ್ಡಮನಿ, ವಿ.ಕೆ. ಮಾಳಗಿ, ಬಿ.ಪಿ. ಮಟ್ಟಿ, ವಿ.ಜಿ. ಡೊಳ್ಳಿನ, ಈ.ಡಿ.ಹುಗ್ಗೇಣ್ಣವರ, ಡಿ.ಕೆ. ಮುಳ್ಳೂರ, ಎಸ್‌.ಜಿ. ಹೊಸಮನಿ, ಸುರೇಶ, ಎನ್‌.ಎಂ. ಕಾವಲಿ, ಬಿ.ಎಚ್‌.ಕಮತಗಿ, ಗಂಗಮ್ಮ ಹುನಕುಂಟೆ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ