ಆ್ಯಪ್ನಗರ

ಗಣೇಶ ದೇಗುಲದಲ್ಲಿ ವಿಶೇಷ ಪೂಜೆ

ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಗಣಪತಿ ದೇವಸ್ಥಾನದಲ್ಲಿಅಂಗಾರಕ ಸಂಕಷ್ಠಿ ಪ್ರಯುಕ್ತ ಉಪವಾಸ ನಿರತ ಭಕ್ತರು ವಿಶೇಷ ದರ್ಶನ ಪಡೆದು ಪೂಜೆ ಸಲ್ಲಿಸಿದರು.

Vijaya Karnataka 18 Sep 2019, 5:00 am
ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಗಣಪತಿ ದೇವಸ್ಥಾನದಲ್ಲಿಅಂಗಾರಕ ಸಂಕಷ್ಠಿ ಪ್ರಯುಕ್ತ ಉಪವಾಸ ನಿರತ ಭಕ್ತರು ವಿಶೇಷ ದರ್ಶನ ಪಡೆದು ಪೂಜೆ ಸಲ್ಲಿಸಿದರು.
Vijaya Karnataka Web 17GJD1_25
ಗಜೇಂದ್ರಗಡ ಅಗಸಿ ಬಳಿಯ ಶ್ರೀ ಬಲಮುರಿ ಗಣಪತಿ ದೇವಸ್ಥಾನಲ್ಲಿ ಅಂಗಾರಕ ಸಂಕಷ್ಠಿ ಪ್ರಯುಕ್ತ ಉಪವಾಸ ನಿರತ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.


ಸ್ಥಳೀಯ ಅಗಸಿ ಬಳಿಯ ಬಲಮುರಿ ಗಣಗತಿ, ಎಪಿಎಂಸಿ ಯಾರ್ಡಿನ ಗಣಪತಿ, ಹೆಸ್ಕಾಂ ಕಾರ್ಯಾಲಯ ಗಣಪತಿ, ಕೆರೆ ಬಳಿಯ ಶ್ರೀ ಸಮರ್ಥ ಸಾಯಿ ಮಂದಿರ ಗಣಪತಿ ದೇವಸ್ಥಾನದಲ್ಲಿಅಗ್ರಪೂಜೆ ಆರಾಧನೆಯನ್ನು ಭಕ್ತಿಯಿಂದ ನಡೆಸಿದರು.

ಪ್ರತಿ ತಿಂಗಳು ಸಂಕಷ್ಠಿಯಂದು ಗಣಪತಿಯನ್ನು ಭಕ್ತರು ಆರಾಧಿಸುತ್ತಾರೆ. ಆದರೆ ಪ್ರಸ್ತುತ ವರ್ಷಕ್ಕೊಮ್ಮೆ ಬರುವ ಮಂಗಳವಾರ ಅಂಗಾರಕ ಸಂಕಷ್ಟಿ ಆಗಮಿಸಿದ್ದರಿಂದ ಭಕ್ತರಿಗೆ ಮತ್ತಷ್ಟು ಸಂತೋಷ ಉಂಟು ಮಾಡಿದೆ. ಉಪವಾಸ ನಿರತ ಸಾಕಷ್ಟು ಭಕ್ತರು ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಕರಕಿ, ಬಿಲ್ವಪತ್ರೆ, ದಾಸವಾಳ ಹೂ ಜತೆಗೆ ವಿಶೇಷ ಪೂಜೆ, ಅಭಿಷೇಕ ನೆರವೇರಿಸಿರುವರು. ಗಣಪತಿ ಅಥರ್ವಶೇಷ, ಅಷ್ಟೋತ್ತರ ಪಾರಾಯಣ ನಡೆದವು ಎಂದು ಅರ್ಚಕ ಸತೀಶ ಕೊಡಗಾನೂರ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ