ಯಲ್ಲಪ್ಪ ತಳವಾರ
ರೋಣ : ನಾಡಿನ ಪ್ರತಿಯೊಂದು ಹಬ್ಬ,ಹರಿದಿನಗಳಿಗೆ ತನ್ನದೆಯಾದ ವೈಶಿಷ್ಟತ್ರ್ಯವಿದೆ.ದೀಪಾವಳಿಯ ಪಾಡ್ಯ ಸೋಮವಾರ ತಾಲೂಕಿನಾದ್ಯಂತ ಪ್ರತಿ ಮನೆಗಳಲ್ಲೂನಡೆಯಿತು. ಸೆಗಣೆಯಿಂದ ತಯಾರಿಸಿದ ಪಾಂಡವರ ಪೂಜೆ ಭಕ್ತಿ,ಭಾವದಿಂದ ನಡೆಸಿದರು.
ಸಕಲ ಭಾಗ್ಯಗಳನ್ನು ಕರುಣಿಸುವಂತೆ ಲಕ್ಷಿತ್ರ್ಮೕ ಪೂಜೆ ಕೈಗೊಂಡು ದೀಪಾವಳಿಯ ಅಮವಾಸ್ಯೆ ರಾತ್ರಿ ಜಾಗರಣೆ,ಭಜನೆ, ಮನರಂಜನೆ ಇತ್ಯಾದಿಗಳಿಂದ ಸೌಭಾಗ್ಯ ಲಕ್ಷಿತ್ರ್ಮೕ ಒಲಿಸಿಕೊಳ್ಳುವ ಮಹತ್ವದ ಉದ್ದೇಶದಿಂದ ನಾನಾ ತರಹದ ಪೂಜೆ ಮಾಡುವುದು ಸಂಪ್ರದಾಯವಾಗಿದೆ. ಬಲಿಪಾಡ್ಯದ ದಿವಸ ಬೆಳಗ್ಗೆ ಸೆಗಣಿಯಿಂದ ಮಾಡಿ ಪಾಂಡವರ ಮೂರ್ತಿ ಮಹಿಳೆಯರು ತಯಾರಿಸಿ ಅವುಗಳಿಗೆ ಶ್ಯಾವಿಗೆ ಪಾಯಸದ ಎಡೆ ಮಾಡಿ ಪೂಜೆ ಸಲ್ಲಿಸುವ ಮೂಲಕ ಸಂಭ್ರಮದಲ್ಲಿತೊಡಗಿದರು.
ಧಾರ್ಮಿಕ ಹಿನ್ನೆಲೆ:
ಭೂಲೋಕಕ್ಕೆ ಕಂಟಕ ಪ್ರಾಯವಾಗಿದ್ದ ಜನತೆಯನ್ನು ಕಷ್ಟದ ಕಣ್ಣೀರಿನಲ್ಲಿಕೈತೊಳೆಯುವಂತೆ ಮಾಡಿದ್ದ ನಂದ ರಾಕ್ಷಸನನ್ನು ವಿಷ್ಣು ದೇವನು ಸಂಹರಿಸಿದನಂತೆ ಇದರ ನೆನಪಿಗಾಗಿ ದೀಪಾವಳಿ ಅಮವಾಸ್ಯೆಯ ಪಾಡ್ಯದ ದಿವಸ ಪಾಂಡವರ ಮೂರ್ತಿಯನ್ನು ಸೆಗಣೆಯಿಂದ ಮಾಡಿ ಪೂಜಿಸುವುದು ಧಾರ್ಮಿಕ ಹಿನ್ನೆಲೆಯಾಗಿದೆ.
ದೀಪಾವಳಿ ಅಮವಾಸ್ಯೆ ಮರು ದಿನ ಪಾಡ್ಯದಂದು ಸೆಗಣಿಯಿಂದ ಪಾಂಡವರು ಎಂದು ಐದು ಮೂರ್ತಿಗಳನ್ನು ಮಾಡಿ ಅದಕ್ಕೆ ಉತ್ರಾಣಿ ಕಡ್ಡಿ,ಹೊನ್ನಬರಗಿ ಹೂ, ಅಣ್ಣಿ ಹೂ ಸೇರಿದಂತೆ ವಿವಿಧ ರೀತಿಯ ಹೂಗಳಿಂದ ಅಲಂಕಾರ ಮಾಡುತ್ತಾರೆ. ಸುಣ್ಣದಿಂದ ಪಾಂಡವರು ಬರುವ ದಾರಿಗೆ ಸಣ್ಣ ಸಣ್ಣ ಹೆಜ್ಜೆಗಳ ಗುರುತು ಸಹ ಮಾಡಿ ಪೂಜೆ ಸಲ್ಲಿಸುತ್ತಾರೆ.
ದನದ ಕೊಟ್ಟಿಗೆಯಲ್ಲಿಪೂಜೆ:
ಸೆಗಣಿಯಿಂದ ತಯಾರಾದ ಮೂರ್ತಿಗಳನ್ನು ಬಾಗಿಲು ಹಾಗೂ ದನದ ಕೊಟ್ಟಿಗೆಗಳಲ್ಲಿಇಟ್ಟು ಪೂಜಿಸುತ್ತಾರೆ. ಇದಕ್ಕೆ ಕಾರಣವೆಂಬಂತೆ ಗೋವುಗಳು ನಡೆದ ಹೆಜ್ಜೆಯನ್ನು ಸಹ ಸುಣ್ಣದಿಂದ ಹಾಕಿ ಬಾಗಿಲನಿಂದ ದನದ ಕೊಟ್ಟಿಗೆಯವರೆಗೂ ಹೆಜ್ಜೆಯ ಗುರುತು ಹಾಕಿ ಅವುಗಳನ್ನು ಪೂಜಿಸುವುದು ಸಂಪ್ರದಾಯವಾಗಿದೆ.
ರೋಣ : ನಾಡಿನ ಪ್ರತಿಯೊಂದು ಹಬ್ಬ,ಹರಿದಿನಗಳಿಗೆ ತನ್ನದೆಯಾದ ವೈಶಿಷ್ಟತ್ರ್ಯವಿದೆ.ದೀಪಾವಳಿಯ ಪಾಡ್ಯ ಸೋಮವಾರ ತಾಲೂಕಿನಾದ್ಯಂತ ಪ್ರತಿ ಮನೆಗಳಲ್ಲೂನಡೆಯಿತು. ಸೆಗಣೆಯಿಂದ ತಯಾರಿಸಿದ ಪಾಂಡವರ ಪೂಜೆ ಭಕ್ತಿ,ಭಾವದಿಂದ ನಡೆಸಿದರು.
ಸಕಲ ಭಾಗ್ಯಗಳನ್ನು ಕರುಣಿಸುವಂತೆ ಲಕ್ಷಿತ್ರ್ಮೕ ಪೂಜೆ ಕೈಗೊಂಡು ದೀಪಾವಳಿಯ ಅಮವಾಸ್ಯೆ ರಾತ್ರಿ ಜಾಗರಣೆ,ಭಜನೆ, ಮನರಂಜನೆ ಇತ್ಯಾದಿಗಳಿಂದ ಸೌಭಾಗ್ಯ ಲಕ್ಷಿತ್ರ್ಮೕ ಒಲಿಸಿಕೊಳ್ಳುವ ಮಹತ್ವದ ಉದ್ದೇಶದಿಂದ ನಾನಾ ತರಹದ ಪೂಜೆ ಮಾಡುವುದು ಸಂಪ್ರದಾಯವಾಗಿದೆ. ಬಲಿಪಾಡ್ಯದ ದಿವಸ ಬೆಳಗ್ಗೆ ಸೆಗಣಿಯಿಂದ ಮಾಡಿ ಪಾಂಡವರ ಮೂರ್ತಿ ಮಹಿಳೆಯರು ತಯಾರಿಸಿ ಅವುಗಳಿಗೆ ಶ್ಯಾವಿಗೆ ಪಾಯಸದ ಎಡೆ ಮಾಡಿ ಪೂಜೆ ಸಲ್ಲಿಸುವ ಮೂಲಕ ಸಂಭ್ರಮದಲ್ಲಿತೊಡಗಿದರು.
ಧಾರ್ಮಿಕ ಹಿನ್ನೆಲೆ:
ಭೂಲೋಕಕ್ಕೆ ಕಂಟಕ ಪ್ರಾಯವಾಗಿದ್ದ ಜನತೆಯನ್ನು ಕಷ್ಟದ ಕಣ್ಣೀರಿನಲ್ಲಿಕೈತೊಳೆಯುವಂತೆ ಮಾಡಿದ್ದ ನಂದ ರಾಕ್ಷಸನನ್ನು ವಿಷ್ಣು ದೇವನು ಸಂಹರಿಸಿದನಂತೆ ಇದರ ನೆನಪಿಗಾಗಿ ದೀಪಾವಳಿ ಅಮವಾಸ್ಯೆಯ ಪಾಡ್ಯದ ದಿವಸ ಪಾಂಡವರ ಮೂರ್ತಿಯನ್ನು ಸೆಗಣೆಯಿಂದ ಮಾಡಿ ಪೂಜಿಸುವುದು ಧಾರ್ಮಿಕ ಹಿನ್ನೆಲೆಯಾಗಿದೆ.
ದೀಪಾವಳಿ ಅಮವಾಸ್ಯೆ ಮರು ದಿನ ಪಾಡ್ಯದಂದು ಸೆಗಣಿಯಿಂದ ಪಾಂಡವರು ಎಂದು ಐದು ಮೂರ್ತಿಗಳನ್ನು ಮಾಡಿ ಅದಕ್ಕೆ ಉತ್ರಾಣಿ ಕಡ್ಡಿ,ಹೊನ್ನಬರಗಿ ಹೂ, ಅಣ್ಣಿ ಹೂ ಸೇರಿದಂತೆ ವಿವಿಧ ರೀತಿಯ ಹೂಗಳಿಂದ ಅಲಂಕಾರ ಮಾಡುತ್ತಾರೆ. ಸುಣ್ಣದಿಂದ ಪಾಂಡವರು ಬರುವ ದಾರಿಗೆ ಸಣ್ಣ ಸಣ್ಣ ಹೆಜ್ಜೆಗಳ ಗುರುತು ಸಹ ಮಾಡಿ ಪೂಜೆ ಸಲ್ಲಿಸುತ್ತಾರೆ.
ದನದ ಕೊಟ್ಟಿಗೆಯಲ್ಲಿಪೂಜೆ:
ಸೆಗಣಿಯಿಂದ ತಯಾರಾದ ಮೂರ್ತಿಗಳನ್ನು ಬಾಗಿಲು ಹಾಗೂ ದನದ ಕೊಟ್ಟಿಗೆಗಳಲ್ಲಿಇಟ್ಟು ಪೂಜಿಸುತ್ತಾರೆ. ಇದಕ್ಕೆ ಕಾರಣವೆಂಬಂತೆ ಗೋವುಗಳು ನಡೆದ ಹೆಜ್ಜೆಯನ್ನು ಸಹ ಸುಣ್ಣದಿಂದ ಹಾಕಿ ಬಾಗಿಲನಿಂದ ದನದ ಕೊಟ್ಟಿಗೆಯವರೆಗೂ ಹೆಜ್ಜೆಯ ಗುರುತು ಹಾಕಿ ಅವುಗಳನ್ನು ಪೂಜಿಸುವುದು ಸಂಪ್ರದಾಯವಾಗಿದೆ.