ಆ್ಯಪ್ನಗರ

ರೋಣದಲ್ಲಿ ದೀಪಾವಳಿಯಂದು ಪಾಂಡವರಿಗೆ ವಿಶೇಷ ಪೂಜೆ

ರೋಣ : ನಾಡಿನ ಪ್ರತಿಯೊಂದು ಹಬ್ಬ,ಹರಿದಿನಗಳಿಗೆ ತನ್ನದೆಯಾದ ವೈಶಿಷ್ಟತ್ರ್ಯವಿದೆ.ದೀಪಾವಳಿಯ ಪಾಡ್ಯ ಸೋಮವಾರ ತಾಲೂಕಿನಾದ್ಯಂತ ಪ್ರತಿ ಮನೆಗಳಲ್ಲೂನಡೆಯಿತು. ಸೆಗಣೆಯಿಂದ ತಯಾರಿಸಿದ ಪಾಂಡವರ ಪೂಜೆ ಭಕ್ತಿ,ಭಾವದಿಂದ ನಡೆಸಿದರು.

Vijaya Karnataka 14 Dec 2022, 12:50 pm
ಯಲ್ಲಪ್ಪ ತಳವಾರ
Vijaya Karnataka Web 28 RON 2_25
ಸೆಗಣಿಯಿಂದ ಪಾಂಡವ ಮೂರ್ತಿ ತಯಾರಿಸುತ್ತಿರುವ ಮಹಿಳೆಯರು.

ರೋಣ : ನಾಡಿನ ಪ್ರತಿಯೊಂದು ಹಬ್ಬ,ಹರಿದಿನಗಳಿಗೆ ತನ್ನದೆಯಾದ ವೈಶಿಷ್ಟತ್ರ್ಯವಿದೆ.ದೀಪಾವಳಿಯ ಪಾಡ್ಯ ಸೋಮವಾರ ತಾಲೂಕಿನಾದ್ಯಂತ ಪ್ರತಿ ಮನೆಗಳಲ್ಲೂನಡೆಯಿತು. ಸೆಗಣೆಯಿಂದ ತಯಾರಿಸಿದ ಪಾಂಡವರ ಪೂಜೆ ಭಕ್ತಿ,ಭಾವದಿಂದ ನಡೆಸಿದರು.

ಸಕಲ ಭಾಗ್ಯಗಳನ್ನು ಕರುಣಿಸುವಂತೆ ಲಕ್ಷಿತ್ರ್ಮೕ ಪೂಜೆ ಕೈಗೊಂಡು ದೀಪಾವಳಿಯ ಅಮವಾಸ್ಯೆ ರಾತ್ರಿ ಜಾಗರಣೆ,ಭಜನೆ, ಮನರಂಜನೆ ಇತ್ಯಾದಿಗಳಿಂದ ಸೌಭಾಗ್ಯ ಲಕ್ಷಿತ್ರ್ಮೕ ಒಲಿಸಿಕೊಳ್ಳುವ ಮಹತ್ವದ ಉದ್ದೇಶದಿಂದ ನಾನಾ ತರಹದ ಪೂಜೆ ಮಾಡುವುದು ಸಂಪ್ರದಾಯವಾಗಿದೆ. ಬಲಿಪಾಡ್ಯದ ದಿವಸ ಬೆಳಗ್ಗೆ ಸೆಗಣಿಯಿಂದ ಮಾಡಿ ಪಾಂಡವರ ಮೂರ್ತಿ ಮಹಿಳೆಯರು ತಯಾರಿಸಿ ಅವುಗಳಿಗೆ ಶ್ಯಾವಿಗೆ ಪಾಯಸದ ಎಡೆ ಮಾಡಿ ಪೂಜೆ ಸಲ್ಲಿಸುವ ಮೂಲಕ ಸಂಭ್ರಮದಲ್ಲಿತೊಡಗಿದರು.

ಧಾರ್ಮಿಕ ಹಿನ್ನೆಲೆ:
ಭೂಲೋಕಕ್ಕೆ ಕಂಟಕ ಪ್ರಾಯವಾಗಿದ್ದ ಜನತೆಯನ್ನು ಕಷ್ಟದ ಕಣ್ಣೀರಿನಲ್ಲಿಕೈತೊಳೆಯುವಂತೆ ಮಾಡಿದ್ದ ನಂದ ರಾಕ್ಷಸನನ್ನು ವಿಷ್ಣು ದೇವನು ಸಂಹರಿಸಿದನಂತೆ ಇದರ ನೆನಪಿಗಾಗಿ ದೀಪಾವಳಿ ಅಮವಾಸ್ಯೆಯ ಪಾಡ್ಯದ ದಿವಸ ಪಾಂಡವರ ಮೂರ್ತಿಯನ್ನು ಸೆಗಣೆಯಿಂದ ಮಾಡಿ ಪೂಜಿಸುವುದು ಧಾರ್ಮಿಕ ಹಿನ್ನೆಲೆಯಾಗಿದೆ.

ದೀಪಾವಳಿ ಅಮವಾಸ್ಯೆ ಮರು ದಿನ ಪಾಡ್ಯದಂದು ಸೆಗಣಿಯಿಂದ ಪಾಂಡವರು ಎಂದು ಐದು ಮೂರ್ತಿಗಳನ್ನು ಮಾಡಿ ಅದಕ್ಕೆ ಉತ್ರಾಣಿ ಕಡ್ಡಿ,ಹೊನ್ನಬರಗಿ ಹೂ, ಅಣ್ಣಿ ಹೂ ಸೇರಿದಂತೆ ವಿವಿಧ ರೀತಿಯ ಹೂಗಳಿಂದ ಅಲಂಕಾರ ಮಾಡುತ್ತಾರೆ. ಸುಣ್ಣದಿಂದ ಪಾಂಡವರು ಬರುವ ದಾರಿಗೆ ಸಣ್ಣ ಸಣ್ಣ ಹೆಜ್ಜೆಗಳ ಗುರುತು ಸಹ ಮಾಡಿ ಪೂಜೆ ಸಲ್ಲಿಸುತ್ತಾರೆ.

ದನದ ಕೊಟ್ಟಿಗೆಯಲ್ಲಿಪೂಜೆ:
ಸೆಗಣಿಯಿಂದ ತಯಾರಾದ ಮೂರ್ತಿಗಳನ್ನು ಬಾಗಿಲು ಹಾಗೂ ದನದ ಕೊಟ್ಟಿಗೆಗಳಲ್ಲಿಇಟ್ಟು ಪೂಜಿಸುತ್ತಾರೆ. ಇದಕ್ಕೆ ಕಾರಣವೆಂಬಂತೆ ಗೋವುಗಳು ನಡೆದ ಹೆಜ್ಜೆಯನ್ನು ಸಹ ಸುಣ್ಣದಿಂದ ಹಾಕಿ ಬಾಗಿಲನಿಂದ ದನದ ಕೊಟ್ಟಿಗೆಯವರೆಗೂ ಹೆಜ್ಜೆಯ ಗುರುತು ಹಾಕಿ ಅವುಗಳನ್ನು ಪೂಜಿಸುವುದು ಸಂಪ್ರದಾಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ