ಆ್ಯಪ್ನಗರ

ಯೋಗಿರಾಜ ಮಹಾರಾಜರ ಆರಾಧನೆ ಆರಂಭ

ಲಕ್ಕುಂಡಿ: ಯೋಗ ಸಾಧಕ, ಸದ್ಗುರು ಯೋಗಿರಾಜ ಮಹಾರಾಜರ ಆರಾಧನೆ ಮಹೋತ್ಸವವು ಇಲ್ಲಿಯ ವಿದ್ಯಾ ಶಂಕರ ದೇವಸ್ಥಾನದಲ್ಲಿಶ್ರದ್ಧಾ ಭಕ್ತಿಯೊಂದಿಗೆ ಯೋಗಿರಾಜರ ಪಾದುಕಾ ಸ್ಥಾಪನೆಯೊಂದಿಗೆ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸುವುದರೊಂದಿಗೆ ಭಾನುವಾರ ಬೆಳಗ್ಗೆ ಆರಂಭವಾಯಿತು.

Vijaya Karnataka 25 Nov 2019, 5:11 pm
ಲಕ್ಕುಂಡಿ: ಯೋಗ ಸಾಧಕ, ಸದ್ಗುರು ಯೋಗಿರಾಜ ಮಹಾರಾಜರ ಆರಾಧನೆ ಮಹೋತ್ಸವವು ಇಲ್ಲಿಯ ವಿದ್ಯಾ ಶಂಕರ ದೇವಸ್ಥಾನದಲ್ಲಿಶ್ರದ್ಧಾ ಭಕ್ತಿಯೊಂದಿಗೆ ಯೋಗಿರಾಜರ ಪಾದುಕಾ ಸ್ಥಾಪನೆಯೊಂದಿಗೆ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸುವುದರೊಂದಿಗೆ ಭಾನುವಾರ ಬೆಳಗ್ಗೆ ಆರಂಭವಾಯಿತು.
Vijaya Karnataka Web start of worship of yogiraja maharajas
ಯೋಗಿರಾಜ ಮಹಾರಾಜರ ಆರಾಧನೆ ಆರಂಭ


ಗದಗ ನಗರದ ದತ್ತಂಭಟ್ಟ ತೆಂಬದಮನಿ ಹಾಗೂ ಅಪ್ಪಣ್ಣ ಸೊರಟೂರ ನೇತೃತ್ವದಲ್ಲಿವಿದ್ಯಾಶಂಕರ ದೇವರಿಗೆ ರುದ್ರಾಭಿಷೇಕ, ಗಣಹೋಮ ಕಾರ್ಯಕ್ರಮ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ನಂತರ ಸುಗಮ ಸಂಗೀತದೊಂದಿಗೆ ಹಾಡಿದ ಬೆಂಗಳೂರಿನ ವಸುಧೇಂದ್ರ ವೈದ್ಯ ಭಕ್ತಿಗೀತೆಗಳು ಮನ ಸೆಳೆಯಿತು. ನಂತರ ಈಶ್ವರದಾಸ ಕೊಪ್ಪೇಸರ ಅವರ ಹರಿಕಥೆ ಮಂತ್ರಮುಗ್ಧರನ್ನಾಗಿಸಿತು.

ಸಂಜೆ ದೀಪೋತ್ಸವ ನಂತರ ಗುರುವಿನಹಳ್ಳಿಯ ವಿಶ್ವನಾಥ ಕುಲಕರ್ಣಿಯವರ ಗಮಕವಾಚನ ಹಾಗೂ ಕುರ್ತುಕೋಟಿಯ ಕೀರ್ತನಕೇಸರಿ ದಿಗಂಬರ ಶಾಸ್ತ್ರೀಗಳ ಕೀರ್ತನೆ ಭಕ್ತರನ್ನು ಆಕರ್ಷಿಸಿತು. ನಂತರ ಒಂದು ಘಂಟೆಗಳ ಕಾಲ ಧಾರವಾಡದ ಶಂಕರ ಪುರೋಹಿತ ಅವರಿಂದ ಭಕ್ತಿ ಗೀತೆ , ಭಾವಗೀತೆಗಳ ಸಂಗೀತ ಕಾರ್ಯಕ್ರಮದೊಂದಿಗೆ ಮೊದಲನೆ ದಿನದ ಕಾರ್ಯಕ್ರಮ ಮುಕ್ತಾಯವಾಯಿತು. ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ