ಆ್ಯಪ್ನಗರ

ಸಾಯಿಬಾಬಾ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ

ಮುಂಡರಗಿ : ಇಲ್ಲಿಯ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ ನಡೆದವು. ನೂರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಪೂಜಾ ಕಾರ್ಯದಲ್ಲಿ ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾದರು

Vijaya Karnataka 25 Aug 2019, 5:00 am
ಮುಂಡರಗಿ : ಇಲ್ಲಿಯ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ ನಡೆದವು. ನೂರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಪೂಜಾ ಕಾರ್ಯದಲ್ಲಿ ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾದರು
Vijaya Karnataka Web GDG-24MDR6 SAI TEMP


ಕಾಕಡಾರತಿ, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ರುದ್ರಾಭಿಷೇಕ, ಗರಿಕಾರ್ಚನೆ ಅಲಂಕಾರ, ಕುಂಕುಮಾರ್ಚನೆ, ಸಹಸ್ರ ಬಿಲ್ವಾರ್ಚನೆ, ಸಂಕಲ್ಪ ಕಾಯಿಪೂಜೆ ಜೊತೆಗೆ ಶ್ರೀ ಕೃಷ್ಣನ ತೊಟ್ಟಿಲೋತ್ಸವ ಮಾಡಲಾಯಿತು. ಮಧ್ಯಾಹ್ನ ಭಜನೆ ಮಹಾ ಮಂಗಳಾರತಿ ನಡೆಯಿತು. ದೇವಸ್ಥಾನ ಅರ್ಚಕ ವಿ.ಸಿ.ಜೋಶಿ, ಜಯಣ್ಣ ಪಾಶಿ ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು. ಸರ್ವ ಭಕ್ತರು ದೇವಸ್ಥಾನದಿಂದ ಅನ್ನಸಂತರ್ಪಣೆ ಮಾಡಲಾಯಿತು.

ಅಮಿತ್‌ ಶೇಟ್‌, ನಿಂಗನಗೌಡ ಗೌಡರ, ರತ್ನಾಬಾಯಿ ಕಪಟಗರ್‌, ಗಂಗಮ್ಮ ಹಳ್ಳಿಕೇರಿ,ಶರಣಪ್ಪ ಗದಗ, ಸುಮಾ ಕುಂಬಾರ, ಸಂಜನಾ ಕಪಟಗರ್‌, ಸರೋಜಾ ವಾಲಿಕಾರ, ಅಂಜಲಿ ಉಳ್ಳಾಗಡ್ಡಿ, ಅಕ್ಕಮ್ಮ ಬಂಡೆಣ್ಣವರ, ಉಮಾ ಜಾಗಟಗೇರಿ, ರೇಣುಕಾ ಶಿರಹಟ್ಟಿ, ಕಲಾವತಿ ಜಾಗಟಗೇರಿ, ವಿದ್ಯಾಶ್ರೀ ಕುಕನೂರ, ಗಣೇಶ ಕಾಂಬಳೆ, ಸುರೇಶ ಭೋಸ್ಲೆ,ಅಂದಪ್ಪ ಕುಂಬಾರ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ