ಆ್ಯಪ್ನಗರ

ಮಳೆ ಮಲ್ಲಪ್ಪನಿಗೆ ವಿಶೇಷ ಪೂಜೆ

ಮುಂಡರಗಿ: ಹಲವು ವರ್ಷಗಳಿಂದ ಮುಂಡರಗಿ ಸೇರಿದಂತೆ ತಾಲೂಕಿನಲ್ಲಿ ಮಳೆ ಬಾರದ ಹಿನ್ನಲೆಯಲ್ಲಿ ಜೂ.21 ರಂದು ಬೆಳಗ್ಗೆ 10 ಕ್ಕೆ ಮಳೆ ಮಲ್ಲಪ್ಪನಿಗೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ.

Vijaya Karnataka 19 Jun 2019, 5:00 am
ಮುಂಡರಗಿ: ಹಲವು ವರ್ಷಗಳಿಂದ ಮುಂಡರಗಿ ಸೇರಿದಂತೆ ತಾಲೂಕಿನಲ್ಲಿ ಮಳೆ ಬಾರದ ಹಿನ್ನಲೆಯಲ್ಲಿ ಜೂ.21 ರಂದು ಬೆಳಗ್ಗೆ 10 ಕ್ಕೆ ಮಳೆ ಮಲ್ಲಪ್ಪನಿಗೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ.
Vijaya Karnataka Web special worship for rain mallappa
ಮಳೆ ಮಲ್ಲಪ್ಪನಿಗೆ ವಿಶೇಷ ಪೂಜೆ


30 ವರ್ಷದಿಂದ ಮುಂಡರಗಿಯಲ್ಲಿ ಮಳೆ ಮಲ್ಲಪ್ಪನಿಗೆ ಪೂಜೆ ಮತ್ತು ಪ್ರಸಾದ ವ್ಯವಸ್ಥೆ ಮಾಡಿರಲಿಲ್ಲ. ಇದೀಗ 8-10 ವರ್ಷಗಳಿಂದ ಮಳೆಯಾಗದೇ ಭೀಕರ ಬರಗಾಲ ಎದುರಾದ ಕಾರಣ ಮಳೆಗಾಗಿ ಮಳೆ ಮಲ್ಲಪ್ಪನ ಪೂಜೆ ಹಾಗೂ ಪ್ರಸಾದ ವಿತರಣೆ ಮಾಡಲಾಗುತ್ತಿದೆ ಎಂದು ಸಂಘಟಿಕರು ತಿಳಿಸಿದ್ದಾರೆ.

ಅಂದು ಬೆಳಗ್ಗೆ 10 ಕ್ಕೆ ಕೋಟೆ ಭಾಗದ ಹನುಮಂತ ದೇವರ ದೇವಸ್ಥಾನದಿಂದ ಕಡ್ಲಿಪೇಟೆಯಲ್ಲಿರುವ ಮಳಿ ಮಲ್ಲಪ್ಪನ ಗದ್ದುಗೆ ವರೆಗೆ 6-8 ಜನ ಗುರ್ಜಿಗಳನ್ನು ಮಾಡಿ ಅವರಿಗೆ ಪಟ್ಟಣದ ತುಂಬೆಲ್ಲ ನೀರುಹಾಕಿ ಮೆರವಣಿಗೆ ಮಾಡುತ್ತ ಹೋಗಲಾಗುವುದು.ಅಂದು ಪಟ್ಟಣದಲ್ಲಿ ವಾರ ಮಾಡಬೇಕು.ಗ್ರಾಮದಲ್ಲಿರುವ ಗ್ರಾಮ ದೇವತೆಗೆ ಉಡಿ ತುಂಬುವ ಕಾರ್ಯಕ್ರಮ ಮಾಡಬೇಕು.

ಅಂದು ಜಮೀನು ಕೆಲಸಕ್ಕೆ ಹೋಗುವಂತಿಲ್ಲ, ಗಳೇ ಹೂಡುವಂತಿಲ್ಲ, ಮನೆಯಲ್ಲಿ ರೊಟ್ಟಿ ಮಾಡುವಂತಿಲ್ಲ. ಕುಟ್ಟುವುದು, ಬೀಸುವುದು ಮಾಡುವಂತಿಲ್ಲ ಎಂದು ಸಂಯೋಜಕರಾದ ಶಿವಪ್ಪ ಚಿಕ್ಕಣ್ಣವರ, ರುದ್ರಪ್ಪ ಲದ್ದಿ, ವೈ.ಎನ್‌.ಗೌಡರ, ಭೀಮಣ್ಣ ಆರೇರ, ಕಿಟ್ಟಪ್ಪ ಮೋರನಾಳ,ಯಲ್ಲಪ್ಪ ಕುಕನೂರ, ನೀಲಪ್ಪ ಚಿಕ್ಕಣ್ಣವರ, ಈರಪ್ಪ ಕೋಳಿ ಇತರರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ