ಆ್ಯಪ್ನಗರ

ಮಂಗಳೂರಿನಲ್ಲಿ ಕನ್ನಡ ವೈದ್ಯ ಬರಹಗಾರರ ರಾಜ್ಯ ಸಮ್ಮೇಳನ

ಮುಂಡರಗಿ : ಆಂಗ್ಲ ಭಾಷೆಯಲ್ಲಿರುವ ವೈದ್ಯ ವಿಜ್ಞಾನವನ್ನು ಜನಸಾಮಾನ್ಯರು ಮತ್ತು ವೈದ್ಯರಿಗೆ ಕನ್ನಡದಲ್ಲಿ ತಿಳಿಸುವ ಉದ್ದೇಶದಿಂದ ಭಾರತೀಯ ವೈದ್ಯಕೀಯ ಸಂಘ(ಐಎಂಎ)ವು ಕನ್ನಡ ಬರಹಗಾರರ ಬಳಗದ ಆಶ್ರಯದಲ್ಲಿ ಮಂಗಳೂರಿನ ಐಎಂಎ ಎ.ವಿ.ರಾವ್‌ ಸಭಾಂಗಣದಲ್ಲಿ ಮೇ 26 ರಂದು ಕನ್ನಡ ವೈದ್ಯ ಬರಹಗಾರರ ಪ್ರಥಮ ರಾಜ್ಯ ಸಮ್ಮೇಳನ ಹಾಗೂ ಶ್ರೇಷ್ಠ ವೈದ್ಯ ಸಾಹಿತಿ(2018) ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿದೆ ಎಂದು ರಾಜ್ಯ ಐಎಂಎ ಅಧ್ಯಕ್ಷ ಡಾ.ಅನ್ನದಾನಿ ಮೇಟಿ ತಿಳಿಸಿದರು.

Vijaya Karnataka 22 May 2019, 5:00 am
ಮುಂಡರಗಿ : ಆಂಗ್ಲ ಭಾಷೆಯಲ್ಲಿರುವ ವೈದ್ಯ ವಿಜ್ಞಾನವನ್ನು ಜನಸಾಮಾನ್ಯರು ಮತ್ತು ವೈದ್ಯರಿಗೆ ಕನ್ನಡದಲ್ಲಿ ತಿಳಿಸುವ ಉದ್ದೇಶದಿಂದ ಭಾರತೀಯ ವೈದ್ಯಕೀಯ ಸಂಘ(ಐಎಂಎ)ವು ಕನ್ನಡ ಬರಹಗಾರರ ಬಳಗದ ಆಶ್ರಯದಲ್ಲಿ ಮಂಗಳೂರಿನ ಐಎಂಎ ಎ.ವಿ.ರಾವ್‌ ಸಭಾಂಗಣದಲ್ಲಿ ಮೇ 26 ರಂದು ಕನ್ನಡ ವೈದ್ಯ ಬರಹಗಾರರ ಪ್ರಥಮ ರಾಜ್ಯ ಸಮ್ಮೇಳನ ಹಾಗೂ ಶ್ರೇಷ್ಠ ವೈದ್ಯ ಸಾಹಿತಿ(2018) ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿದೆ ಎಂದು ರಾಜ್ಯ ಐಎಂಎ ಅಧ್ಯಕ್ಷ ಡಾ.ಅನ್ನದಾನಿ ಮೇಟಿ ತಿಳಿಸಿದರು.
Vijaya Karnataka Web state conference of kannada physician writers at mangalore
ಮಂಗಳೂರಿನಲ್ಲಿ ಕನ್ನಡ ವೈದ್ಯ ಬರಹಗಾರರ ರಾಜ್ಯ ಸಮ್ಮೇಳನ


ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಕುರಿತು ವಿವರಿಸಿದ ಅವರು, ''ದೇಶದಲ್ಲಿಯೇ ಪ್ರಥಮ ಬಾರಿಗೆ ಪ್ರಾದೇಶಿಕ ಭಾಷೆಯಲ್ಲಿ ನಡೆಯುತ್ತಿರುವ ಈ ವೈದ್ಯ ಬರಹಗಾರರ ಸಮ್ಮೇಳನದಲ್ಲಿ 300 ವೈದ್ಯರು ಪಾಲ್ಗೊಳ್ಳುತ್ತಾರೆ'' ಎಂದು ತಿಳಿಸಿದರು.

ಬೆಂಗಳೂರು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಎಸ್‌.ಸಚ್ಚಿದಾನಂದ ಉದ್ಘಾಟಿಸುವರು. ಮೈಸೂರಿನ ಎಸ್‌.ಪಿ.ಯೋಗಣ್ಣ ಸಮ್ಮೇಳನ ಸರ್ವಾಧ್ಯಕ್ಷ ರಾಗಿರುವರು. ಕಸಾಪ ರಾಜ್ಯಾಧ್ಯಕ್ಷ ಡಾ.ಮನು ಬಳಿಗಾರ ಅತಿಥಿಗಳಾಗಿ ಪಾಲ್ಗೊಂಡು ಆಶಯ ಭಾಷಣ ಮಾಡುವರು. ದ.ಕನ್ನಡ ಜಿಲ್ಲೆ ಕಸಾಪ ಅಧ್ಯಕ್ಷ ಪ್ರದೀಪಕುಮಾರ ಕಲ್ಕೂರ್‌, ಡಾ.ಸುಧೀಂದ್ರರಾವ್‌ ಎಂ., ಡಾ.ಶ್ರೀನಿವಾಸ ಎಸ್‌., ಡಾ. ಕರವೀರಪ್ರಭು ಕ್ಯಾಲಕೊಂಡ, ಡಾ.ಅಣ್ಣಯ್ಯ ಕುಲಾಲ್‌ ಉಳ್ತೂರು ಇತರರು ಪಾಲ್ಗೊಳ್ಳುವರು ಎಂದರು.

''ಕಾರ್ಯಕ್ರಮದಲ್ಲಿ 'ವೈದ್ಯರು, ವೈದ್ಯಕಿಯ ಸೇವೆ ಮತ್ತು ತಲ್ಲಣಗಳು', 'ಕನ್ನಡ ಆರೋಗ್ಯ ಸಾಹಿತ್ಯದ ಮೈಲುಗಲ್ಲುಗಳು', 'ವೈದ್ಯಕೀಯ ಕನ್ನಡ ಸಾಹಿತ್ಯ ಅಂದು ಇಂದು ಮುಂದು', 'ವೈದ್ಯರು ಮತ್ತು ಪತ್ರಿಕಾ ಅಂಕಣಗಳು', 'ವೈದ್ಯಕೀಯ ವೃತ್ತಿಯಲ್ಲಿ ವಿನೋದ ಸನ್ನಿವೇಶಗಳು', 'ಮಹಿಳಾ ಹಾಗೂ ಮಕ್ಕಳ ಸಾಹಿತ್ಯದಲ್ಲಿ ವೈದ್ಯರ ಸೇವೆ', 'ಕನ್ನಡದಲ್ಲಿ ರೋಗ ಮಾಹಿತಿ, ಮಾರ್ಗದರ್ಶನ, ಒಪ್ಪಿಗೆ, ಅನುಮತಿ ದಾಖಲೀಕರಣ ಇತ್ಯಾದಿ ಒಂದು ಪ್ರಯತ್ನ' ಗೋಷ್ಠಿಗಳು ನಡೆಯಲಿವೆ. ನಂತರ ಸಮಾರೋಪ, ಬಹುಮಾನ ವಿತರಣೆ ನಡೆಯಲಿದೆ'' ಎಂದು ಡಾ. ಮೇಟಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ